ಇತಿಹಾಸ

ಇಲ್ಲಿ ಹರಿಯೋ ನೀರು
ನೀರಲ್ಲ ಸ್ವಾಮಿ, ತೀರ್ಥವೆನ್ನುವರು
ಇಲ್ಲಿ ನೆಟ್ಟ ಕಲ್ಲು
ಕಲ್ಲಲ್ಲ ಸ್ವಾಮಿ, ದೇವರೆನ್ನುವರು
ಇಲ್ಲಿ ಬಡಿಯೋ ಸಾವು
ಸಾವಲ್ಲ ಸ್ವಾಮಿ, ಮೋಕ್ಷವೆನ್ನುವರು.

ಇಲ್ಲಿರುವ ಬಡತನಕೆ
ಇಲ್ಲಿ ಕಾರಣವಿಲ್ಲ
ಕಳೆದ ಜನ್ಮದ ಪಾಪವಂತೆ
ಸೊಕ್ಕಿ ಏರುವ ಸಿರಿಗೆ
ಇಲ್ಲಿ ಕಾರಣವಿಲ್ಲ
ಕಳೆದ ಜನ್ಮದ ಪುಣ್ಯವಂತೆ.

ಇಲ್ಲಿ ಬೆಳೆಯುವ ಮರಗಳಲ್ಲಿ
ಕೊಂಬೆ ಕೊಂದಿವೆ ಎಲೆಗಳ.
ಇಲ್ಲಿ ಮೂಡುವ ಗಿಡಗಳಲ್ಲಿ
ಎಲೆಯ ನುಂಗಿದ ಹೂಗಳ.
ಇಲ್ಲಿ ಬೀಸೊ ಗಾಳಿಯಲ್ಲಿ
ಸಂಪ್ರದಾಯದ ಲಯವಿದೆ
ಗಟ್ಟಿ ಬೆಟ್ಟವು ಗಾಳಿಗೂಳಿಗೆ
ಗಾಯಗೊಳ್ಳುವ ಭಯವಿದೆ
ವರ್ತಮಾನಕೆ ಭೂತ ಹಿಡಿದು
ಕುರುಡು ಕವಚವ ತೊಟ್ಟಿದೆ.

ಶತಶತಮಾನದ ಚರಿತ್ರೆಯಲ್ಲಿ
ಕವಚಕೆ ಖಡ್ಗದ ಸೆಣಸು ಇದೆ
ಇತಿಹಾಸದ ಸೃಷ್ಟಿಗೆ ಕಾಲವಿದೇ
ಬಂಡಾಯದ ಬೆಳಕಿಗೆ ಭೂಮಿಯಿದೇ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಾರೈಕೆ
Next post ತೇಜಸ್ವಿಯವರ ಕಥಾನಕಗಳ ಹೊಸದಾರಿ

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…