Home / ಕವನ / ಕವಿತೆ / ನನ್ನ ಕಥೆ, ವ್ಯಥೆ

ನನ್ನ ಕಥೆ, ವ್ಯಥೆ

ನಾನು ಹೆಣ್ಣಾದೆ
ಕೂಡಲೆ ಯಾವ ಸಂಬಂಧವೂ ಕೂಡಿ ಬರಲಿಲ್ಲ
ನೋಡುವುದು ಮಾಡುವುದರಲ್ಲಿ ಸ್ವಲ್ಪ ಜಾಲ ಆಯಿತು.
ಸುತ್ತ ನಾಲ್ಕು ಕಡೆ
ಹಲ್ಲು ಬಾಯಿ ಹುಟ್ಟಿ ಕೊಂಡವು
ಬಣ್ಣದ ಬಣ್ಣದ ಕಥೆಗಳಿಗೆ ರೆಕ್ಕೆ ಪುಕ್ಕ ಬಂತು.

ತೆಪ್ಪಗಿರದ ಜನ
ಅನುಕಂಪದ ಸೋಗಿನಲ್ಲಿ
ಚುಚ್ಚಿ, ಚುಚ್ಚಿ ತೃಪ್ತಿ ಪಟ್ಟರು

ನನ್ನನ್ನು ನಾನೇ ನೋಡಿ ಕೊಂಡರೆ
ಜಿಗುಪ್ಸೆಯಾಗುತ್ತಿತ್ತು
ನನಗಾಗಿ ಅಪ್ಪ, ಅಮ್ಮ ಬೀಳೋ ಕಸ್ಟ ನೋಡಿದಾಗ
ತುಂಬಾ ಕೆಟ್ಟದ್ದೆನಿಸುತ್ತಿತ್ತು.
ಆಗ ನನಗೆ ಒಳ್ಳೆ ವಯಸ್ಸು
ಅದು ಒಳಗೇ ನಡೆಸಿತ್ತು ತನ್ನ ಕರಾಮತ್ತು
ಇಷ್ಟೇ ಅಂತ ಹೇಳೋಕಾಗದ ಆಸೆಯಗತ್ತು
ಬದುಕಿರ ಬೇಕಾದ ಪಾಪಕ್ಕಾಗಿ ಒಂದ ಸುಟ್ಟುಕೊಳ್ಳಬೇಕಾಯಿತು.

ಅಂತೂ ಇಂತೂ ಒಂದು ಸಂಬಂಧ ಕುದುರಿತು
ಮದುವೆ ನಿಶ್ಚಯವೂ ಆಯಿತು
ಕಾದಿದ್ದಕ್ಕೆ ನಿರಾಶೆ ಆಗಲಿಲ್ಲ
ಒಳ್ಳೆ ಗಂಡನೇ ಸಿಕ್ಕಿದರು
ಹೊಸ ಪರಿಸರ, ಹೊಸ ಜೀವನ ಆನಂದದಾಯಕವಾಯಿತು

ಕಣ್ಣಿಟ್ಟರು ಕರುಬುವವರು
ಸ್ನೇಹಭಾವದ ಹುಸಿ ದಿಟ ತಿಳಿಯೋದಕ್ಕೆ ಬಿಡಲಿಲ್ಲ
ಜೊತೆಗೆ
ಹೊಗಳಿಕೆ ನಿಗಿ ನಿಗಿ ಉರಿಯೋ ಕೆಂಡದಂತೆ
ಯಾವಾಗಲೂ ಅದನ್ನು ಒಂದು ಅಂತರದಲ್ಲಿ ಇಟ್ಟಿರಬೇಕು
ಯಾಮರೆತರೆ ಸುಡುತ್ತದೆಂಬುದು ಗೊತ್ತಾಗಲಿಲ್ಲ.
ಆದಗ ಇದಗ ಅನ್ನೋದರೊಳಗೆ
ಉಂಡು ನಲಿದರು
ಪ್ರಪಾತದ ತಳ ಕಾಣಿಸಿದರು.

ಹೆದರಿಸಿದರು
ಬಾಯಿ ಬಿಟ್ಟರೆ ಬಣ್ಣಗೆಡುವುದೆಂದರು
ಹಬ್ಬವನ್ನಾಚರಿಸಿದರು.
ಸುದ್ದಿಗೆ ಮಟ್ಟಿ ಕಟ್ಟ ಬಹುದೆ?
ಹಬ್ಬಿ ಬಿಟ್ಟಿತು
ಹೊರ ತಬ್ಬಿದರು
ಪತಿತಳೆಂದ ಕೂಡಿದವರು
ಕೆಟ್ಟವಳೆಂದು ಹೆತ್ತವರು
ಆಸೆ ತೀರಿದಮೇಲೆ ಇನ್ಯಾಕೆ ಅದರ ಉಸಾಬರಿಯೆಂದು ಕೆಡಿಸಿದವರು

ಇಲ್ಲಿಗೆ ಮುಗಿಯಲಿಲ್ಲ ನನ್ನ ಕಥೆ, ವ್ಯಥೆ
ನಾನು ಪಶ್ಚಾತ್ತಾಪದ ಬೆಂಕಿಯಲ್ಲಿ ಬೇಯುತ್ತಿದ್ದೆ
ನಾನೊಬ್ಬ ಹೊಸ ಮನುಷ್ಯಳಾಗಿ ಬದುಕಲು
ಯಾರೂ ಬಿಡಲೇ ಇಲ್ಲ.
ತಪ್ಪು ಮಂದಿಟ್ಟು ಕೊಂಡು ಬಂದರು
ಗಣಿಕೆ ಮಾಡಿದರು
ಬಯಲಿಗೆ ಬಿದ್ದ ನನಗೂ ಅದು ಅನಿವಾರ್ಯವಾಯಿತು
ಕೆರೆಗೂ ಮನೆಗೂ ಇರುವ ಸಾಮಾನ್ಯ ಹಾದಿಯಂತಾದೆ.

ನನ್ನದು ಪಾಪ!
ನಾನು ಬದುಕಿರುವುದು ಪಾಪ!
ನಾನೊಂದು ಸಮಾಜದ ದೊಡ್ಡ ಶಾಪ
ನಿಜ!! ಹೇಳಿ
ನಾನು ಯಾರ ಪಾಪ?
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...