ಹಾರೈಕೆ

ಮದರಾಸು ನಗರದಲ್ಲಿ ಸೇರಿದ ೨೯ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಳಿಸಿದ ಹಾರೈಕೆ.

ದ್ರಾವಿಡಗಣ-ತ್ರಿಪದಿ, ಕುರಳು ಧಾಟಿ

೧. ಕನ್ನಡನುಡಿಪಯಿರ್ ಮುನ್ನಡೆ ತೆನೆತುಂಬಿ,
ಪೊನ್ನಡಕಿಲ್ಗಂ ಪೊನ್ನ ಕ್ಕೆ.

೨. ಬೀಡುಂ ಬಯಲ್ ಮಲೆ ಕುಡಿವಾಳ್ಕೆ ಕರ್‍ಬು ಜೇನ್
ಪಾಡುಂ ಪಿಳಿಗೆ ಮೇಣ್ ಬಿಡಿನುಡಿಯುಂ.

೩. ಬರೆವರ ಬಾಯೊಳೊಲವಿರ್‍ಕೆ, ಚೆಲುವಿರ್‍ಕೆ.
ನಲವಿರ್‍ಕೆ, ನಾಡ ಗೆಲವಿರ್‍ಕೆ.

೪. ಧರ್‍ಮದ ತಿರುಳಿರ್‍ಕೆ, ಕರ್ಮದ ಕೆಚ್ಚಿರ್‍ಕೆ,
ಪೆರ್‍ಮೆ, ಬಿಗಿ, ನಗೆ, ಸೊಗಸು.

೫. ಅರುಳಿರ್‍ಕೆ, ವೀಡುಂ, ಅರಂ, ಪುರುಳಿಂಪುಂ,
ಅರಿವಾಟಂ, ಪಾಟಂ ಪೊಸನೋಟಂ,

೬. ಒರ್‍ನಾಡು ಕೂಡುಗೆ ತಾನೇ ಒರ್ ಪೆರ್‌ಲೋಕಂ-
ಕಾರ್‍ನಾಡು ಕಂಡು ಕಾಣ್ಕೆಗಳನ್.

೭. ಕನ್ನಡ ಕಣ್ಮಣಿಗಳ್‌ ಪೆಣ್ಮಣಿಗಳ ಕಟ್ಟಾಳ್ಗಳ್‌
ಚೆನ್ನನೆಯ ಬಾಳ್ಗೆ ಬೆಳಕಕ್ಕೆ.

೮. ಕನ್ನಡ ತಾಯ್ ವಾಳ್ಗೆ, ವಾಳ್ಗೆ ಚೆಂದಮಿಳುಂ,
ಕೂಡಿದೀ ಚೆನ್ನೈಮಾನಾಡು.

೯. ಪಳವಾನೇ! ಪೊಸಎಲರೇ! ತಳಿಮಳೆಯೇ! ಚೆಲ್ವು ಬೆಳೆಯೆ!
ಒಳಗಣ್ಣ ಪಾರ್‍ವೆಯೆ! ನೆನೆಯಿರೆ ನಮ್ಮ ಪೊಲನುಂ.

೧೦. ಶ್ರೀಯೆಂಬೊನೊರ್‍ವನ್ ಅಡಿಯೆನೆನ್ ಕಾಯೆಂದು
ಬೇಳ್ಪನ್ ಪರಮಾತ್ಮನನ್.
*****
೧೯೪೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಪರಿಮಿತ ತಾರೆಗಳು
Next post ಇತಿಹಾಸ

ಸಣ್ಣ ಕತೆ

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…