ನಮ್ಮೂರ ಚಂದ್ರನ

ನಮ್ಮೂರ ಚಂದ್ರನ ಕಂಡೀರೆ ನೀವು
ನಿಮ್ಮೂರ ಬಾನಿನಲಿ

ಒಮ್ಮೊಮ್ಮೆ ತೋರುವನು ಒಮ್ಮೊಮ್ಮೆ ಮಾಯುವನು
ಮಣ್ಣಿನ ಮುದ್ದು ಮಗನಿವನು

ಒಮ್ಮೊಮ್ಮೆ ತೊಳೆದ ಬಿಂದಿಗೆಯಂತವನು
ಕೇರಿಕೇರಿಗೆ ಹಾಲ ಸುರಿಯುವನು

ಒಮ್ಮೊಮ್ಮೆ ಬೆಳ್ಳಿ ಬಟ್ಟಲಂತವನು
ಮನೆ ಮನೆಗೆ ಮಲ್ಲಿಗೆ ಚೆಲ್ಲುವನು

ಒಮ್ಮೊಮ್ಮೆ ತೂಗು ತೊಟ್ಟಿಲಂತವನು
ಊರ ಮಕ್ಕಳನೆಲ್ಲ ತೂಗುವನು

ಒಮ್ಮೊಮ್ಮೆ ಕಂಡೂ ಕಾಣದಂತವನು
ಕರೆ ಕರೆದು ಕಂಡವರ ಕಾಡುವನು

ಒಮ್ಮೊಮ್ಮೆ ಮಾಯಾ ಕನ್ನಡಿಯಂತವನು
ಸ್ವಪ್ನ ಲೋಕದ ಬೀಗ ತೆರೆಯುವನು

ಒಮ್ಮೊಮ್ಮೆ ಏನೋ ಕದ್ದವನಂತವನು
ಮರಗಳ ಹಿಂದೆ ಮರೆಯಾಗುವನು

ಒಮ್ಮೊಮ್ಮೆ ನಮ್ಮ ದುಃಖದಂತವನು
ಇಬ್ಬನಿ ಕಂಬನಿ ಸುರಿಸುವನು

ಒಮ್ಮೊಮ್ಮೆ ನಮ್ಮ ದೇವರಂತವನು
ಭೂಮಿಗೆ ಸ್ವರ್ಗವ ಹರಿಸುವನು

ಒಮ್ಮೊಮ್ಮೆ ಕಿಟಿಕಿಯ ತೆರೆದೊಳ ಬರುವನು
ಕದ್ದು ಚುಂಬಿಸಿಬಿಟ್ಟು ಎದ್ದು ಹೋಗುವನು

ಬಾಗಿಲ ಬಳಿ ನಿಂತು ಬಾ ಎಂದು ಕರೆವನು
ಹೋದಾರೆ ಕೈಗೆ ಸಿಗದವನು

ರಾತ್ರಿ ರಾಣಿಯರ ರಾಜನಂತಿರುವನು
ಬಾನಲ್ಲಿ ಕವಡೆಗಳ ಆಡುವನು

ಉತ್ತರ ಧ್ರುವದಿಂದ ದಕ್ಷಿಣ ಧ್ರುವಕೂ
ಅಪೂರ್ವ ರಾಗಗಳ ಹಾಡುವನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೧೪
Next post ಬಾನ್‌ ಕೊಂಡ ಕೃಷ್ಣನ್

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…