ಅವಲಂಬನ

ನೋಡಿ ಕೊಂಡು ಬರಲಿ
ಯಾರಿಗಾದರು ಸಹಜವಲ್ಲವೆ
ಹೆತ್ತು ಹೊತ್ತವರ ತನ್ನೆಲ್ಲ ಹತ್ತಿರದವರ ನೋಡ ಬೇಕೆಂಬ ಆಸೆ.
ಹೊತ್ತು ತರಲಿ ನೆನಪಿನ ಬುತ್ತಿಯನು
ನೆನಪು ಉತ್ತೇಜನಕಾರಿಯಲ್ಲವೆ!

ನಾವಾದರೆ
ಎಲ್ಲೆಲ್ಲೋ ತಿರುಗಿ ಬರುವೆವು
ಅವಳಿನ್ನೆಲ್ಲಿಗೆ ಹೋಗಿ ಬರಬೇಕು
ಎಲ್ಲರಿಗೂ ಸುಸ್ತು-ಸಾಕು ಇರುವುದೇ ತಾನೆ!

ನಿಜ,
ನಾನು ಬೇಡವೆಂದರೆ ಹೋಗಲಾರಳು
ಸುಮ್ಮನಾಗುವಳು
ಹಾಗೆಯೆ… ಆಮೇಲಿನದ ಕೂಡ ನಾನು ಸ್ವಲ್ಪ ವಿಚಾರ
ಮಾಡಬೇಕು-

ಕಳಿಸದಿದ್ದರೆ…
ಮೌನ ಮನೆಯನಾಳತೊಡಗುವುದು
ಮಾತು ಕತೆಯೆ ನಿಂತು ಹೋಗಬಹುದು
ಒಟ್ಟಾರೆ ಮನೆಯ ಲಕ್ಷಣವೇ ಕೆಟ್ಟು ಹೋಗಿ
ಸೂತಕವು ಮನೆಯಲ್ಲಿ ಬೀಡು ಬಿಡ ಬಹುದು
ನಿರ್ಜೀವ ಪಾತ್ರೆಗಳಿಗೂ ಜೀವ ಬರಬಹುದು.
ಮಾತು, ಗೊಣಗು, ಗುಸ್ಸದ ರೂಪತಾಳಿ
ಇರುಸು-ಮುರುಸು ಸರ್ವೇ ಸಾಮಾನ್ಯವಾಗ ಬಹುದು.
ಹೋಗಿ ಬರಲಿ
ಎಷ್ಟ ದಿನಗಳು ಮಹಾ!
ಅತ್ತಲೇ ಏನು ಹೋಗುವುದಿಲ್ಲವಲ್ಲ
ಅವಳ್ಹೋದರೇನು ಊರು, ಮನೆಯನ್ನು ಜೊತೆಯಲ್ಲಿ
ಒಯ್ಯುವಳೇನು?

ಸಮಸ್ಯೆ
ಊಟ ತಿಂಡಿಯದು ತಾನೆ!
ಅಲ್ಲೋ, ಇಲ್ಲೋ, ಎಲ್ಲೋ ಒಂದು ಕಡೆ ತಿಂದರಾಯಿತು
ಅವಳಿಲ್ಲದಿದ್ದರೇನು
ನನ್ನಷ್ಟಕ್ಕೆ ನಾನು ಬದುಕಲಾರೆನೇನು?
ಇವಳೇ ಇದ್ದಳೇನು
ನನಗೆ ತಡಾಯ ಮೊದಲು?
ಹಾಯಾಗಿ ಒಂದೆರಡುದಿನ
ಸುಖವಾದ ಬ್ರಹ್ಮಚಾರಿ ಜೀವನವ ನೆನೆಪಿಸಿ ಕೊಳ್ಳಬಹುದೆಂದು
ಉಢಾಫೆ ವಿಚಾರದಲ್ಲಿ ಉದಾರನಾಗಿ
‘ಹೋಗಿ ಬಾ’ ಎಂದೆ
ಪೇಚಿಗೆ ಸಿಕ್ಕಿಕೊಂಡೆ.

ಸಣ್ಣದು, ಪುಟ್ಟದು, ನನ್ನದೆಲ್ಲಕ್ಕು ಅವಳ ಕಡೆ ನೋಡಿ
ಅಭ್ಯಾಸವಾಗಿದ್ದ ನನಗೆ
ಅದು ಬೇಕು!
ಇದು ಬೇಡ! ವೆನಿಸಿಬಿಟ್ಟಿತು ಬೇಗ.

ಎಲ್ಲಾ ಇದ್ದು, ಏನೂ ಇಲ್ಲದಂತಾಗಿ
ಒಂಟಿ, ಒಂಟಿಯೆನಿಸಿ
ಅವಳಿಲ್ಲದ ಕೊರತೆ ದೊಡ್ಡದಾಗಿ ಬೆಳೆದು
ಬದುಕು, ಅನುಕ್ಷಣವು ದುಸ್ಸಹನೀಯ ವೆನಿಸಿ ಬಿಟ್ಟೋಯ್ತು
ಇದು ಹೀಗೆ ಮುಂದುವರಿದರೆ
ಹತ್ತಿರದಿ ನನಗೆ ಹುಚ್ಚು ಹಿಡಿಯುವುದು ಖಾತರಿ
ಯೆಂಬ ಭಯವಾವರಿಸ ತೊಡಗಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನಾಗುವೆ?
Next post ಭಾವ ಇರದ ಕವಿತೆ

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

cheap jordans|wholesale air max|wholesale jordans|wholesale jewelry|wholesale jerseys