Home / ಕವನ / ಕವಿತೆ / ನನ್ನ ಅಂಬೋಣ

ನನ್ನ ಅಂಬೋಣ

ನಾವು, ನೀವು
ನಮ್ಮ, ನಮ್ಮ ಹೆಂಡಿರ ಪ್ರೀತಿ ಮಾಡುವುದು ನಿಜವೇನಾ?
ನನಗೇನೋ ಪೂರ್ಣ ಅನುಮಾನಾ!
ಜಾಣ ರೈತನೊಬ್ಬ ತನ್ನ ದನಗಳ ಜೋಪಾನ ಮಾಡಿದಂತೆ
ಎಂಬುದೇ ನನ್ನ ಅಂಬೋಣ.

ಅವ, ಕೋಡೆರೆದು, ಕಳಸ ಇಟ್ಟು,
ಹೊತ್ತಿಗೆ ಹುಲ್ಲು, ನೀರು ನೋಡಿ,
ಮೈತಿಕ್ಕಿ ತೀಡಿ, ಸ್ವಚ್ಛ ಮಾಡಿ
ಲಕ್ಷಣವಾಗಿ ಇಟ್ಟು ಕೊಳ್ಳುವುದು ಯಾತಕ್ಕಾಗಿ
ಒಳ್ಳೆ ಬೆಲೆ ಬರುವುದೇ ತಡ ಮಾರೋ ಉದ್ದೇಶಕ್ಕಾಗಿ,

ಅವುಗಳಲ್ಲಿ ಪ್ರಾಣ ಇಟ್ಕೊಂಡು
ಎತ್ತಿಲ್ಲದವನಿಗೆ ಎದೆಯಿಲ್ಲ ಅಂದು
ಜಡ್ಡು ಜಾಡು ಬಂದು ಕೇಡಾಗದಂತೆ, ಕಾಡಾಗದಂತೆ
ಮೈಯೆಲ್ಲಾ ಕಣ್ಣಾಗಿ ನೋಡಿಕೊಳ್ಳುವನು.

ಏನೇ ಮಾಡುತ್ತಿದ್ದರು, ಎಲ್ಲಿಗೆ ಹೋದರೂ
ಮನಸೆಂಬ ಮನಸೆಲ್ಲಾ ಇತ್ತ ಕಡೆಗೇನೆ ಇಟ್ಟು ನಡೆಯುವನು
ಬಿಟ್ಟರೆ ಅವನಿಗೆ ಬೆಳೆಸಿರಿಯಲ್ಲಿ?
ಬಾಳೇ ಕೆಟ್ಟೋಗಿ ಆಟವೇ ಕಟ್ಟಾಗಿ ಹೋಗುವುದಲ್ಲ ಅಷ್ಟಕ್ಕಾಗಿ!
ಮತ್ತೇನು ಅವನ
ಹಿರಿಯ ಭೂತ ದಯೆಯ ಪ್ರೇರಣೆಯಿಂದ ಅಂತ ತಿಳಕೊಂಡಿರೇನು?

ಮುಂದೆ ಕೇಳಿ –
ಕೆಲ್ಸ ಕಾರ್ಯ ಬಿದ್ದಾಗ ಅವನು ಮುಖ ಮೋರೆ ನೋಡಲ್ಲ
ಎಂಥಾ ಹಿಂಸೆಗೂ ಹೇಸೋನಲ್ಲ
ಕೆಲ್ಸ ಆಗೋತನಕ ಮನುಷ್ಯನಾಗಿರಲ್ಲ.

ಅವನಿಗೆ-
ಸುಸ್ತು, ಸಾಕೆನ್ನದಂತ
ಸಾದೆತ್ತುವಾದರೆ ಅಚ್ಚು ಮೆಚ್ಚು.
ನಿಧಾನಕ್ಕೆ ಬಿದ್ದ, ಮೊಂಡಾಟ ಮಾಡೋ, ಹಾಯಲು ಬರುವ
ಪಟಿಂಗನಾದರೆ

ಸಾಯುತ್ತೋ ಬದುಕುತ್ತೋ ಎನ್ನದೆ ಚಚ್ಚಿ
ಬಗ್ಗಿಸಿಕೊಳ್ಳಲು ನೋಡುವನು.
ಬಗ್ಗದೆ ಹೋದರೆ
ಬಂದದ್ದು ಬರಲೆಂದು
ಮುಗಿಸಿ | ನಡಿ ಎನ್ನುವನು.

ಈಗ ಹೇಳಿ
ಇದೊಂದು ಪ್ರೇಮಾನಾ?
ಇವನೊಬ್ಬ ಪ್ರೇಮಿನಾ?
ನಮ್ದು ನಿಮ್ದು ಇದರಂತೆ ಅಲ್ಲವೇನಾ?
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...