ಏನಾಗುವೆ?

ಇಷ್ಟ ದೇವತೆಯೆಂದು
ಅಷ್ಟ ಸ್ತೋತ್ರವ ಹಾಡಿ
ಧನ-ಕನಕ ಅರ್ಪಿಸಿ
ಪೂಜಿಸಿದವರೆ…

ಎಲ್ಲಿ ನಾರಿಯರು
ಪೂಜಿಸಲ್ಪಡುತ್ತಾರೋ
ಅಲ್ಲಿ ದೇವತೆಗಳ ಹಾಜರಿ
ಪ್ರಮಾಣಿಸಿದವರೇ…

‘ತಾಯಿಗಿಂತ ದೇವರಿಲ್ಲ…
ಜನನಿ ತಾನೆ ಮೊದಲ ಗುರುವು’
ಕಂಠಪಾಠ ಒಪ್ಪಿಸಿ
ಉದ್ದಂಡ ನಮಸ್ಕರಿಸಿ
ಧನ್ಯರಾದವರೇ…

ಶಿಲೆ, ಕಲೆ, ಕಾವ್ಯಗಳಲ್ಲಿ
ಬಣ್ಣಿಸಿ, ಮಾತುಗಳ
ಮಹಾಪೂರ ಹರಿಸಿ
ಸಂಭ್ರಮಿಸಿದವರೇ…

ಕಟ್ಟು-ಕಟ್ಟಳೆ ವಿಧಿಸಿ
ನಿಷೇಧಗಳ ಹೊರೆ ಹರಿಸಿ
ಕಣ್ಗಾವಲಿರಿಸಿ ಕಾಪಾಡಿದ
ಧರ್ಮ ಸಂರಕ್ಷಕರೇ…

ಕಲ್ಲು, ಮಣ್ಣು, ನೀರು
ಗಿಡ, ಮರ, ಹೂವು, ಹಣ್ಣು
ಪಶು-ಪಕ್ಷಿ, ಕ್ರಿಮಿ-ಕೀಟಗಳಲ್ಲಿ
ನನ ಕಂಡು ಕರಗಿದ
ಪವಿತ್ರಾತ್ಮರೇ…

ಕಟ್ಟ ಕಡೆಯ ಮನುಷ್ಯನನು
ಮುಟ್ಟಬಾರದು
ಹೆಣ್ಣು ಹುಟ್ಟಬಾರದು
ಇದಲ್ಲವೆ ಅಲಿಖಿತ ಅನುಶಾಸನ?
ರಕ್ತಗತವಾಗಿ ಹರಿದು
ಉಳಿದಿರುವ ಮರಣಶಾಸನ!

ಮುಟ್ಟುವ ಹಕ್ಕಿಗೆ
ಹುಟ್ಟುವ ಹಕ್ಕಿಗೆ
ಅಂತಃಸಾಕ್ಷಿಯೇ ಮೈಯಾಗಿ
ಅಂತಃಕರಣವೇ ಕೈಯಾಗಿ
ರುಜು ಮಾಡಬೇಕಿದೆ.

ನಾನಳಿದು ಹೇಗೋ ಉಳಿದು
ನಮ್ರವಾಗಿ ಕೆಳಗಿಳಿದು
ಬೆಟ್ಟದಡಿ ಹುಲ್ಲಾಗಿ
ಗಿಡದಡಿ ಕಲ್ಲಾಗಿ ಬಾಳುವೆ.

ಹೇಳು ಏನಾಗುವೆ
ಹೇಳು…ನೀ ಏನಾಗುವೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಡೆದು ಹೋಗದ ಗೊಂಬೆ
Next post ಅವಲಂಬನ

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

cheap jordans|wholesale air max|wholesale jordans|wholesale jewelry|wholesale jerseys