Home / ಕವನ / ಕವಿತೆ / ಚೆನ್ನೆಯರಿಗೆ ನೀಡಿ ಚೆನ್ನೆಮಣೆ

ಚೆನ್ನೆಯರಿಗೆ ನೀಡಿ ಚೆನ್ನೆಮಣೆ

ಚೆನ್ನೆಯರಿಗೆ ನೀಡಿ ಚೆನ್ನೆಮಣೆ
ಚೆನ್ನೆಯರು ಚೆನ್ನೆಯಾಡುವುದು ಚಂದ

ಕನ್ನೆಯರಿಗೆ ನೀಡಿ ಕನಕಾಂಬರ
ಕನ್ನೆಯರು ಹೂ ಮುಡಿಯುವುದು ಚಂದ

ಕುಮುದೇರಿಗೆ ನೀಡಿ ಪರಿಮಳದ ಪನ್ನೀರ
ಕುಮುದೇರಿಗೆ ಪನ್ನೀರ ಬಿಂದು ಚಂದ

ಮಕ್ಕಳಿಗೆ ನೀಡಿ ಸಕ್ಕರೆ ಮಿಠಾಯಿ
ಮಕ್ಕಳು ಸಕ್ಕರೆ ತಿನ್ನುವುದು ಚಂದ

ನೀರಲ್ಲಿ ಇಳಿಸಿರಿ ಕಾಗದದ ದೋಣಿಗಳ
ಕಾಗದದ ದೋಣಿಗಳು ಸಾಗುವುದು ಚಂದ

ಆಕಾಶದಿ ಹಾರಿಸಿ ಗಾಳಿ ಪಟವ
ಗಾಳಿಗೆ ಗಾಳಿ ಪಟ ಹಾರುವುದು ಚಂದ

ದೇವರಿಗೆ ಉರಿಸಿ ಗುಟ್ಟದ ದೀಪ
ಗುಟ್ಟದ ದೀಪ ಉರಿಯುವುದು ಚಂದ

ಅಮ್ಮನಿಗೆ ತನ್ನಿ ಹೊಸ ಸೀರೆಯ
ಅಮ್ಮ ಹೊಸ ಸೀರೆಯುಟ್ಟರೆ ಚಂದ

ಅಪ್ಪನಿಗೆ ತನ್ನ ಹೊಸ ಅಂಗಿಯ
ಅಪ್ಪ ಹೊಸ ಅಂಗಿ ತೊಟ್ಟರೆ ಚಂದ

ಹೊಸ್ತಿಲಿಗೆ ರಂಗೋಲಿ ಚಿತ್ರವ ಹಾಕಿ
ಹೊಸ್ತಿಲಿಗೆ ರಂಗೋಲಿ ಚಿತ್ರವು ಚಂದ

ಹಾಲು ಕರೆದ ಮೇಲೆ ಗೋವಿಗೆ ವಂದಿಸಿ
ಗೋವಿಗೆ ವಂದಿಸಿದರೆ ಹಾಲು ಚಂದ

ದೇವರ ಕಂಡರೆ ನಕ್ಕು ಮಾತಾಡಿಸಿ
ನಕ್ಕು ಮಾತಾಡಿಸಿದರೆ ಮೊಗಕೆ ಚಂದ

ನಕ್ಕು ಮಾತಾಡಿಸಿದರೆ ದೇವರಿಗೆ ಚಂದ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...