Home / ಕವನ / ಕವಿತೆ / ಚೆನ್ನೆಯರಿಗೆ ನೀಡಿ ಚೆನ್ನೆಮಣೆ

ಚೆನ್ನೆಯರಿಗೆ ನೀಡಿ ಚೆನ್ನೆಮಣೆ

ಚೆನ್ನೆಯರಿಗೆ ನೀಡಿ ಚೆನ್ನೆಮಣೆ
ಚೆನ್ನೆಯರು ಚೆನ್ನೆಯಾಡುವುದು ಚಂದ

ಕನ್ನೆಯರಿಗೆ ನೀಡಿ ಕನಕಾಂಬರ
ಕನ್ನೆಯರು ಹೂ ಮುಡಿಯುವುದು ಚಂದ

ಕುಮುದೇರಿಗೆ ನೀಡಿ ಪರಿಮಳದ ಪನ್ನೀರ
ಕುಮುದೇರಿಗೆ ಪನ್ನೀರ ಬಿಂದು ಚಂದ

ಮಕ್ಕಳಿಗೆ ನೀಡಿ ಸಕ್ಕರೆ ಮಿಠಾಯಿ
ಮಕ್ಕಳು ಸಕ್ಕರೆ ತಿನ್ನುವುದು ಚಂದ

ನೀರಲ್ಲಿ ಇಳಿಸಿರಿ ಕಾಗದದ ದೋಣಿಗಳ
ಕಾಗದದ ದೋಣಿಗಳು ಸಾಗುವುದು ಚಂದ

ಆಕಾಶದಿ ಹಾರಿಸಿ ಗಾಳಿ ಪಟವ
ಗಾಳಿಗೆ ಗಾಳಿ ಪಟ ಹಾರುವುದು ಚಂದ

ದೇವರಿಗೆ ಉರಿಸಿ ಗುಟ್ಟದ ದೀಪ
ಗುಟ್ಟದ ದೀಪ ಉರಿಯುವುದು ಚಂದ

ಅಮ್ಮನಿಗೆ ತನ್ನಿ ಹೊಸ ಸೀರೆಯ
ಅಮ್ಮ ಹೊಸ ಸೀರೆಯುಟ್ಟರೆ ಚಂದ

ಅಪ್ಪನಿಗೆ ತನ್ನ ಹೊಸ ಅಂಗಿಯ
ಅಪ್ಪ ಹೊಸ ಅಂಗಿ ತೊಟ್ಟರೆ ಚಂದ

ಹೊಸ್ತಿಲಿಗೆ ರಂಗೋಲಿ ಚಿತ್ರವ ಹಾಕಿ
ಹೊಸ್ತಿಲಿಗೆ ರಂಗೋಲಿ ಚಿತ್ರವು ಚಂದ

ಹಾಲು ಕರೆದ ಮೇಲೆ ಗೋವಿಗೆ ವಂದಿಸಿ
ಗೋವಿಗೆ ವಂದಿಸಿದರೆ ಹಾಲು ಚಂದ

ದೇವರ ಕಂಡರೆ ನಕ್ಕು ಮಾತಾಡಿಸಿ
ನಕ್ಕು ಮಾತಾಡಿಸಿದರೆ ಮೊಗಕೆ ಚಂದ

ನಕ್ಕು ಮಾತಾಡಿಸಿದರೆ ದೇವರಿಗೆ ಚಂದ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...