ಮುಟ್ಟಲಾರದವರು ಅಲ್ಲಿ

ಮುಟ್ಟಲಾರದವರು ಅಲ್ಲಿ
ತಟ್ಟಲಾರದವರು ಇಲ್ಲಿ
ಮುಟ್ಟದ ತಟ್ಟದ ಜಂಜಡದಲ್ಲಿ
ಕಟ್ಟಿತು ಉಸಿರು ಎಲ್ಲರಿಗಿಲ್ಲಿ ||ಪ||

ಬುದ್ಧಿ ಬಲದ ಶೂರರು ಅವರು
ಬೆವರು ಬಸಿವ ಧೀರರು ಇವರು
ಬುದ್ಧಿ ಬೆವರಿನ ಆಟೋಟದಲಿ
ಟಾಂಗು ಕೊಟ್ಟವರಾರು ಇಲ್ಲಿ?

ಅವರ ಕೈಯಲಿ ಅಕ್ಷರ ಅಸ್ತ್ರ
ಇವರ ಕೈಯಲಿ ಮಾತು ಮಾತ್ರ
ಅದಕೆ ಅವರಿಗೆ ಹಕ್ಕು ಪತ್ರ
ಇವರ ಕೈಯಿಗೆ ಭಿಕ್ಷಾ ಪಾತ್ರ!

ಅವರು ತಮಗೆ ತಾವೇ ಮೇಲು
ಇವರು ತಮಗೆ ತಾವೇ ಕೀಳು
ಈ ಹುಸಿ ಭಾವದ ಹೊಯ್ದಾಟದಲಿ
ಸತ್ಯವು ಆಯಿತು ಪರಾರಿ ಇಲ್ಲಿ!

ಅವರಿಗೆ ದಾನ ಧರ್ಮದ ವೈಭವ
ಇವರಿಗೆ ಬವಣೆ ದಣಿವು ಹಸಿವು
ಆದರೂ ಸನಾತನ ದೇಶ ಮಹಾನ್
ತೇಕುವ ಜನರ ಧಿಮಾಕು ಫರ್ಮಾನ್!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಗನ ಭಾಗ್ಯ
Next post ವಿಪರ್‍ಯಾಸ

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…