ಯಕ್ಷ ಲೋಕ

ಎಲ್ಲಿಂದ ಬಂತೀ ಸುಮಧುರ ಗಾನ
ಎಲ್ಲಿಂದ ಬಂದನೀ ಯಕ್ಷ

ಎಲ್ಲಿಂದ ಬಿದ್ದ ಸುರ ಸ್ವಪ್ನ
ಎಲ್ಲಿಂದ ತೆರೆದ ಗವಾಕ್ಷ

ಇನ್ನು ಭಾಗವತ ನಾನೆ ಇನ್ನು ಜಾಗಟೆ ನಾನೆ
ಚಂಡೆಮದ್ದಲೆ ನಾನೆ ಹಾಡು ಅರ್ಥವು ನಾನೆ

ಕೋಡಂಗಿ ಕುಣಿತ ಗೋಪಾಲ ಕುಣಿತ
ಎಲ್ಲ ಹೆಜ್ಜೆಗಳ ಇಡುವವನು ನಾನೆ

ಇದೋ ನಾಯಕ ಇದೋ ಖಳನಾಯಕ
ಸೌಮ್ಯವೇಷ ಬಣ್ಣದಾ ವೇಷ ಎಲ್ಲ ನಾನೆ

ಸ್ತ್ರೀ ವೇಷ ನಾನೆ ವಿದೂಷಕನು ನಾನೆ
ಕುಣಿಸುವವ ನಾನೆ ಕುಣಿವವನು ನಾನೆ

ಅಯೋಧ್ಯಾನಗರಿಗೆ ಯಾರೆಂತ ಕೇಳಿದಿರಿ
ಋತುಪರ್ಣರಾಜರೆನ್ನಬಹುದಯ್ಯ

ಆ ಋತುಪರ್ಣ ನಾನೆ ಅಷ್ಟಾವಕ್ರ ಬಾಹುಕನು ನಾನೆ
ಅಶ್ವಹೃದಯ ಪರಿಣತನು ನಾನೆ ಅಕ್ಷಕಲಾ ಪಂಡಿತನು ನಾನೆ

ವೃಕ್ಷದೆಲೆಗಳನ್ನು ಎಣಿಸಿದವ ನಾನೆ
ವಾಯುವೇಗದಲಿ ರಥ ಓಡಿಸಿದವ ನಾನೆ

ಯಕ್ಷ ನಾನೆ ಗಾನ ನಾನೆ
ಗೀತ ನಾನೆ ಸಂಗೀತ ನಾನೆ

ಕಾದಿರುವಳು ದಮಯಂತಿ ಹೂಮಾಲೆ ಹಿಡಿದು
ತನ್ನ ನಳನಿಗೆ ಕಾದು

ಇದು ಸ್ವಪ್ನದ ಹೊಳೆ ಇದು ಅನರ್ಘ್ಯದ ಖಣಿ
ಇದು ಪರುಷ ಮಣಿ ಇದ ಮುಟ್ಟಿದವನ ಭಾಗ್ಯ
ಈ ಯಕ್ಷವಾಣಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೯
Next post ಅಂಬನೀ ದಯಮಾಡೆ

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…