Home / ಕವನ / ಕವಿತೆ / ನನ್ನ ಕಥೆ, ವ್ಯಥೆ

ನನ್ನ ಕಥೆ, ವ್ಯಥೆ

ನಾನು ಹೆಣ್ಣಾದೆ
ಕೂಡಲೆ ಯಾವ ಸಂಬಂಧವೂ ಕೂಡಿ ಬರಲಿಲ್ಲ
ನೋಡುವುದು ಮಾಡುವುದರಲ್ಲಿ ಸ್ವಲ್ಪ ಜಾಲ ಆಯಿತು.
ಸುತ್ತ ನಾಲ್ಕು ಕಡೆ
ಹಲ್ಲು ಬಾಯಿ ಹುಟ್ಟಿ ಕೊಂಡವು
ಬಣ್ಣದ ಬಣ್ಣದ ಕಥೆಗಳಿಗೆ ರೆಕ್ಕೆ ಪುಕ್ಕ ಬಂತು.

ತೆಪ್ಪಗಿರದ ಜನ
ಅನುಕಂಪದ ಸೋಗಿನಲ್ಲಿ
ಚುಚ್ಚಿ, ಚುಚ್ಚಿ ತೃಪ್ತಿ ಪಟ್ಟರು

ನನ್ನನ್ನು ನಾನೇ ನೋಡಿ ಕೊಂಡರೆ
ಜಿಗುಪ್ಸೆಯಾಗುತ್ತಿತ್ತು
ನನಗಾಗಿ ಅಪ್ಪ, ಅಮ್ಮ ಬೀಳೋ ಕಸ್ಟ ನೋಡಿದಾಗ
ತುಂಬಾ ಕೆಟ್ಟದ್ದೆನಿಸುತ್ತಿತ್ತು.
ಆಗ ನನಗೆ ಒಳ್ಳೆ ವಯಸ್ಸು
ಅದು ಒಳಗೇ ನಡೆಸಿತ್ತು ತನ್ನ ಕರಾಮತ್ತು
ಇಷ್ಟೇ ಅಂತ ಹೇಳೋಕಾಗದ ಆಸೆಯಗತ್ತು
ಬದುಕಿರ ಬೇಕಾದ ಪಾಪಕ್ಕಾಗಿ ಒಂದ ಸುಟ್ಟುಕೊಳ್ಳಬೇಕಾಯಿತು.

ಅಂತೂ ಇಂತೂ ಒಂದು ಸಂಬಂಧ ಕುದುರಿತು
ಮದುವೆ ನಿಶ್ಚಯವೂ ಆಯಿತು
ಕಾದಿದ್ದಕ್ಕೆ ನಿರಾಶೆ ಆಗಲಿಲ್ಲ
ಒಳ್ಳೆ ಗಂಡನೇ ಸಿಕ್ಕಿದರು
ಹೊಸ ಪರಿಸರ, ಹೊಸ ಜೀವನ ಆನಂದದಾಯಕವಾಯಿತು

ಕಣ್ಣಿಟ್ಟರು ಕರುಬುವವರು
ಸ್ನೇಹಭಾವದ ಹುಸಿ ದಿಟ ತಿಳಿಯೋದಕ್ಕೆ ಬಿಡಲಿಲ್ಲ
ಜೊತೆಗೆ
ಹೊಗಳಿಕೆ ನಿಗಿ ನಿಗಿ ಉರಿಯೋ ಕೆಂಡದಂತೆ
ಯಾವಾಗಲೂ ಅದನ್ನು ಒಂದು ಅಂತರದಲ್ಲಿ ಇಟ್ಟಿರಬೇಕು
ಯಾಮರೆತರೆ ಸುಡುತ್ತದೆಂಬುದು ಗೊತ್ತಾಗಲಿಲ್ಲ.
ಆದಗ ಇದಗ ಅನ್ನೋದರೊಳಗೆ
ಉಂಡು ನಲಿದರು
ಪ್ರಪಾತದ ತಳ ಕಾಣಿಸಿದರು.

ಹೆದರಿಸಿದರು
ಬಾಯಿ ಬಿಟ್ಟರೆ ಬಣ್ಣಗೆಡುವುದೆಂದರು
ಹಬ್ಬವನ್ನಾಚರಿಸಿದರು.
ಸುದ್ದಿಗೆ ಮಟ್ಟಿ ಕಟ್ಟ ಬಹುದೆ?
ಹಬ್ಬಿ ಬಿಟ್ಟಿತು
ಹೊರ ತಬ್ಬಿದರು
ಪತಿತಳೆಂದ ಕೂಡಿದವರು
ಕೆಟ್ಟವಳೆಂದು ಹೆತ್ತವರು
ಆಸೆ ತೀರಿದಮೇಲೆ ಇನ್ಯಾಕೆ ಅದರ ಉಸಾಬರಿಯೆಂದು ಕೆಡಿಸಿದವರು

ಇಲ್ಲಿಗೆ ಮುಗಿಯಲಿಲ್ಲ ನನ್ನ ಕಥೆ, ವ್ಯಥೆ
ನಾನು ಪಶ್ಚಾತ್ತಾಪದ ಬೆಂಕಿಯಲ್ಲಿ ಬೇಯುತ್ತಿದ್ದೆ
ನಾನೊಬ್ಬ ಹೊಸ ಮನುಷ್ಯಳಾಗಿ ಬದುಕಲು
ಯಾರೂ ಬಿಡಲೇ ಇಲ್ಲ.
ತಪ್ಪು ಮಂದಿಟ್ಟು ಕೊಂಡು ಬಂದರು
ಗಣಿಕೆ ಮಾಡಿದರು
ಬಯಲಿಗೆ ಬಿದ್ದ ನನಗೂ ಅದು ಅನಿವಾರ್ಯವಾಯಿತು
ಕೆರೆಗೂ ಮನೆಗೂ ಇರುವ ಸಾಮಾನ್ಯ ಹಾದಿಯಂತಾದೆ.

ನನ್ನದು ಪಾಪ!
ನಾನು ಬದುಕಿರುವುದು ಪಾಪ!
ನಾನೊಂದು ಸಮಾಜದ ದೊಡ್ಡ ಶಾಪ
ನಿಜ!! ಹೇಳಿ
ನಾನು ಯಾರ ಪಾಪ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...