ಏನಾಗುವೆ?

ಇಷ್ಟ ದೇವತೆಯೆಂದು
ಅಷ್ಟ ಸ್ತೋತ್ರವ ಹಾಡಿ
ಧನ-ಕನಕ ಅರ್ಪಿಸಿ
ಪೂಜಿಸಿದವರೆ…

ಎಲ್ಲಿ ನಾರಿಯರು
ಪೂಜಿಸಲ್ಪಡುತ್ತಾರೋ
ಅಲ್ಲಿ ದೇವತೆಗಳ ಹಾಜರಿ
ಪ್ರಮಾಣಿಸಿದವರೇ…

‘ತಾಯಿಗಿಂತ ದೇವರಿಲ್ಲ…
ಜನನಿ ತಾನೆ ಮೊದಲ ಗುರುವು’
ಕಂಠಪಾಠ ಒಪ್ಪಿಸಿ
ಉದ್ದಂಡ ನಮಸ್ಕರಿಸಿ
ಧನ್ಯರಾದವರೇ…

ಶಿಲೆ, ಕಲೆ, ಕಾವ್ಯಗಳಲ್ಲಿ
ಬಣ್ಣಿಸಿ, ಮಾತುಗಳ
ಮಹಾಪೂರ ಹರಿಸಿ
ಸಂಭ್ರಮಿಸಿದವರೇ…

ಕಟ್ಟು-ಕಟ್ಟಳೆ ವಿಧಿಸಿ
ನಿಷೇಧಗಳ ಹೊರೆ ಹರಿಸಿ
ಕಣ್ಗಾವಲಿರಿಸಿ ಕಾಪಾಡಿದ
ಧರ್ಮ ಸಂರಕ್ಷಕರೇ…

ಕಲ್ಲು, ಮಣ್ಣು, ನೀರು
ಗಿಡ, ಮರ, ಹೂವು, ಹಣ್ಣು
ಪಶು-ಪಕ್ಷಿ, ಕ್ರಿಮಿ-ಕೀಟಗಳಲ್ಲಿ
ನನ ಕಂಡು ಕರಗಿದ
ಪವಿತ್ರಾತ್ಮರೇ…

ಕಟ್ಟ ಕಡೆಯ ಮನುಷ್ಯನನು
ಮುಟ್ಟಬಾರದು
ಹೆಣ್ಣು ಹುಟ್ಟಬಾರದು
ಇದಲ್ಲವೆ ಅಲಿಖಿತ ಅನುಶಾಸನ?
ರಕ್ತಗತವಾಗಿ ಹರಿದು
ಉಳಿದಿರುವ ಮರಣಶಾಸನ!

ಮುಟ್ಟುವ ಹಕ್ಕಿಗೆ
ಹುಟ್ಟುವ ಹಕ್ಕಿಗೆ
ಅಂತಃಸಾಕ್ಷಿಯೇ ಮೈಯಾಗಿ
ಅಂತಃಕರಣವೇ ಕೈಯಾಗಿ
ರುಜು ಮಾಡಬೇಕಿದೆ.

ನಾನಳಿದು ಹೇಗೋ ಉಳಿದು
ನಮ್ರವಾಗಿ ಕೆಳಗಿಳಿದು
ಬೆಟ್ಟದಡಿ ಹುಲ್ಲಾಗಿ
ಗಿಡದಡಿ ಕಲ್ಲಾಗಿ ಬಾಳುವೆ.

ಹೇಳು ಏನಾಗುವೆ
ಹೇಳು…ನೀ ಏನಾಗುವೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಡೆದು ಹೋಗದ ಗೊಂಬೆ
Next post ಅವಲಂಬನ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…