ಬೇರು ಕೊಯ್ಯುವವರು

ಬೇರು ಕೊಯ್ಯುವವರು – ಇವರು
ಬೇರು ಕೊಯ್ಯುವವರು
ಫಸಲಿನ ಬಗ್ಗೆ ಚಿಂತನೆ ಇಲ್ಲ
ಬೇರಿನ ಬಗ್ಗೆಯೆ ಚಿಂತೆಯು ಎಲ್ಲ //ಪ//

ನಗುವಾಗ ಅದು ನಗೆಯೊ ಹಗೆಯೊ
ಅಳುವಾಗ ಅದು ಪುರುಷರ ಬಗೆಯೊ
ಯಾವುದು ಸತ್ಯ ಯಾವುದು ಮಿಥ್ಯ
ಬಲ್ಲವರಾರು ಅಂತಿಮ ಸತ್ಯ?

ಕಂಕ್ಳಲಿ ಬೆಕ್ಕನು ಹೊರುವುದು ಏಕೆ!
ದಾಕ್ಷಿಣ್ಯಕೆ ಬಸಿರಾಗುವುದೇಕೆ!
ಬೀದಿ ಮಾರಮ್ಮ ಬೀದಿಯಲಿರಲು
ಮನೆತನಕ ಬಂದು ಹೋಗಲೆಬೇಕೆ?

ಮೀನಿನ ಹೆಜ್ಜೆಯ ಅರಿವುದು ಸಾಧ್ಯ
ಕೋಳಿಗೆ ಮಸಾಲೆ ಅಲ್ಲವೊ ಚೋದ್ಯ
ನಡೆದರೆ ದಾರಿ ತೆರೆವುದು ಮುಂದೆ
ಒಂಟಿ ಸಲಗಕೆ ದಾರಿಯು ಹಿಂದೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲ್ಲಿ ಹೋದನ್ರೀ ನಮ್ಮ ಹುಡುಗ?
Next post ನನ್ನ ಕಥೆ, ವ್ಯಥೆ

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…