Home / ಕವನ / ಕವಿತೆ / ಬೆಚ್ಚಿಸುವುದೇಕೆ

ಬೆಚ್ಚಿಸುವುದೇಕೆ

ಬೆಚ್ಚಿಸುವುದೇಕವನ
ಬಿಮ್ಮನೆ ಕುಳಿತವನ
ಸುಮ್ಮನೆ ಬಾಗಿಲ ತೆರೆದು

ಕಿಂಡಿ ಸಾಲದೆ ನೋಡುವೊಡೆ
ಗಿಂಡಿ ಸಾಲದೆ ಸಿಂಪಿಸುವೊಡೆ

ಕಿರಣ ಸಾಲದೆ ಬೀರುವೊಡೆ
ಕಿಟಕಿ ಸಾಲದೆ ಹಾಯುವೊಡೆ

ಕಂಬನಿ ಸಾಲದೆ ಹರಿಯುವೊಡೆ
ಕಿರುನಗೆ ಸಾಲದೆ ಸುರಿಯುವೊಡೆ

ಎಬ್ಬಿಸುವುದೇಕವನ
ತನಗೆ ತಾನಾಗಿರುವವನ
ಸುಮ್ಮನೆ ಬಾಗಿಲ ತೆರೆದು

ಕಾಡುವುದೇಕವನ
ಯೋಚಿಸುತ್ತಿರುವವನ
ಸುಮ್ಮನೆ ಬಾಗಿಲ ತೆರೆದು

ಪೀಡಿಸುವುದೇಕವನ
ಕುಲಕೋಟಿಯ ವಿಧಿ ಬರೆವವನ
ಸುಮ್ಮನೆ ಬಾಗಿಲ ತೆರೆದು

ಅಚ್ಚರಿಗೊಳಿಸುವುದೇಕವನ
ಏಕಾಂತದಲ್ಲಿರುವವನ
ಸುಮ್ಮನೆ ಬಾಗಿಲ ತೆರೆದು

ಭಂಗಿಸುವುದೇಕವನ
ಧ್ಯಾನದಲಿರುವನ
ಸುಮ್ಮನೆ ಬಾಗಿಲ ತೆರೆದು

ಬೇಡುವುದಕೇನೂ ಇಲ್ಲ
ಕೊಡುವುದಕೂ ಕೈಯಲಿ ಇಲ್ಲ

ಕೊಟ್ಟವನ ನಮ್ಮನೀ ತರ ಇಟ್ಟವನ
ಗೊತ್ತಿರದವನಿಗೆ ಯಾವುದು ಇಲ್ಲದವನ

ಇಂತಿರಲವನ
ಬೆಚ್ಚಿಸುವುದೇಕವನ
ಸುಮ್ಮನೆ ಬಾಗಿಲ ತೆರೆದು
ಹಲವು ನಾಮಗಳಲಿ ಕರೆದು
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...