Home / ಕವನ / ಕವಿತೆ / ಇವರೇ ನನ್ನವರು

ಇವರೇ ನನ್ನವರು

ಇದು ಬುರ್ಖಾ.
ಶತಮಾನಗಳಿಂದ
ಹಲವಾರು
ನಾನು ಮರುಮಾತಿಲ್ಲದೆ
ಮೌನವಾಗಿ
ಹೊತ್ತು ಬಂದ ಬುರ್ಖಾ.
ಅಂದು ಹಿಂದೂಮ್ಮೆ
ಇದರ ಒಳಗೆಯೇ ನಾನು
ಸಿಡಿಮಿಡಿಕೊಂಡು
ಮೌನವಾಗಿ ಮಿಡಿಕಿದ್ದೆ.
ಬಿಕ್ಕಳಿಸಿ ಅತ್ತಿದ್ದೆ.
ಬಿಡುಗಡೆಗಾಗಿ ಹಲುಬಿದ್ದ.

ಬಾಲ್ಯದ ಆ ನೆನಪು
ಈಗಲೂ ಮಾಸಿಲ್ಲ
ನನಗಿನ್ನೂ ನೆನಪಿದೆ
ಅಂದು ಗೆಳೆಯರ ಮಧ್ಯ.

ಆನಂದದಿಂದ ನಲಿಯುತ್ತಿದ್ದೆ.
ಹರ್ಷದಿಂದ ನಲಿಯುತ್ತಿದ್ದೆ.
ಹದಿಮೂರರಲ್ಲೊಮ್ಮೆ
ಏನಾಯಿತೋ ಕಾಣೆ.
ನೀನೀಗ ಹೆಂಗುಸಾದೆ
ಎಂದರು ನನ್ನವರು.

ಮೂಲಿಯಲಿ ಕೂಡಿಸಿ
ಮರೆಮಾಡಿ ತಿನ್ನಿಸಿ
ಮುದ್ದೆಯಾಗಿ ಬೆಳೆಸಿದರು ನನ್ನ
ಸೂರ್ಯನನೇ ಕಾಣದ ದೇಹ
ಕ್ಷಯದ ಆಗರವಾಗಿ
ಹಳದಿಯಾಗಲು ಕೊನೆಗೆ
ಸೌಂದರ್ಯ ಹೆಚ್ಚಿದೆಯೆಂದು
ಗೌರವದೀ ಕಂಡರು ನನ್ನ.

ಶಾಸ್ರೋಕ್ತವಾದ ದಾಸ್ಯತ್ವ ವಹಿಸಿ,
ದೊಡ್ಡವಳಾದುದಕ್ಕೆ ಲೈಸನ್ಸ್
ಕೊಡಿಸಿದರು ನನ್ನ.
ಬೆಳೆಯಲಿರುವ ಚಿಗುರಿಗೆ
ಮೂಲದಲ್ಲೇ ಚಿವುಟಿ
ಮುಳ್ಳಿನಾ ಬೇಲಿಯಿಟ್ಟು
ವ್ಯಕ್ತಿತ್ವಕ್ಕೆ ಕೊಳ್ಳಿಯಿಟ್ಟು
ಆಕ್ರಮಣ ಮಾಡಿದರು ಇವರು
ಇವರೇ ನನ್ನವರು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...