ಹೌದು,
ಇದು ಮಕ್ಕಳ ವರ್ಷ
ಮಕ್ಕಳಿಗಾಗಿಯೇ
ಹಲವಾರು ಕಾರ್ಯಕ್ರಮ
ಹಾಕಿಕೊಂಡಿದ್ದೇವೆ.
ಆಗಾಗ ಭಾಷಾ ಸ್ಪರ್ಧೆ
ಆಟದ ಸ್ಪರ್ಧೆ ಏರ್ಪಡಿಸುತ್ತೇವೆ
ಮಕ್ಕಳ ವರ್ಷದಾಗೇ
ನಮ್ಮದೂ ಛಾನ್ಸ್ ಅಲ್ವಾ?
ಅದಕ್ಕೆಂತಲೆ ಬಿಸ್ಕತ್
ಚಾಕಲೇಟ, ಹಾಲು, ಪೌಡರಗಳ
ಬೆಲೆ ಗಗನಕ್ಕೇರಿಸಿದ್ದೇವೆ
ಅದಕ್ಕಾಗಿಯೇ ಅವು ಈಗ
ಮುಗಿಲ ಚುಕ್ಕಿಯಂತೆ
ಮೇಲೆ ಬೆಳಗುತ್ತಿವೆ.
ಏನು?
ನಿನ್ನ ಮಗೂಗೇ
ಮೆತ್ತನ್ನ ಅನ್ನ ಕೂಡ ಸಿಗಲ್ವೆ?
ಅದಕ್ಕೆ ನಾವೇನು ಮಾಡಬೇಕು?
ಎಲ್ಲಾ ಅವರವರ ಕರ್ಮ –
ಆದರೆ….
ನಮ್ಮದು ಸಮಾಜವಾದೀ ರಾಷ್ಟ್ರ
ಅಂತ ಖಾದಿಗಳು ಹೇಳುತ್ತಿವೇ
ಕೇಳಿಲ್ಲವೇ ನೀನು.
*****
Related Post
ಸಣ್ಣ ಕತೆ
-
ತಿಮ್ಮರಾಯಪ್ಪನ ಬುದ್ಧಿವಾದ
ಪ್ರಕರಣ ೧೧ ಮಾರನೆಯ ದಿನ ತನ್ನ ಮೀಟಂಗ್ ಕೆಲಸವನ್ನು ಮುಗಿಸಿಕೊಂಡು ತಂಗಿಯ ಮನೆಯಲ್ಲಿ ಊಟಮಾಡಿಕೊಂಡು ರಾತ್ರಿ ಎಂಟು ಗಂಟೆಗೆ ತಿಮ್ಮರಾಯಪ್ಪನ ಮನೆಗೆ ರಂಗಣ್ಣ ಹೊರಟನು. ಆ ದಿನ… Read more…
-
ಇರುವುದೆಲ್ಲವ ಬಿಟ್ಟು
ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…
-
ಸ್ವಯಂಪ್ರಕಾಶ
ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…
-
ಉರಿವ ಮಹಡಿಯ ಒಳಗೆ
ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…
-
ಗಿಣಿಯ ಸಾಕ್ಷಿ
ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…