Home / ಕವನ / ಕವಿತೆ / ಮಗನ ಭಾಗ್ಯ

ಮಗನ ಭಾಗ್ಯ

ಅಂದು ಆಡಿ ಏನು
ನಾವೇ ಮಾಡ್ಕೊಂಡು

ಲೋಕ ಕಾಣದ್ದೂಂತ
ಗೆಜ್ಜೆ ಕಟ್ಕಂಡು ಕುಣಿದೆ
ದಿನಕೊಂದು ಚೆಂದಮಾಡ್ದೆ
ಮಟ್ಟಿ ತಾಗಿ ಕೆಟ್ಟಾನಂತ
ರೆಪ್ಪೆಲಿಟ್ಟು ಜೋಕ ಮಾಡ್ದೆ
ಮುಗಿಲು ಮುಟ್ಟುತ್ತಿತ್ತು.

ಬೆಳಯೋತನಕ ಮಕ್ಕಳು
‘ಆಮೇಲೆ ಯಾರ ಮಕ್ಕಳೋ’ ಅನ್ನೋದೆ ಮರೆತೆ
ಎಗ್ಗು ತಗ್ಗು ಇಲ್ದೆ ಬೆಳೆದ
ಹುಡುಗ! ಅಂದೆ
ಒಂದು ದಿನ ಯಾವಳನ್ನೋ ಇಡಕೊಂಡೆ ಬಂದ
ನಿಮ್ಮ ಬಣವೆಗೆ ಬೆಂಕಿ ಇಕ್ಕಿದ
ಮಗ ಅಲ್ಲ! ಅಂತ ತಾಳಿಕೊಂಡೆ
ಆಸ್ತಿ, ಅಧಿಕಾರ ಕಿತ್ಕೊಂಡ
ರಾಜ ಆದ
ನೀವೂ ನಿಮ್ಮದ್ಯಾವುದೂ ತೂಕವಾಗಲಿಲ್ಲ.

ಬರು ಬರುತ್ತ
‘ಬಗಳಿದರೆ ಉಂಟು
ಇಲ್ಲದಿದ್ದರೆ ಇಲ್ಲ’ ಅನ್ನಂಗಾತು
‘ಕಾಲಧರ್ಮ’ ಅಂತ ನುಂಗಿಕೊಂಡಿರಿ

ಎಲ್ಲಿಗೆ ತೇಲಿತು ಅಂದರೆ
ತೊತ್ತಿಗೂ ಬೇಡ! ಅನ್ನಿಸಿತು ನಿಮ್ಮ ಜನ್ಮ.

ಅತ್ತಿರಿ, ಕರೆದಿರಿ,
ಹೇಳಿಸಿದಿರಿ, ಪಂಚಾಯಿತಿ ಮಾಡಿಸಿದಿರಿ
ಏನು ಬಂತು
ಒಳಗಿಲ್ಲದಿದ್ದರೆ?

‘ಗಂಡ ಕಾಡಿಸಲಿಲ್ಲ
ಅತ್ತೆ ಮಾವ ಪೀಡಿಸಲಿಲ್ಲ
ಇವ ಹೊಟ್ಟೆಗುಟ್ಟಿದವ ಎಲ್ಲಾ ಚುಕ್ತ ಮಾಡಿಬಿಟ್ಟ
ಕೆಟ್ಟವ ಇವನ ಸಂಗಡ ಯಾರು ಅಂತ’
ಮಗಳೊಬ್ಬಳ ಮನೆ ಸೇರಿಕಂಡ್ತು ಮುದುಕಿ.

ನೀನು-
‘ಮಗನ್ನ ಹಡೆದು
ಬೇರೆಯವರ ಹತ್ತಿರ ಹೋಗೋದೆ?
ಅದೂ! ಬಾಳಿ ಬದುಕಿ’ ಅಂತ ಉಳಿದೆ
ಇಗ!
ಅಡವಿ ಹುಲ್ಲು ಮಡಗಿನ ನಿರಾತು
ನೀನಾತು!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...