ಹೌದು,
ಇದು ಮಕ್ಕಳ ವರ್ಷ
ಮಕ್ಕಳಿಗಾಗಿಯೇ
ಹಲವಾರು ಕಾರ್ಯಕ್ರಮ
ಹಾಕಿಕೊಂಡಿದ್ದೇವೆ.
ಆಗಾಗ ಭಾಷಾ ಸ್ಪರ್ಧೆ
ಆಟದ ಸ್ಪರ್ಧೆ ಏರ್ಪಡಿಸುತ್ತೇವೆ
ಮಕ್ಕಳ ವರ್ಷದಾಗೇ
ನಮ್ಮದೂ ಛಾನ್ಸ್ ಅಲ್ವಾ?
ಅದಕ್ಕೆಂತಲೆ ಬಿಸ್ಕತ್
ಚಾಕಲೇಟ, ಹಾಲು, ಪೌಡರಗಳ
ಬೆಲೆ ಗಗನಕ್ಕೇರಿಸಿದ್ದೇವೆ
ಅದಕ್ಕಾಗಿಯೇ ಅವು ಈಗ
ಮುಗಿಲ ಚುಕ್ಕಿಯಂತೆ
ಮೇಲೆ ಬೆಳಗುತ್ತಿವೆ.
ಏನು?
ನಿನ್ನ ಮಗೂಗೇ
ಮೆತ್ತನ್ನ ಅನ್ನ ಕೂಡ ಸಿಗಲ್ವೆ?
ಅದಕ್ಕೆ ನಾವೇನು ಮಾಡಬೇಕು?
ಎಲ್ಲಾ ಅವರವರ ಕರ್ಮ –
ಆದರೆ….
ನಮ್ಮದು ಸಮಾಜವಾದೀ ರಾಷ್ಟ್ರ
ಅಂತ ಖಾದಿಗಳು ಹೇಳುತ್ತಿವೇ
ಕೇಳಿಲ್ಲವೇ ನೀನು.
*****
Related Post
ಸಣ್ಣ ಕತೆ
-
ಎರಡು ಮದುವೆಗಳು
ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…
-
ಕಳಕೊಂಡವನು
ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…
-
ಡಿಪೋದೊಳಗಣ ಕಿಚ್ಚು…
ಚಿತ್ರ: ವಾಲ್ಡೊಪೆಪರ್ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…
-
ಮೃಗಜಲ
"People are trying to work towards a good quality of life for tomorrow instead of living for today, for many… Read more…
-
ದೊಡ್ಡವರು
ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…