Home / ಬಾಲ ಚಿಲುಮೆ / ಕವಿತೆ / ಬೂರಲ ಮರದ ಅಜ್ಜ

ಬೂರಲ ಮರದ ಅಜ್ಜ

[ಮಕ್ಕಳ ಹಾಡು]

ಅಜ್ಜಯ್ಯ ಗುಜ್ಜಯ್ಯ ಮಜ್ಜೀಗಿ ಕೊಡತೇನ
ದಟ್ಟಿಯ ಪುಟ್ಟಿಯ ಕರೆದೊಯ್ಯ
ದೊಡ್ಡಜ್ಜ ದೊಡ್ಡಯ್ಯ ತಂಬಾಕು ಕೊಡತೇನ
ಪರಕಾರ್‍ದ ಮಮ್ಮಗಳ ಕರೆದೊಯ್ಯ ||೧||

ಬೂರಲ ಮರದಾಗ ಜೋರಾಗಿ ಕರದೇನ
ಬುರ್‍ಲಜ್ಜ ಬುರ್ರಂತ ಹಾರ್‍ಹೋದೆ
ಗುಡದಾಗ ಕೊಳ್ಳಾಗ ಕಣಿವ್ಯಾಗ ಹುಡಿಕೇನ
ಬುರ್‍ಲಜ್ಜ ಸುರ್ರಂತ ಜಾರ್‍ಹೋದೆ ||೨||

ಗುಂಡ್ಗುಂಡ ಗುಳಬಟ್ಲ ತೂಗು ಬೆಳ್ಳಿಯ ತೊಟ್ಲ
ಗಾಳ್ಯಾಗ ನಿನಹಡಗ ಏನ್‌ಚಂದ
ಅಚ್ಚೀಯ ಪುಚ್ಚಣ್ಣಿ ಗುಚ್ಚೀಯ ಗುಳ್ಳಣ್ಣಿ
ಮುಗಲಾಗ ನಿನಹಡಗ ಬಾಳ್‍ಚಂದ ||೩||

ವಜ್ಜೀನಾ ಇಲ್ಲಜ್ಜ ಕಜ್ಜೂರಿ ಅಂಜೂರಿ
ನನ್ನಽಟ ನಿನಕೂಟ ಎತ್ತೊಯ್ಯ
ನನಗಲ್ಲ ನಿನಬೆಲ್ಲ ನನಜೊಲ್ಲ ಕೆನಿಮೆಲ್ಲ
ಧೋತರ ಪದರಾಗ ಇಟ್ಟೊಯ್ಯ ||೪||

ನನಬಿಟ್ರ ನಿನಗಿಲ್ಲ ಗುಡುಗೂಡಿ ಗುಸಿಗೂಸಿ
ಬೆಲ್ಲದ ಚಾದಾಗ ಹಾಲಿಲ್ಲ
ನಿನಸಗತಿ ನಿಂತಾಗ ಜೋಲಿತಾ ನಿಲದಾಗ
ನಾ ನಿನ್ನ ಕೈಬೆತ್ತ ಮರತೆಲ್ಲ ||೫||
*****
ಬುರ್‍ಲಜ್ಜ=ಬೂರಲ ಮರದ ಅಜ್ಜ: ಗುಜ್ಜಯ್ಯ =ನಡ ಬಾಗಿದ ಅಜ್ಜ; ಆಚ್ಚಿ=ರೊಟ್ಟಿ: ಗುಚ್ಛಿ=ಗುಚ್ಛ.

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...