Home / ಕವನ / ಕವಿತೆ / ನನ್ನ ಅಂಬೋಣ

ನನ್ನ ಅಂಬೋಣ

ನಾವು, ನೀವು
ನಮ್ಮ, ನಮ್ಮ ಹೆಂಡಿರ ಪ್ರೀತಿ ಮಾಡುವುದು ನಿಜವೇನಾ?
ನನಗೇನೋ ಪೂರ್ಣ ಅನುಮಾನಾ!
ಜಾಣ ರೈತನೊಬ್ಬ ತನ್ನ ದನಗಳ ಜೋಪಾನ ಮಾಡಿದಂತೆ
ಎಂಬುದೇ ನನ್ನ ಅಂಬೋಣ.

ಅವ, ಕೋಡೆರೆದು, ಕಳಸ ಇಟ್ಟು,
ಹೊತ್ತಿಗೆ ಹುಲ್ಲು, ನೀರು ನೋಡಿ,
ಮೈತಿಕ್ಕಿ ತೀಡಿ, ಸ್ವಚ್ಛ ಮಾಡಿ
ಲಕ್ಷಣವಾಗಿ ಇಟ್ಟು ಕೊಳ್ಳುವುದು ಯಾತಕ್ಕಾಗಿ
ಒಳ್ಳೆ ಬೆಲೆ ಬರುವುದೇ ತಡ ಮಾರೋ ಉದ್ದೇಶಕ್ಕಾಗಿ,

ಅವುಗಳಲ್ಲಿ ಪ್ರಾಣ ಇಟ್ಕೊಂಡು
ಎತ್ತಿಲ್ಲದವನಿಗೆ ಎದೆಯಿಲ್ಲ ಅಂದು
ಜಡ್ಡು ಜಾಡು ಬಂದು ಕೇಡಾಗದಂತೆ, ಕಾಡಾಗದಂತೆ
ಮೈಯೆಲ್ಲಾ ಕಣ್ಣಾಗಿ ನೋಡಿಕೊಳ್ಳುವನು.

ಏನೇ ಮಾಡುತ್ತಿದ್ದರು, ಎಲ್ಲಿಗೆ ಹೋದರೂ
ಮನಸೆಂಬ ಮನಸೆಲ್ಲಾ ಇತ್ತ ಕಡೆಗೇನೆ ಇಟ್ಟು ನಡೆಯುವನು
ಬಿಟ್ಟರೆ ಅವನಿಗೆ ಬೆಳೆಸಿರಿಯಲ್ಲಿ?
ಬಾಳೇ ಕೆಟ್ಟೋಗಿ ಆಟವೇ ಕಟ್ಟಾಗಿ ಹೋಗುವುದಲ್ಲ ಅಷ್ಟಕ್ಕಾಗಿ!
ಮತ್ತೇನು ಅವನ
ಹಿರಿಯ ಭೂತ ದಯೆಯ ಪ್ರೇರಣೆಯಿಂದ ಅಂತ ತಿಳಕೊಂಡಿರೇನು?

ಮುಂದೆ ಕೇಳಿ –
ಕೆಲ್ಸ ಕಾರ್ಯ ಬಿದ್ದಾಗ ಅವನು ಮುಖ ಮೋರೆ ನೋಡಲ್ಲ
ಎಂಥಾ ಹಿಂಸೆಗೂ ಹೇಸೋನಲ್ಲ
ಕೆಲ್ಸ ಆಗೋತನಕ ಮನುಷ್ಯನಾಗಿರಲ್ಲ.

ಅವನಿಗೆ-
ಸುಸ್ತು, ಸಾಕೆನ್ನದಂತ
ಸಾದೆತ್ತುವಾದರೆ ಅಚ್ಚು ಮೆಚ್ಚು.
ನಿಧಾನಕ್ಕೆ ಬಿದ್ದ, ಮೊಂಡಾಟ ಮಾಡೋ, ಹಾಯಲು ಬರುವ
ಪಟಿಂಗನಾದರೆ

ಸಾಯುತ್ತೋ ಬದುಕುತ್ತೋ ಎನ್ನದೆ ಚಚ್ಚಿ
ಬಗ್ಗಿಸಿಕೊಳ್ಳಲು ನೋಡುವನು.
ಬಗ್ಗದೆ ಹೋದರೆ
ಬಂದದ್ದು ಬರಲೆಂದು
ಮುಗಿಸಿ | ನಡಿ ಎನ್ನುವನು.

ಈಗ ಹೇಳಿ
ಇದೊಂದು ಪ್ರೇಮಾನಾ?
ಇವನೊಬ್ಬ ಪ್ರೇಮಿನಾ?
ನಮ್ದು ನಿಮ್ದು ಇದರಂತೆ ಅಲ್ಲವೇನಾ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...