ಹೊಸಬೆಳಕು

ಛೇ ಛೇ ಅಸ್ತವ್ಯಸ್ತ ಅಶ್ಲೀಲ
ಹಿಂಸೆ ಕ್ರೌರ್ಯದ ಖಂಡನೆ

ಉಪ್ಪುಂಡ ದೇಹದ
ಬಯಕೆಯ ನಾಗಾಲೋಟಕೆ
ತಡೆವುಂಟೆ?

ತರುಣ ತರುಣಿಯರ ಸುಪ್ತಬಯಕೆ
ಹೆಪ್ಪುಗಟ್ಟಿ ತಡೆಯದೇ
ಅಡ್ಡ ಹಿಡಿದ ಮನ
ಪಥ ಭ್ರಮಣೆಯಾಗಿ ರಸ್ತೆಗಿಳಿದು
ಹಾಕಿತು ಪ್ರೇಮದ ಸೋಗು

ಬಿಗಿ ಜಿನ್ ಮಿನಿಸ್ಕರ್ಟ್
ತೊನೆಯುವ ಮುಖ
ಕುಣಿಯುವ ಎದೆ ಕೆಂದುಟಿ
ಕೆದಕಿ, ಕುಣಿಸಿ ಒಳಗೊಳಗೆ
ಬೆಂಕಿ ಹೊತ್ತಿಸಿ
ಮನದಲಿ ಬಿರುಕು ಮೂಡಿಸಿ
ಅತ್ಯಾಚಾರ ಕೀಳು ಕಾಮದ
ಆಕ್ಟೋಪಸ್ ಹಿಡಿತದಲಿ
ತೀವ್ರ ಸಂವೇದನೆಯ
ಕುಡಿತ, ಬ್ಲೂಫಿಲಂ, ಡ್ರಗ್ಸ್
ವೇಶ್ಯಾವಾಟಿಕೆಗೆ ಬಲಿಯಾಗಿ
ಆದರ್ಶದ ಭದ್ರಕೋಟೆ
ಬಿರುಕು ಬಿಟ್ಟು
ದುರಂತಕ್ಕಪ್ಪುವುದು.

ಹೆಣ್ಣು ಹೊನ್ನು ಮಣ್ಣು
ಮಾಯೆಯೋ? ಅಲ್ಲ;
ಹಿಡಿತವಿಲ್ಲದಾ ಮನದ
ಆಸೆಯೇ ಮಾಯೆ.

ಕೀಳು ಕಾಮನೆಗಳ ಹತ್ತಿಕ್ಕಿದರೆ
ಆತ್ಮವಿಶ್ವಾಸದ ಹೊಸ ಬೆಳಕು
ಬಂದೀತು ಮೂಡಿ
ನಿರ್ಮಾಣವಾದೀತು
ಸಮಾಜದ ಸುಭದ್ರ ಕೋಟೆ
*****
೨೬-೧೦-೨೦೦೮ ರ ಕರ್‍ಮವೀರದಲ್ಲಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀವನದುದ್ದ
Next post ಯಾರು?

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

cheap jordans|wholesale air max|wholesale jordans|wholesale jewelry|wholesale jerseys