ಗಾಂಧಿಗೊಂದು ಪ್ರಶ್ನೆ

ಗಾಂಧಿ.
ಸತ್ತು ಹೋಗಿರುವ ಗಾಂಧಿ
ನೀನೂ ಒಬ್ಬ ಮನುಷ್ಯ
ಭೇದ ಭಾವವ ಅಳಿಸಲು
ಹರಿಜನೋದ್ಧಾರದ
ಮಾತುಗಳನ್ನುದುರಿಸಿದ ಗಾಂಧಿ;
ತುಂಡು ಲಂಗೋಟಿಯ ಉಟ್ಟು
ಆಸರೆಗಾಗಿ ಕೈಯಲ್ಲಿ
ಕೋಲು ಹಿಡಿದ ಗಾಂಧಿ.
ಆಸಮತೆಯ ಅಗ್ನಿಗೆ
ಆಹುತಿಯರಾಗಿರುವೆವು ನಾವು
ಆ ಧಣಿಯರ ಕಾಲೀಗೆ
ಚಪ್ಪಲಿ ಮೆಟ್ಟು ಹೊಲಿದು
ಬರಿಗಾಲಿನಿಂದ
ತಿರುಗುತ್ತಿದ್ದೇವೆ ಗಾಂಧಿ;
ನಮ್ಮ ಕೆಂಪನ್ನು ರಕ್ತ ಸುಟ್ಟು
ಕಪ್ಪನ್ನ ಮೋಡವಾಗುತ್ತಿದೆ.
ಈ ದೇಶದ ಚರಿತ್ರೆಯಲ್ಲಿ
ಗುಡಿಸಲುಗಳ ಸುಡಿಸಿಕೊಂಡ
ಜೀವಂತ ಬೇಯಿಸಿಕೊಂಡ
ದುಡುಮೆಯನು ಮಾಡಿಕೊಂಡ
ಜನತೆ;
ಗಾಂಧಿ, ಗಾಂಧಿಗಳ ಬಗ್ಗೆ
ಸತ್ಯ ಅರಿಯುವದು
ಸರಿಯಲ್ಲವೇ ಗಾಂಧಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಜ್ಞಾನವೆಂದೊಡೆಂತು? ಜ್ಞಾನ ಮಾರ್ಗ ಸಾವಯವವಾಗದೆ?
Next post ಕಿವಿ-ಕಣ್ಣು

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…