ಚೆನ್ನೆಯರಿಗೆ ನೀಡಿ ಚೆನ್ನೆಮಣೆ

ಚೆನ್ನೆಯರಿಗೆ ನೀಡಿ ಚೆನ್ನೆಮಣೆ
ಚೆನ್ನೆಯರು ಚೆನ್ನೆಯಾಡುವುದು ಚಂದ

ಕನ್ನೆಯರಿಗೆ ನೀಡಿ ಕನಕಾಂಬರ
ಕನ್ನೆಯರು ಹೂ ಮುಡಿಯುವುದು ಚಂದ

ಕುಮುದೇರಿಗೆ ನೀಡಿ ಪರಿಮಳದ ಪನ್ನೀರ
ಕುಮುದೇರಿಗೆ ಪನ್ನೀರ ಬಿಂದು ಚಂದ

ಮಕ್ಕಳಿಗೆ ನೀಡಿ ಸಕ್ಕರೆ ಮಿಠಾಯಿ
ಮಕ್ಕಳು ಸಕ್ಕರೆ ತಿನ್ನುವುದು ಚಂದ

ನೀರಲ್ಲಿ ಇಳಿಸಿರಿ ಕಾಗದದ ದೋಣಿಗಳ
ಕಾಗದದ ದೋಣಿಗಳು ಸಾಗುವುದು ಚಂದ

ಆಕಾಶದಿ ಹಾರಿಸಿ ಗಾಳಿ ಪಟವ
ಗಾಳಿಗೆ ಗಾಳಿ ಪಟ ಹಾರುವುದು ಚಂದ

ದೇವರಿಗೆ ಉರಿಸಿ ಗುಟ್ಟದ ದೀಪ
ಗುಟ್ಟದ ದೀಪ ಉರಿಯುವುದು ಚಂದ

ಅಮ್ಮನಿಗೆ ತನ್ನಿ ಹೊಸ ಸೀರೆಯ
ಅಮ್ಮ ಹೊಸ ಸೀರೆಯುಟ್ಟರೆ ಚಂದ

ಅಪ್ಪನಿಗೆ ತನ್ನ ಹೊಸ ಅಂಗಿಯ
ಅಪ್ಪ ಹೊಸ ಅಂಗಿ ತೊಟ್ಟರೆ ಚಂದ

ಹೊಸ್ತಿಲಿಗೆ ರಂಗೋಲಿ ಚಿತ್ರವ ಹಾಕಿ
ಹೊಸ್ತಿಲಿಗೆ ರಂಗೋಲಿ ಚಿತ್ರವು ಚಂದ

ಹಾಲು ಕರೆದ ಮೇಲೆ ಗೋವಿಗೆ ವಂದಿಸಿ
ಗೋವಿಗೆ ವಂದಿಸಿದರೆ ಹಾಲು ಚಂದ

ದೇವರ ಕಂಡರೆ ನಕ್ಕು ಮಾತಾಡಿಸಿ
ನಕ್ಕು ಮಾತಾಡಿಸಿದರೆ ಮೊಗಕೆ ಚಂದ

ನಕ್ಕು ಮಾತಾಡಿಸಿದರೆ ದೇವರಿಗೆ ಚಂದ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೨೫
Next post ದಶಾವತಾರ ಮತ್ತು ಜೀವ ವಿಕಾಸ

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…