Home / ಕವನ / ಕವಿತೆ / ಏನಾಗುವೆ?

ಏನಾಗುವೆ?

ಇಷ್ಟ ದೇವತೆಯೆಂದು
ಅಷ್ಟ ಸ್ತೋತ್ರವ ಹಾಡಿ
ಧನ-ಕನಕ ಅರ್ಪಿಸಿ
ಪೂಜಿಸಿದವರೆ…

ಎಲ್ಲಿ ನಾರಿಯರು
ಪೂಜಿಸಲ್ಪಡುತ್ತಾರೋ
ಅಲ್ಲಿ ದೇವತೆಗಳ ಹಾಜರಿ
ಪ್ರಮಾಣಿಸಿದವರೇ…

‘ತಾಯಿಗಿಂತ ದೇವರಿಲ್ಲ…
ಜನನಿ ತಾನೆ ಮೊದಲ ಗುರುವು’
ಕಂಠಪಾಠ ಒಪ್ಪಿಸಿ
ಉದ್ದಂಡ ನಮಸ್ಕರಿಸಿ
ಧನ್ಯರಾದವರೇ…

ಶಿಲೆ, ಕಲೆ, ಕಾವ್ಯಗಳಲ್ಲಿ
ಬಣ್ಣಿಸಿ, ಮಾತುಗಳ
ಮಹಾಪೂರ ಹರಿಸಿ
ಸಂಭ್ರಮಿಸಿದವರೇ…

ಕಟ್ಟು-ಕಟ್ಟಳೆ ವಿಧಿಸಿ
ನಿಷೇಧಗಳ ಹೊರೆ ಹರಿಸಿ
ಕಣ್ಗಾವಲಿರಿಸಿ ಕಾಪಾಡಿದ
ಧರ್ಮ ಸಂರಕ್ಷಕರೇ…

ಕಲ್ಲು, ಮಣ್ಣು, ನೀರು
ಗಿಡ, ಮರ, ಹೂವು, ಹಣ್ಣು
ಪಶು-ಪಕ್ಷಿ, ಕ್ರಿಮಿ-ಕೀಟಗಳಲ್ಲಿ
ನನ ಕಂಡು ಕರಗಿದ
ಪವಿತ್ರಾತ್ಮರೇ…

ಕಟ್ಟ ಕಡೆಯ ಮನುಷ್ಯನನು
ಮುಟ್ಟಬಾರದು
ಹೆಣ್ಣು ಹುಟ್ಟಬಾರದು
ಇದಲ್ಲವೆ ಅಲಿಖಿತ ಅನುಶಾಸನ?
ರಕ್ತಗತವಾಗಿ ಹರಿದು
ಉಳಿದಿರುವ ಮರಣಶಾಸನ!

ಮುಟ್ಟುವ ಹಕ್ಕಿಗೆ
ಹುಟ್ಟುವ ಹಕ್ಕಿಗೆ
ಅಂತಃಸಾಕ್ಷಿಯೇ ಮೈಯಾಗಿ
ಅಂತಃಕರಣವೇ ಕೈಯಾಗಿ
ರುಜು ಮಾಡಬೇಕಿದೆ.

ನಾನಳಿದು ಹೇಗೋ ಉಳಿದು
ನಮ್ರವಾಗಿ ಕೆಳಗಿಳಿದು
ಬೆಟ್ಟದಡಿ ಹುಲ್ಲಾಗಿ
ಗಿಡದಡಿ ಕಲ್ಲಾಗಿ ಬಾಳುವೆ.

ಹೇಳು ಏನಾಗುವೆ
ಹೇಳು…ನೀ ಏನಾಗುವೆ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...