ಮುಟ್ಟಲಾರದವರು ಅಲ್ಲಿ

ಮುಟ್ಟಲಾರದವರು ಅಲ್ಲಿ
ತಟ್ಟಲಾರದವರು ಇಲ್ಲಿ
ಮುಟ್ಟದ ತಟ್ಟದ ಜಂಜಡದಲ್ಲಿ
ಕಟ್ಟಿತು ಉಸಿರು ಎಲ್ಲರಿಗಿಲ್ಲಿ ||ಪ||

ಬುದ್ಧಿ ಬಲದ ಶೂರರು ಅವರು
ಬೆವರು ಬಸಿವ ಧೀರರು ಇವರು
ಬುದ್ಧಿ ಬೆವರಿನ ಆಟೋಟದಲಿ
ಟಾಂಗು ಕೊಟ್ಟವರಾರು ಇಲ್ಲಿ?

ಅವರ ಕೈಯಲಿ ಅಕ್ಷರ ಅಸ್ತ್ರ
ಇವರ ಕೈಯಲಿ ಮಾತು ಮಾತ್ರ
ಅದಕೆ ಅವರಿಗೆ ಹಕ್ಕು ಪತ್ರ
ಇವರ ಕೈಯಿಗೆ ಭಿಕ್ಷಾ ಪಾತ್ರ!

ಅವರು ತಮಗೆ ತಾವೇ ಮೇಲು
ಇವರು ತಮಗೆ ತಾವೇ ಕೀಳು
ಈ ಹುಸಿ ಭಾವದ ಹೊಯ್ದಾಟದಲಿ
ಸತ್ಯವು ಆಯಿತು ಪರಾರಿ ಇಲ್ಲಿ!

ಅವರಿಗೆ ದಾನ ಧರ್ಮದ ವೈಭವ
ಇವರಿಗೆ ಬವಣೆ ದಣಿವು ಹಸಿವು
ಆದರೂ ಸನಾತನ ದೇಶ ಮಹಾನ್
ತೇಕುವ ಜನರ ಧಿಮಾಕು ಫರ್ಮಾನ್!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಗನ ಭಾಗ್ಯ
Next post ವಿಪರ್‍ಯಾಸ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

cheap jordans|wholesale air max|wholesale jordans|wholesale jewelry|wholesale jerseys