Home / ಕವನ / ಕವಿತೆ / ನನ್ನ ಅಂಬೋಣ

ನನ್ನ ಅಂಬೋಣ

ನಾವು, ನೀವು
ನಮ್ಮ, ನಮ್ಮ ಹೆಂಡಿರ ಪ್ರೀತಿ ಮಾಡುವುದು ನಿಜವೇನಾ?
ನನಗೇನೋ ಪೂರ್ಣ ಅನುಮಾನಾ!
ಜಾಣ ರೈತನೊಬ್ಬ ತನ್ನ ದನಗಳ ಜೋಪಾನ ಮಾಡಿದಂತೆ
ಎಂಬುದೇ ನನ್ನ ಅಂಬೋಣ.

ಅವ, ಕೋಡೆರೆದು, ಕಳಸ ಇಟ್ಟು,
ಹೊತ್ತಿಗೆ ಹುಲ್ಲು, ನೀರು ನೋಡಿ,
ಮೈತಿಕ್ಕಿ ತೀಡಿ, ಸ್ವಚ್ಛ ಮಾಡಿ
ಲಕ್ಷಣವಾಗಿ ಇಟ್ಟು ಕೊಳ್ಳುವುದು ಯಾತಕ್ಕಾಗಿ
ಒಳ್ಳೆ ಬೆಲೆ ಬರುವುದೇ ತಡ ಮಾರೋ ಉದ್ದೇಶಕ್ಕಾಗಿ,

ಅವುಗಳಲ್ಲಿ ಪ್ರಾಣ ಇಟ್ಕೊಂಡು
ಎತ್ತಿಲ್ಲದವನಿಗೆ ಎದೆಯಿಲ್ಲ ಅಂದು
ಜಡ್ಡು ಜಾಡು ಬಂದು ಕೇಡಾಗದಂತೆ, ಕಾಡಾಗದಂತೆ
ಮೈಯೆಲ್ಲಾ ಕಣ್ಣಾಗಿ ನೋಡಿಕೊಳ್ಳುವನು.

ಏನೇ ಮಾಡುತ್ತಿದ್ದರು, ಎಲ್ಲಿಗೆ ಹೋದರೂ
ಮನಸೆಂಬ ಮನಸೆಲ್ಲಾ ಇತ್ತ ಕಡೆಗೇನೆ ಇಟ್ಟು ನಡೆಯುವನು
ಬಿಟ್ಟರೆ ಅವನಿಗೆ ಬೆಳೆಸಿರಿಯಲ್ಲಿ?
ಬಾಳೇ ಕೆಟ್ಟೋಗಿ ಆಟವೇ ಕಟ್ಟಾಗಿ ಹೋಗುವುದಲ್ಲ ಅಷ್ಟಕ್ಕಾಗಿ!
ಮತ್ತೇನು ಅವನ
ಹಿರಿಯ ಭೂತ ದಯೆಯ ಪ್ರೇರಣೆಯಿಂದ ಅಂತ ತಿಳಕೊಂಡಿರೇನು?

ಮುಂದೆ ಕೇಳಿ –
ಕೆಲ್ಸ ಕಾರ್ಯ ಬಿದ್ದಾಗ ಅವನು ಮುಖ ಮೋರೆ ನೋಡಲ್ಲ
ಎಂಥಾ ಹಿಂಸೆಗೂ ಹೇಸೋನಲ್ಲ
ಕೆಲ್ಸ ಆಗೋತನಕ ಮನುಷ್ಯನಾಗಿರಲ್ಲ.

ಅವನಿಗೆ-
ಸುಸ್ತು, ಸಾಕೆನ್ನದಂತ
ಸಾದೆತ್ತುವಾದರೆ ಅಚ್ಚು ಮೆಚ್ಚು.
ನಿಧಾನಕ್ಕೆ ಬಿದ್ದ, ಮೊಂಡಾಟ ಮಾಡೋ, ಹಾಯಲು ಬರುವ
ಪಟಿಂಗನಾದರೆ

ಸಾಯುತ್ತೋ ಬದುಕುತ್ತೋ ಎನ್ನದೆ ಚಚ್ಚಿ
ಬಗ್ಗಿಸಿಕೊಳ್ಳಲು ನೋಡುವನು.
ಬಗ್ಗದೆ ಹೋದರೆ
ಬಂದದ್ದು ಬರಲೆಂದು
ಮುಗಿಸಿ | ನಡಿ ಎನ್ನುವನು.

ಈಗ ಹೇಳಿ
ಇದೊಂದು ಪ್ರೇಮಾನಾ?
ಇವನೊಬ್ಬ ಪ್ರೇಮಿನಾ?
ನಮ್ದು ನಿಮ್ದು ಇದರಂತೆ ಅಲ್ಲವೇನಾ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...