ನನ್ನ ಕಥೆ, ವ್ಯಥೆ

ನಾನು ಹೆಣ್ಣಾದೆ
ಕೂಡಲೆ ಯಾವ ಸಂಬಂಧವೂ ಕೂಡಿ ಬರಲಿಲ್ಲ
ನೋಡುವುದು ಮಾಡುವುದರಲ್ಲಿ ಸ್ವಲ್ಪ ಜಾಲ ಆಯಿತು.
ಸುತ್ತ ನಾಲ್ಕು ಕಡೆ
ಹಲ್ಲು ಬಾಯಿ ಹುಟ್ಟಿ ಕೊಂಡವು
ಬಣ್ಣದ ಬಣ್ಣದ ಕಥೆಗಳಿಗೆ ರೆಕ್ಕೆ ಪುಕ್ಕ ಬಂತು.

ತೆಪ್ಪಗಿರದ ಜನ
ಅನುಕಂಪದ ಸೋಗಿನಲ್ಲಿ
ಚುಚ್ಚಿ, ಚುಚ್ಚಿ ತೃಪ್ತಿ ಪಟ್ಟರು

ನನ್ನನ್ನು ನಾನೇ ನೋಡಿ ಕೊಂಡರೆ
ಜಿಗುಪ್ಸೆಯಾಗುತ್ತಿತ್ತು
ನನಗಾಗಿ ಅಪ್ಪ, ಅಮ್ಮ ಬೀಳೋ ಕಸ್ಟ ನೋಡಿದಾಗ
ತುಂಬಾ ಕೆಟ್ಟದ್ದೆನಿಸುತ್ತಿತ್ತು.
ಆಗ ನನಗೆ ಒಳ್ಳೆ ವಯಸ್ಸು
ಅದು ಒಳಗೇ ನಡೆಸಿತ್ತು ತನ್ನ ಕರಾಮತ್ತು
ಇಷ್ಟೇ ಅಂತ ಹೇಳೋಕಾಗದ ಆಸೆಯಗತ್ತು
ಬದುಕಿರ ಬೇಕಾದ ಪಾಪಕ್ಕಾಗಿ ಒಂದ ಸುಟ್ಟುಕೊಳ್ಳಬೇಕಾಯಿತು.

ಅಂತೂ ಇಂತೂ ಒಂದು ಸಂಬಂಧ ಕುದುರಿತು
ಮದುವೆ ನಿಶ್ಚಯವೂ ಆಯಿತು
ಕಾದಿದ್ದಕ್ಕೆ ನಿರಾಶೆ ಆಗಲಿಲ್ಲ
ಒಳ್ಳೆ ಗಂಡನೇ ಸಿಕ್ಕಿದರು
ಹೊಸ ಪರಿಸರ, ಹೊಸ ಜೀವನ ಆನಂದದಾಯಕವಾಯಿತು

ಕಣ್ಣಿಟ್ಟರು ಕರುಬುವವರು
ಸ್ನೇಹಭಾವದ ಹುಸಿ ದಿಟ ತಿಳಿಯೋದಕ್ಕೆ ಬಿಡಲಿಲ್ಲ
ಜೊತೆಗೆ
ಹೊಗಳಿಕೆ ನಿಗಿ ನಿಗಿ ಉರಿಯೋ ಕೆಂಡದಂತೆ
ಯಾವಾಗಲೂ ಅದನ್ನು ಒಂದು ಅಂತರದಲ್ಲಿ ಇಟ್ಟಿರಬೇಕು
ಯಾಮರೆತರೆ ಸುಡುತ್ತದೆಂಬುದು ಗೊತ್ತಾಗಲಿಲ್ಲ.
ಆದಗ ಇದಗ ಅನ್ನೋದರೊಳಗೆ
ಉಂಡು ನಲಿದರು
ಪ್ರಪಾತದ ತಳ ಕಾಣಿಸಿದರು.

ಹೆದರಿಸಿದರು
ಬಾಯಿ ಬಿಟ್ಟರೆ ಬಣ್ಣಗೆಡುವುದೆಂದರು
ಹಬ್ಬವನ್ನಾಚರಿಸಿದರು.
ಸುದ್ದಿಗೆ ಮಟ್ಟಿ ಕಟ್ಟ ಬಹುದೆ?
ಹಬ್ಬಿ ಬಿಟ್ಟಿತು
ಹೊರ ತಬ್ಬಿದರು
ಪತಿತಳೆಂದ ಕೂಡಿದವರು
ಕೆಟ್ಟವಳೆಂದು ಹೆತ್ತವರು
ಆಸೆ ತೀರಿದಮೇಲೆ ಇನ್ಯಾಕೆ ಅದರ ಉಸಾಬರಿಯೆಂದು ಕೆಡಿಸಿದವರು

ಇಲ್ಲಿಗೆ ಮುಗಿಯಲಿಲ್ಲ ನನ್ನ ಕಥೆ, ವ್ಯಥೆ
ನಾನು ಪಶ್ಚಾತ್ತಾಪದ ಬೆಂಕಿಯಲ್ಲಿ ಬೇಯುತ್ತಿದ್ದೆ
ನಾನೊಬ್ಬ ಹೊಸ ಮನುಷ್ಯಳಾಗಿ ಬದುಕಲು
ಯಾರೂ ಬಿಡಲೇ ಇಲ್ಲ.
ತಪ್ಪು ಮಂದಿಟ್ಟು ಕೊಂಡು ಬಂದರು
ಗಣಿಕೆ ಮಾಡಿದರು
ಬಯಲಿಗೆ ಬಿದ್ದ ನನಗೂ ಅದು ಅನಿವಾರ್ಯವಾಯಿತು
ಕೆರೆಗೂ ಮನೆಗೂ ಇರುವ ಸಾಮಾನ್ಯ ಹಾದಿಯಂತಾದೆ.

ನನ್ನದು ಪಾಪ!
ನಾನು ಬದುಕಿರುವುದು ಪಾಪ!
ನಾನೊಂದು ಸಮಾಜದ ದೊಡ್ಡ ಶಾಪ
ನಿಜ!! ಹೇಳಿ
ನಾನು ಯಾರ ಪಾಪ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೇರು ಕೊಯ್ಯುವವರು
Next post ದಾಖಲೆ

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys