ಅಯ್ಯಯ್ಯ ನನಗಂಡ ಪಡಪೋಸಿ ಬಿಕನೇಸಿ

ಅಯ್ಯಯ್ಯ ನನಗಂಡ ಪಡಪೋಸಿ ಬಿಕನೇಸಿ
ಹೊಸಗಂಡ ರಸಗಂಡ ಕೈಯತಾರ ||ಪಲ್ಲ||

ಸಪ್ಪಾನ ಸಪ್ಪಾಟಿ ಆ ಗಂಡ ಹಳೆರಗಟಿ
ನನಗೆಣಿಯ ನೀ ಠೀಕು ಠುಮುಠುಮುಕಿ
ತಾತಾರ ಬಾಬಾರ ಸರದಾರ ಸಾವ್ಕಾರ
ನಿನ ಜೀವ ಗೆಳತ್ಯಾನು ಝುಮುಝುಮುಕಿ ||೧||

ಕುಂತುಂಡ್ರ ಪಡಿರೊಟ್ಟಿ ತಿಂತಾನ ಆ ಗಂಡ
ಮನಿತುಂಬ ಮಣಹೂಂಸು ತುಂಬತಾನ
ಬಾ ಅಂದ್ರ ಬ್ಯಾಡಂತ ಗೊರಕೀಯ ಹೊಡಿತಾನ
ಬೆಳಗಾದ್ರ ಊರ್‍ಹೊರಗೆ ಓಡತಾನ ||೨||

ನನಗ್ಯಾಕ ತಿಳಿವಲ್ತು ಯಾಕಂತ ಹೊಳಿವಲ್ತು
ನಿನಕಂಡ್ರ ಎದಿಯಾಗ ಝುಂಗುಟ್ಟಿತ
ತೊಡಿಯಾಗ ಕಟ್ಟಿರಿವಿ ಕಡಿದಾಂಗ ನಡುಕಾತ
ಖುಶಿಯಾಗ ರಾತ್ರ್‍ಯಾಗ ಘುಂಘುಟ್ಟತ ||೩||

ಮಾಡ್ಕೊಂಡ ಮನಗಂಡ ಜಾಲೀಯ ಬೊಡ್ಯಾದ
ನೀನಾದಿ ಕ್ಯಾದೀಗಿ ಗಂಡುಹಕ್ಕಿ
ಸಂಪೀಗಿ ತಂಪಾದಿ ಸೋಬಾನ ದಿಂಪಾದಿ
ತುಟಿಯಾಗ ತುಟಿಯಿಟ್ಟು ಪಿಂಡಮುಕ್ಕಿ ||೪||

ಆ ಗಂಡ ನನ್ಹಿಡಿದು ಮಕಮಾರಿ ಕಚ್ಚಾಗ
ನಿನನೆನಪು ನನಗಾಗಿ ನಾ ಅತ್ತೆನೆ
ದೇಹಕ್ಕ ಆ ಗಂಡ ಯೋಗಕ್ಕ ನೀ ಗಂಡ
ನಿನಮಾರಿ ನೆನಪಾಗಿ ಭೋ ಅತ್ತೆನೆ ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರೈಲು
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೪

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…