ಅಯ್ಯಯ್ಯ ನನಗಂಡ ಪಡಪೋಸಿ ಬಿಕನೇಸಿ

ಅಯ್ಯಯ್ಯ ನನಗಂಡ ಪಡಪೋಸಿ ಬಿಕನೇಸಿ
ಹೊಸಗಂಡ ರಸಗಂಡ ಕೈಯತಾರ ||ಪಲ್ಲ||

ಸಪ್ಪಾನ ಸಪ್ಪಾಟಿ ಆ ಗಂಡ ಹಳೆರಗಟಿ
ನನಗೆಣಿಯ ನೀ ಠೀಕು ಠುಮುಠುಮುಕಿ
ತಾತಾರ ಬಾಬಾರ ಸರದಾರ ಸಾವ್ಕಾರ
ನಿನ ಜೀವ ಗೆಳತ್ಯಾನು ಝುಮುಝುಮುಕಿ ||೧||

ಕುಂತುಂಡ್ರ ಪಡಿರೊಟ್ಟಿ ತಿಂತಾನ ಆ ಗಂಡ
ಮನಿತುಂಬ ಮಣಹೂಂಸು ತುಂಬತಾನ
ಬಾ ಅಂದ್ರ ಬ್ಯಾಡಂತ ಗೊರಕೀಯ ಹೊಡಿತಾನ
ಬೆಳಗಾದ್ರ ಊರ್‍ಹೊರಗೆ ಓಡತಾನ ||೨||

ನನಗ್ಯಾಕ ತಿಳಿವಲ್ತು ಯಾಕಂತ ಹೊಳಿವಲ್ತು
ನಿನಕಂಡ್ರ ಎದಿಯಾಗ ಝುಂಗುಟ್ಟಿತ
ತೊಡಿಯಾಗ ಕಟ್ಟಿರಿವಿ ಕಡಿದಾಂಗ ನಡುಕಾತ
ಖುಶಿಯಾಗ ರಾತ್ರ್‍ಯಾಗ ಘುಂಘುಟ್ಟತ ||೩||

ಮಾಡ್ಕೊಂಡ ಮನಗಂಡ ಜಾಲೀಯ ಬೊಡ್ಯಾದ
ನೀನಾದಿ ಕ್ಯಾದೀಗಿ ಗಂಡುಹಕ್ಕಿ
ಸಂಪೀಗಿ ತಂಪಾದಿ ಸೋಬಾನ ದಿಂಪಾದಿ
ತುಟಿಯಾಗ ತುಟಿಯಿಟ್ಟು ಪಿಂಡಮುಕ್ಕಿ ||೪||

ಆ ಗಂಡ ನನ್ಹಿಡಿದು ಮಕಮಾರಿ ಕಚ್ಚಾಗ
ನಿನನೆನಪು ನನಗಾಗಿ ನಾ ಅತ್ತೆನೆ
ದೇಹಕ್ಕ ಆ ಗಂಡ ಯೋಗಕ್ಕ ನೀ ಗಂಡ
ನಿನಮಾರಿ ನೆನಪಾಗಿ ಭೋ ಅತ್ತೆನೆ ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರೈಲು
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೪

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…