ಬೆಚ್ಚಿಸುವುದೇಕೆ

ಬೆಚ್ಚಿಸುವುದೇಕವನ
ಬಿಮ್ಮನೆ ಕುಳಿತವನ
ಸುಮ್ಮನೆ ಬಾಗಿಲ ತೆರೆದು

ಕಿಂಡಿ ಸಾಲದೆ ನೋಡುವೊಡೆ
ಗಿಂಡಿ ಸಾಲದೆ ಸಿಂಪಿಸುವೊಡೆ

ಕಿರಣ ಸಾಲದೆ ಬೀರುವೊಡೆ
ಕಿಟಕಿ ಸಾಲದೆ ಹಾಯುವೊಡೆ

ಕಂಬನಿ ಸಾಲದೆ ಹರಿಯುವೊಡೆ
ಕಿರುನಗೆ ಸಾಲದೆ ಸುರಿಯುವೊಡೆ

ಎಬ್ಬಿಸುವುದೇಕವನ
ತನಗೆ ತಾನಾಗಿರುವವನ
ಸುಮ್ಮನೆ ಬಾಗಿಲ ತೆರೆದು

ಕಾಡುವುದೇಕವನ
ಯೋಚಿಸುತ್ತಿರುವವನ
ಸುಮ್ಮನೆ ಬಾಗಿಲ ತೆರೆದು

ಪೀಡಿಸುವುದೇಕವನ
ಕುಲಕೋಟಿಯ ವಿಧಿ ಬರೆವವನ
ಸುಮ್ಮನೆ ಬಾಗಿಲ ತೆರೆದು

ಅಚ್ಚರಿಗೊಳಿಸುವುದೇಕವನ
ಏಕಾಂತದಲ್ಲಿರುವವನ
ಸುಮ್ಮನೆ ಬಾಗಿಲ ತೆರೆದು

ಭಂಗಿಸುವುದೇಕವನ
ಧ್ಯಾನದಲಿರುವನ
ಸುಮ್ಮನೆ ಬಾಗಿಲ ತೆರೆದು

ಬೇಡುವುದಕೇನೂ ಇಲ್ಲ
ಕೊಡುವುದಕೂ ಕೈಯಲಿ ಇಲ್ಲ

ಕೊಟ್ಟವನ ನಮ್ಮನೀ ತರ ಇಟ್ಟವನ
ಗೊತ್ತಿರದವನಿಗೆ ಯಾವುದು ಇಲ್ಲದವನ

ಇಂತಿರಲವನ
ಬೆಚ್ಚಿಸುವುದೇಕವನ
ಸುಮ್ಮನೆ ಬಾಗಿಲ ತೆರೆದು
ಹಲವು ನಾಮಗಳಲಿ ಕರೆದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೨೨
Next post ಕನಕದಾಸರು

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…