ಗಾಂಧಿ.
ಸತ್ತು ಹೋಗಿರುವ ಗಾಂಧಿ
ನೀನೂ ಒಬ್ಬ ಮನುಷ್ಯ
ಭೇದ ಭಾವವ ಅಳಿಸಲು
ಹರಿಜನೋದ್ಧಾರದ
ಮಾತುಗಳನ್ನುದುರಿಸಿದ ಗಾಂಧಿ;
ತುಂಡು ಲಂಗೋಟಿಯ ಉಟ್ಟು
ಆಸರೆಗಾಗಿ ಕೈಯಲ್ಲಿ
ಕೋಲು ಹಿಡಿದ ಗಾಂಧಿ.
ಆಸಮತೆಯ ಅಗ್ನಿಗೆ
ಆಹುತಿಯರಾಗಿರುವೆವು ನಾವು
ಆ ಧಣಿಯರ ಕಾಲೀಗೆ
ಚಪ್ಪಲಿ ಮೆಟ್ಟು ಹೊಲಿದು
ಬರಿಗಾಲಿನಿಂದ
ತಿರುಗುತ್ತಿದ್ದೇವೆ ಗಾಂಧಿ;
ನಮ್ಮ ಕೆಂಪನ್ನು ರಕ್ತ ಸುಟ್ಟು
ಕಪ್ಪನ್ನ ಮೋಡವಾಗುತ್ತಿದೆ.
ಈ ದೇಶದ ಚರಿತ್ರೆಯಲ್ಲಿ
ಗುಡಿಸಲುಗಳ ಸುಡಿಸಿಕೊಂಡ
ಜೀವಂತ ಬೇಯಿಸಿಕೊಂಡ
ದುಡುಮೆಯನು ಮಾಡಿಕೊಂಡ
ಜನತೆ;
ಗಾಂಧಿ, ಗಾಂಧಿಗಳ ಬಗ್ಗೆ
ಸತ್ಯ ಅರಿಯುವದು
ಸರಿಯಲ್ಲವೇ ಗಾಂಧಿ?
*****
Related Post
ಸಣ್ಣ ಕತೆ
-
ಕೆಂಪು ಲುಂಗಿ
ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…
-
ಮಾದಿತನ
ಮುಂಗೋಳಿ... ಕೂಗಿದ್ದೆ ತಡ, ಪೆರ್ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…
-
ಟೋಪಿ ಮಾರುತಿ
"ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…
-
ಆವರ್ತನೆ
ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…
-
ಆ ರಾಮ!
ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…