Home / ಕವನ / ಕವಿತೆ / ನಮ್ಮೂರ ಚಂದ್ರನ

ನಮ್ಮೂರ ಚಂದ್ರನ

ನಮ್ಮೂರ ಚಂದ್ರನ ಕಂಡೀರೆ ನೀವು
ನಿಮ್ಮೂರ ಬಾನಿನಲಿ

ಒಮ್ಮೊಮ್ಮೆ ತೋರುವನು ಒಮ್ಮೊಮ್ಮೆ ಮಾಯುವನು
ಮಣ್ಣಿನ ಮುದ್ದು ಮಗನಿವನು

ಒಮ್ಮೊಮ್ಮೆ ತೊಳೆದ ಬಿಂದಿಗೆಯಂತವನು
ಕೇರಿಕೇರಿಗೆ ಹಾಲ ಸುರಿಯುವನು

ಒಮ್ಮೊಮ್ಮೆ ಬೆಳ್ಳಿ ಬಟ್ಟಲಂತವನು
ಮನೆ ಮನೆಗೆ ಮಲ್ಲಿಗೆ ಚೆಲ್ಲುವನು

ಒಮ್ಮೊಮ್ಮೆ ತೂಗು ತೊಟ್ಟಿಲಂತವನು
ಊರ ಮಕ್ಕಳನೆಲ್ಲ ತೂಗುವನು

ಒಮ್ಮೊಮ್ಮೆ ಕಂಡೂ ಕಾಣದಂತವನು
ಕರೆ ಕರೆದು ಕಂಡವರ ಕಾಡುವನು

ಒಮ್ಮೊಮ್ಮೆ ಮಾಯಾ ಕನ್ನಡಿಯಂತವನು
ಸ್ವಪ್ನ ಲೋಕದ ಬೀಗ ತೆರೆಯುವನು

ಒಮ್ಮೊಮ್ಮೆ ಏನೋ ಕದ್ದವನಂತವನು
ಮರಗಳ ಹಿಂದೆ ಮರೆಯಾಗುವನು

ಒಮ್ಮೊಮ್ಮೆ ನಮ್ಮ ದುಃಖದಂತವನು
ಇಬ್ಬನಿ ಕಂಬನಿ ಸುರಿಸುವನು

ಒಮ್ಮೊಮ್ಮೆ ನಮ್ಮ ದೇವರಂತವನು
ಭೂಮಿಗೆ ಸ್ವರ್ಗವ ಹರಿಸುವನು

ಒಮ್ಮೊಮ್ಮೆ ಕಿಟಿಕಿಯ ತೆರೆದೊಳ ಬರುವನು
ಕದ್ದು ಚುಂಬಿಸಿಬಿಟ್ಟು ಎದ್ದು ಹೋಗುವನು

ಬಾಗಿಲ ಬಳಿ ನಿಂತು ಬಾ ಎಂದು ಕರೆವನು
ಹೋದಾರೆ ಕೈಗೆ ಸಿಗದವನು

ರಾತ್ರಿ ರಾಣಿಯರ ರಾಜನಂತಿರುವನು
ಬಾನಲ್ಲಿ ಕವಡೆಗಳ ಆಡುವನು

ಉತ್ತರ ಧ್ರುವದಿಂದ ದಕ್ಷಿಣ ಧ್ರುವಕೂ
ಅಪೂರ್ವ ರಾಗಗಳ ಹಾಡುವನು
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...