Home / ಕವನ / ಕವಿತೆ / ಎಚ್ಚರಿಕಿ ಎಚ್ಚರಿಕಿ ನನಜಾಣಿ ಎಚ್ಚರಿಕಿ

ಎಚ್ಚರಿಕಿ ಎಚ್ಚರಿಕಿ ನನಜಾಣಿ ಎಚ್ಚರಿಕಿ

ಎಚ್ಚರಿಕಿ ಎಚ್ಚರಿಕಿ ನನಜಾಣಿ ಎಚ್ಚರಿಕಿ
ಕತ್ಲಾಗ ಕಾಳಿಂಗ ಕಚ್ಚೈತೆ ||ಪಲ್ಲ||

ಬಚ್ಲಾಗ ಬಚೈತೆ ಹೊಚ್ಲಾಗ ಹೊಂಚೈತೆ
ದಾರ್‍ಯಾಗ ಸುಳಿಸುತ್ತಿ ಕುಂತೈತೆ
ಹಲಕಟ್ಟ ಹಳೆಹಾವು ಮಾಕೆಟ್ಟ ಅಡಮುಟ್ಟ
ಮೋಸಕ್ಕ ಥಟಥಾಟು ಥೇಟೈತೆ ||೧||

ಗೆಜ್ಜಿ ಕಾಲಿನ ವಜ್ಜಿ ಹಗುರಾಗಿ ಹೇರಣ್ಣಿ
ಮಂಚಕ್ಕ ಬಾರಣ್ಣಿ ಗುರೆಣ್ಣಿ
ಗುರೆಳ್ಳು ಕತ್ಲಾಗ ಕಂಚೀನ ಸರಪಾವು
ಮಿಂಚೈತಿ ಮಿನುಗೈತಿ ಬಾರಣ್ಣಿ ||೨||

ತೊಡಿಸಿಕ್ರ ತೊಡಿತುಂಬ ಉಡಿಸಿಕ್ರ ಉಡಿತುಂಬ
ಮುಡಿಸಿಕ್ರ ಮುಡಿತುಂಬ ಏರೈತೆ
ಕಚ್ಚೀದ ವಿಷದಾಗ ವಿಷಗುಂಟ ಏರೈತೆ
ನೆತ್ತ್ಯಾಗ ವಸ್ತೀಯ ಮಾಡೈತೆ ||೩||

ಹಾವ್ಗಾರ ನಾಗ್ರಲ್ಲಾ ಜಾತ್ಗಾರ ಸರಪಲ್ಲ
ಚರುಮದ ಮುಚ್ಚುಳಾ ಹಾರ್‍ಸೈತೆ
ಎಲುಬೆಲ್ಲ ಕರಗೈತೆ ಹೊಟ್ಟೆಲ್ಲ ಇಂಗೈತೆ
ಕಣ್ಣೊಳಗ ಕಣ್ಣೂ ಬೆಳಗೈತೆ ||೪||

ಹೆಣ್ಹಾವು ಕಚ್ಚಂಬ್ಲಿ ಗಿಣಿಮಾವು ಬಿಚ್ಚಂಬ್ಲಿ
ಗಿಡದಾಗ ಪಡಿಚಿಕ್ಕಿ ನಕ್ಕಾವೆ
ಕಚ್ಗೊಂಡು ಕುಚ್ಗೊಂಡು ನುಚ್ಗೊಂಡು ಹೆಣವಾದೆ
ಚಿಕ್ಯಾಗ ಚಿಗರೆಲ್ಲಾ ಆಡ್ಯಾವೆ ||೫||
*****
ಕಾಳಿಂಗ=ಕುಂಡಲಿನಿ ಸರ್ಪ; ಕತ್ಲ=ಮಾಯಾ ಕತ್ತಲೆ

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...