Home / ಬಾಲ ಚಿಲುಮೆ / ಕವಿತೆ / ದಶಾವತಾರ ಮತ್ತು ಜೀವ ವಿಕಾಸ

ದಶಾವತಾರ ಮತ್ತು ಜೀವ ವಿಕಾಸ

ದೇವರ ದೇವನು ಮಹಾವಿಷ್ಣುವು
ದಶಾವತಾರವ ತಾಳಿದನು
ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ
ಲೋಕಕಲ್ಯಾಣವ ಮಾಡಿದನು-
ಹಿಂದಿನಿಂದಲೂ ಕೇಳುತಲಿರುವೆವು
ದಶಾವತಾರದ ಕಥೆಯನ್ನು
ಇಂದು ಬೇರೆಯೇ ರೀತಿಯೊಳರಿಯುವ
ಕಥೆಯಲಿ ಅಡಗಿದ ತತ್ವವನು!

ಮೊದಲಿಗೆ ಪ್ರಳಯವು ಘಟಿಸಿದ ಸಮಯದಿ
‘ಮತ್ಸ್ಯಾ’ವತಾರವ ತಾಳಿದ್ದು
ಸಮುದ್ರ ಮಥನವು ನಡೆಯುವ ವೇಳೆ
‘ಕೂರ್ಮಾ’ವತಾರವ ತಳೆದದ್ದು
ರಕ್ಕಸನಿಂದಲಿ ಭೂಮಿಯ ರಕ್ಷಿಸೆ
‘ವರಾಹ’ ರೂಪವ ಹೊಂದಿದ್ದು
ವಿಷ್ಣುಭಕ್ತ ಪ್ರಹ್ಲಾದನ ಉಳಿಸಲು
‘ನರಸಿಂಹ’ನು ತಾನಾಗಿದ್ದು
ಬಲಿಯನು ಪಾತಾಳದ ಕಡೆ ತುಳಿಯಲು
’ವಾಮನ’ ರೂಪವ ಧರಿಸಿದ್ದು

ಕಾರ್ತವೀರ್ಯನ ಮದವನು ಅಡಗಿಸಿ
‘ಪರಶುರಾಮ’ ತಾನೆನಿಸಿದ್ದು
ಪಿತೃವಾಕ್ಯ ಪರಿಪಾಲನೆ ಮಾಡಲು
‘ರಾಮ’ನಾಗಿ ಅವತರಿಸಿದ್ದು
ಕುರುಪಾಂಡವ ಸಂಗ್ರಾಮವ ನಡೆಸಿದ
‘ಕೃಷ್ಣ’ಪರಮಾತ್ಮನಾಗಿದ್ದು
ಆಸೆಯು ದುಃಖಕೆ ಮೂಲವು ಎನ್ನುತ
ತಿಳಿಸಲು ’ಬುದ್ಧ’ನು ಜನಿಸಿದ್ದು
ಅಧರ್ಮ ಅಳಿಸುತ ಧರ್ಮವ ಉಳಿಸಲು
‘ಕಲ್ಕಿ’ಯಾಗಿ ಅವತರಿಸುವುದು

ಹೀಗೆ ಹತ್ತು ಅವತಾರವು ಇರುವುವು
ಪುರಾಣದಲ್ಲಿನ ಕಥೆಗಳಲಿ
ಭಕ್ತಿಯಿಂದ ಮನೆಮಾಡಿಕೊಂಡಿಹವು
ನಂಬಿಕೊಂಡವರ ಎದೆಯಲ್ಲಿ!
ಮತ್ಸ್ಯ ನೀರಿನಲಿ ಮಾತ್ರ ಬದುಕುವುದು
ಮೊದಲ ಜೀವಿ ಈ ಸೃಷ್ಟಿಯಲಿ
ಕೂರ್ಮ ನೀರಿನಲಿ ಮತ್ತು ನೆಲದಲ್ಲಿ
ಬದುಕುವುದೆರಡೂ ಕಡೆಯಲ್ಲಿ
ವರಾಹ ನೆಲದಲಿ ಮಾತ್ರ ಬದುಕುವುದು
ಉಳಿಯಲಾರದದು ನೀರಿನಲಿ
ಅರ್ಧ ಪ್ರಾಣಿ ಇನ್ನರ್ಧ ಮಾನವನ
ರೂಪ ನರಸಿಂಹ ಕಂಭದಲಿ
ವಾಮನನೆಂದರೆ ಕುಬ್ಜ ದೇಹದವ
ಪೂರ್ಣ ಬೆಳೆದಿರದ ಮಾನವನು
ಪರಶುರಾಮನವ ಪೂರ್ಣನಾದರೂ
ರಾಗದ್ವೇಷದಲಿ ಉಳಿದವನು
ಮರ್ಯಾದಾಪುರುಷೋತ್ತಮನೆನಿಸಿದ
ರಾಮ ಪರಿಪೂರ್ಣನಾದವನು
ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ
ಕೃಷ್ಣಪರಮಾತ್ಮನೆನಿಸಿದನು
ಮಾನವನಾಸೆಗೆ ದುರಾಸೆ ಮನಸಿಗೆ
ಬುದ್ಧನು ಅಂತ್ಯವ ಹಾಡಿದನು
ಕುದುರೆಯೇರಿ ಖಡ್ಗವ ಝಳಪಿಸುತಲಿ
ಬರುವನೆನ್ನುವರು ಕಲ್ಕಿಯನು!

ಹತ್ತು ಅವತಾರ ಕ್ರಮದಲಿ ನೋಡಲು ಜೀವಿಕಾಸವು ಕಾಣುವುದು
ಜೀವಿ ನೀರಿನಲಿ ಹುಟ್ಟಿದ ನಂತರ ಬೆಳೆದು ಬಂದುದನು ತಿಳಿಸುವುದು
ಮೊದಲಿಗೆ ಜೀವಿಯು ನೀರಲಿ ಹುಟ್ಟಿತು
ನಂತರ ನೆಲದೆಡೆ ಬಂದಿತ್ತು
ಪ್ರಾಣಿ ಹಂತದಿಂದೇರುತ ಬಂದಿತು
ಮಾನವ ರೂಪವ ಹೊಂದಿತ್ತು!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...