ತಾಯಿ ಸರಸ್ವತಿ

ಬೇಗನೆ ಬಾರಮ್ಮಾ ತಾಯಿ ಸರಸ್ವತಿ
ಬೇಗನೆ ಬಾರೇ ಮನಮಂದಿರಕೆ || ಪ ||

ಚಿತ್ತ ಸರಸಿಯನು ತಿಳಿಗೊಳಿಸಮ್ಮಾ
ನಿತ್ಯವು ಅರಳಲಿ ಹೃದಯಕಮಲವಲ್ಲಿ
ಭಾವ ಸುಗಂಧವ ಎಲ್ಲಿಡೆ ಬೀರಲಿ
ಪಾವನಗೊಳಿಸೇ ಅದರಲಿ ಕುಳಿತು || ೧ ||

ಎದೆಯ ಬಟ್ಟಲು ಭಕ್ತಿ ತೀರ್ಥದಿ ತುಂಬಿ
ಹದವಾಗಿ ತುಳುಕಲಿ ಕಂಬನಿ ಧಾರಾ
ತೊಳೆದು ಹೋಗಲಿ ನನ್ನ ಮಲಿನತೆಯೆಲ್ಲಾ
ಹೂ ಹಗುರಾಗಲಿ ಜೀವನ ಭಾರಾ || ೨ ||

ಪಾಪ ಕೂಪಗಳು ಅಳಿಯಲಿ ತಾವೇ
ತಾಪ ತಲ್ಲಣಗಳು ಬಾಧಿಸದಿರಲಿ
ದೋಷರಾಶಿ ಕಸ ಉರಿದು ಹೋಗಲಿ
ಪೋಷಿಸುತಲಿ ನೀ ನೆಲೆಸಿರು ತಾಯಿ || ೩ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೂಲಿಯಾನ
Next post ಹಿಂದೂಮುಸಲ್ಮಾನರ ಐಕ್ಯ – ೩

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

cheap jordans|wholesale air max|wholesale jordans|wholesale jewelry|wholesale jerseys