Home / ಕವನ / ಕವಿತೆ / ನನ್ನ ಕಥೆ, ವ್ಯಥೆ

ನನ್ನ ಕಥೆ, ವ್ಯಥೆ

ನಾನು ಹೆಣ್ಣಾದೆ
ಕೂಡಲೆ ಯಾವ ಸಂಬಂಧವೂ ಕೂಡಿ ಬರಲಿಲ್ಲ
ನೋಡುವುದು ಮಾಡುವುದರಲ್ಲಿ ಸ್ವಲ್ಪ ಜಾಲ ಆಯಿತು.
ಸುತ್ತ ನಾಲ್ಕು ಕಡೆ
ಹಲ್ಲು ಬಾಯಿ ಹುಟ್ಟಿ ಕೊಂಡವು
ಬಣ್ಣದ ಬಣ್ಣದ ಕಥೆಗಳಿಗೆ ರೆಕ್ಕೆ ಪುಕ್ಕ ಬಂತು.

ತೆಪ್ಪಗಿರದ ಜನ
ಅನುಕಂಪದ ಸೋಗಿನಲ್ಲಿ
ಚುಚ್ಚಿ, ಚುಚ್ಚಿ ತೃಪ್ತಿ ಪಟ್ಟರು

ನನ್ನನ್ನು ನಾನೇ ನೋಡಿ ಕೊಂಡರೆ
ಜಿಗುಪ್ಸೆಯಾಗುತ್ತಿತ್ತು
ನನಗಾಗಿ ಅಪ್ಪ, ಅಮ್ಮ ಬೀಳೋ ಕಸ್ಟ ನೋಡಿದಾಗ
ತುಂಬಾ ಕೆಟ್ಟದ್ದೆನಿಸುತ್ತಿತ್ತು.
ಆಗ ನನಗೆ ಒಳ್ಳೆ ವಯಸ್ಸು
ಅದು ಒಳಗೇ ನಡೆಸಿತ್ತು ತನ್ನ ಕರಾಮತ್ತು
ಇಷ್ಟೇ ಅಂತ ಹೇಳೋಕಾಗದ ಆಸೆಯಗತ್ತು
ಬದುಕಿರ ಬೇಕಾದ ಪಾಪಕ್ಕಾಗಿ ಒಂದ ಸುಟ್ಟುಕೊಳ್ಳಬೇಕಾಯಿತು.

ಅಂತೂ ಇಂತೂ ಒಂದು ಸಂಬಂಧ ಕುದುರಿತು
ಮದುವೆ ನಿಶ್ಚಯವೂ ಆಯಿತು
ಕಾದಿದ್ದಕ್ಕೆ ನಿರಾಶೆ ಆಗಲಿಲ್ಲ
ಒಳ್ಳೆ ಗಂಡನೇ ಸಿಕ್ಕಿದರು
ಹೊಸ ಪರಿಸರ, ಹೊಸ ಜೀವನ ಆನಂದದಾಯಕವಾಯಿತು

ಕಣ್ಣಿಟ್ಟರು ಕರುಬುವವರು
ಸ್ನೇಹಭಾವದ ಹುಸಿ ದಿಟ ತಿಳಿಯೋದಕ್ಕೆ ಬಿಡಲಿಲ್ಲ
ಜೊತೆಗೆ
ಹೊಗಳಿಕೆ ನಿಗಿ ನಿಗಿ ಉರಿಯೋ ಕೆಂಡದಂತೆ
ಯಾವಾಗಲೂ ಅದನ್ನು ಒಂದು ಅಂತರದಲ್ಲಿ ಇಟ್ಟಿರಬೇಕು
ಯಾಮರೆತರೆ ಸುಡುತ್ತದೆಂಬುದು ಗೊತ್ತಾಗಲಿಲ್ಲ.
ಆದಗ ಇದಗ ಅನ್ನೋದರೊಳಗೆ
ಉಂಡು ನಲಿದರು
ಪ್ರಪಾತದ ತಳ ಕಾಣಿಸಿದರು.

ಹೆದರಿಸಿದರು
ಬಾಯಿ ಬಿಟ್ಟರೆ ಬಣ್ಣಗೆಡುವುದೆಂದರು
ಹಬ್ಬವನ್ನಾಚರಿಸಿದರು.
ಸುದ್ದಿಗೆ ಮಟ್ಟಿ ಕಟ್ಟ ಬಹುದೆ?
ಹಬ್ಬಿ ಬಿಟ್ಟಿತು
ಹೊರ ತಬ್ಬಿದರು
ಪತಿತಳೆಂದ ಕೂಡಿದವರು
ಕೆಟ್ಟವಳೆಂದು ಹೆತ್ತವರು
ಆಸೆ ತೀರಿದಮೇಲೆ ಇನ್ಯಾಕೆ ಅದರ ಉಸಾಬರಿಯೆಂದು ಕೆಡಿಸಿದವರು

ಇಲ್ಲಿಗೆ ಮುಗಿಯಲಿಲ್ಲ ನನ್ನ ಕಥೆ, ವ್ಯಥೆ
ನಾನು ಪಶ್ಚಾತ್ತಾಪದ ಬೆಂಕಿಯಲ್ಲಿ ಬೇಯುತ್ತಿದ್ದೆ
ನಾನೊಬ್ಬ ಹೊಸ ಮನುಷ್ಯಳಾಗಿ ಬದುಕಲು
ಯಾರೂ ಬಿಡಲೇ ಇಲ್ಲ.
ತಪ್ಪು ಮಂದಿಟ್ಟು ಕೊಂಡು ಬಂದರು
ಗಣಿಕೆ ಮಾಡಿದರು
ಬಯಲಿಗೆ ಬಿದ್ದ ನನಗೂ ಅದು ಅನಿವಾರ್ಯವಾಯಿತು
ಕೆರೆಗೂ ಮನೆಗೂ ಇರುವ ಸಾಮಾನ್ಯ ಹಾದಿಯಂತಾದೆ.

ನನ್ನದು ಪಾಪ!
ನಾನು ಬದುಕಿರುವುದು ಪಾಪ!
ನಾನೊಂದು ಸಮಾಜದ ದೊಡ್ಡ ಶಾಪ
ನಿಜ!! ಹೇಳಿ
ನಾನು ಯಾರ ಪಾಪ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...