Home / ಕವನ / ಕವಿತೆ / ಇವರೇ ನನ್ನವರು

ಇವರೇ ನನ್ನವರು

ಇದು ಬುರ್ಖಾ.
ಶತಮಾನಗಳಿಂದ
ಹಲವಾರು
ನಾನು ಮರುಮಾತಿಲ್ಲದೆ
ಮೌನವಾಗಿ
ಹೊತ್ತು ಬಂದ ಬುರ್ಖಾ.
ಅಂದು ಹಿಂದೂಮ್ಮೆ
ಇದರ ಒಳಗೆಯೇ ನಾನು
ಸಿಡಿಮಿಡಿಕೊಂಡು
ಮೌನವಾಗಿ ಮಿಡಿಕಿದ್ದೆ.
ಬಿಕ್ಕಳಿಸಿ ಅತ್ತಿದ್ದೆ.
ಬಿಡುಗಡೆಗಾಗಿ ಹಲುಬಿದ್ದ.

ಬಾಲ್ಯದ ಆ ನೆನಪು
ಈಗಲೂ ಮಾಸಿಲ್ಲ
ನನಗಿನ್ನೂ ನೆನಪಿದೆ
ಅಂದು ಗೆಳೆಯರ ಮಧ್ಯ.

ಆನಂದದಿಂದ ನಲಿಯುತ್ತಿದ್ದೆ.
ಹರ್ಷದಿಂದ ನಲಿಯುತ್ತಿದ್ದೆ.
ಹದಿಮೂರರಲ್ಲೊಮ್ಮೆ
ಏನಾಯಿತೋ ಕಾಣೆ.
ನೀನೀಗ ಹೆಂಗುಸಾದೆ
ಎಂದರು ನನ್ನವರು.

ಮೂಲಿಯಲಿ ಕೂಡಿಸಿ
ಮರೆಮಾಡಿ ತಿನ್ನಿಸಿ
ಮುದ್ದೆಯಾಗಿ ಬೆಳೆಸಿದರು ನನ್ನ
ಸೂರ್ಯನನೇ ಕಾಣದ ದೇಹ
ಕ್ಷಯದ ಆಗರವಾಗಿ
ಹಳದಿಯಾಗಲು ಕೊನೆಗೆ
ಸೌಂದರ್ಯ ಹೆಚ್ಚಿದೆಯೆಂದು
ಗೌರವದೀ ಕಂಡರು ನನ್ನ.

ಶಾಸ್ರೋಕ್ತವಾದ ದಾಸ್ಯತ್ವ ವಹಿಸಿ,
ದೊಡ್ಡವಳಾದುದಕ್ಕೆ ಲೈಸನ್ಸ್
ಕೊಡಿಸಿದರು ನನ್ನ.
ಬೆಳೆಯಲಿರುವ ಚಿಗುರಿಗೆ
ಮೂಲದಲ್ಲೇ ಚಿವುಟಿ
ಮುಳ್ಳಿನಾ ಬೇಲಿಯಿಟ್ಟು
ವ್ಯಕ್ತಿತ್ವಕ್ಕೆ ಕೊಳ್ಳಿಯಿಟ್ಟು
ಆಕ್ರಮಣ ಮಾಡಿದರು ಇವರು
ಇವರೇ ನನ್ನವರು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...