ಇತಿಹಾಸ

ಇಲ್ಲಿ ಹರಿಯೋ ನೀರು
ನೀರಲ್ಲ ಸ್ವಾಮಿ, ತೀರ್ಥವೆನ್ನುವರು
ಇಲ್ಲಿ ನೆಟ್ಟ ಕಲ್ಲು
ಕಲ್ಲಲ್ಲ ಸ್ವಾಮಿ, ದೇವರೆನ್ನುವರು
ಇಲ್ಲಿ ಬಡಿಯೋ ಸಾವು
ಸಾವಲ್ಲ ಸ್ವಾಮಿ, ಮೋಕ್ಷವೆನ್ನುವರು.

ಇಲ್ಲಿರುವ ಬಡತನಕೆ
ಇಲ್ಲಿ ಕಾರಣವಿಲ್ಲ
ಕಳೆದ ಜನ್ಮದ ಪಾಪವಂತೆ
ಸೊಕ್ಕಿ ಏರುವ ಸಿರಿಗೆ
ಇಲ್ಲಿ ಕಾರಣವಿಲ್ಲ
ಕಳೆದ ಜನ್ಮದ ಪುಣ್ಯವಂತೆ.

ಇಲ್ಲಿ ಬೆಳೆಯುವ ಮರಗಳಲ್ಲಿ
ಕೊಂಬೆ ಕೊಂದಿವೆ ಎಲೆಗಳ.
ಇಲ್ಲಿ ಮೂಡುವ ಗಿಡಗಳಲ್ಲಿ
ಎಲೆಯ ನುಂಗಿದ ಹೂಗಳ.
ಇಲ್ಲಿ ಬೀಸೊ ಗಾಳಿಯಲ್ಲಿ
ಸಂಪ್ರದಾಯದ ಲಯವಿದೆ
ಗಟ್ಟಿ ಬೆಟ್ಟವು ಗಾಳಿಗೂಳಿಗೆ
ಗಾಯಗೊಳ್ಳುವ ಭಯವಿದೆ
ವರ್ತಮಾನಕೆ ಭೂತ ಹಿಡಿದು
ಕುರುಡು ಕವಚವ ತೊಟ್ಟಿದೆ.

ಶತಶತಮಾನದ ಚರಿತ್ರೆಯಲ್ಲಿ
ಕವಚಕೆ ಖಡ್ಗದ ಸೆಣಸು ಇದೆ
ಇತಿಹಾಸದ ಸೃಷ್ಟಿಗೆ ಕಾಲವಿದೇ
ಬಂಡಾಯದ ಬೆಳಕಿಗೆ ಭೂಮಿಯಿದೇ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಾರೈಕೆ
Next post ತೇಜಸ್ವಿಯವರ ಕಥಾನಕಗಳ ಹೊಸದಾರಿ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…