ಬೆಚ್ಚಿಸುವುದೇಕೆ

ಬೆಚ್ಚಿಸುವುದೇಕವನ
ಬಿಮ್ಮನೆ ಕುಳಿತವನ
ಸುಮ್ಮನೆ ಬಾಗಿಲ ತೆರೆದು

ಕಿಂಡಿ ಸಾಲದೆ ನೋಡುವೊಡೆ
ಗಿಂಡಿ ಸಾಲದೆ ಸಿಂಪಿಸುವೊಡೆ

ಕಿರಣ ಸಾಲದೆ ಬೀರುವೊಡೆ
ಕಿಟಕಿ ಸಾಲದೆ ಹಾಯುವೊಡೆ

ಕಂಬನಿ ಸಾಲದೆ ಹರಿಯುವೊಡೆ
ಕಿರುನಗೆ ಸಾಲದೆ ಸುರಿಯುವೊಡೆ

ಎಬ್ಬಿಸುವುದೇಕವನ
ತನಗೆ ತಾನಾಗಿರುವವನ
ಸುಮ್ಮನೆ ಬಾಗಿಲ ತೆರೆದು

ಕಾಡುವುದೇಕವನ
ಯೋಚಿಸುತ್ತಿರುವವನ
ಸುಮ್ಮನೆ ಬಾಗಿಲ ತೆರೆದು

ಪೀಡಿಸುವುದೇಕವನ
ಕುಲಕೋಟಿಯ ವಿಧಿ ಬರೆವವನ
ಸುಮ್ಮನೆ ಬಾಗಿಲ ತೆರೆದು

ಅಚ್ಚರಿಗೊಳಿಸುವುದೇಕವನ
ಏಕಾಂತದಲ್ಲಿರುವವನ
ಸುಮ್ಮನೆ ಬಾಗಿಲ ತೆರೆದು

ಭಂಗಿಸುವುದೇಕವನ
ಧ್ಯಾನದಲಿರುವನ
ಸುಮ್ಮನೆ ಬಾಗಿಲ ತೆರೆದು

ಬೇಡುವುದಕೇನೂ ಇಲ್ಲ
ಕೊಡುವುದಕೂ ಕೈಯಲಿ ಇಲ್ಲ

ಕೊಟ್ಟವನ ನಮ್ಮನೀ ತರ ಇಟ್ಟವನ
ಗೊತ್ತಿರದವನಿಗೆ ಯಾವುದು ಇಲ್ಲದವನ

ಇಂತಿರಲವನ
ಬೆಚ್ಚಿಸುವುದೇಕವನ
ಸುಮ್ಮನೆ ಬಾಗಿಲ ತೆರೆದು
ಹಲವು ನಾಮಗಳಲಿ ಕರೆದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೨೨
Next post ಕನಕದಾಸರು

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

cheap jordans|wholesale air max|wholesale jordans|wholesale jewelry|wholesale jerseys