ಸ್ನೇಹ-ಶಪಥ

ಮಿತ್ರನಾಗಲಿ ಶತ್ರುವಾಗಲಿ
ಗುರುತಿನವನಾಗಲಿ, ಗುರುತಿಲ್ಲದವನಾಗಲಿ
ದೊಡ್ಡವನೆಂದು ತಿಳಿದವನ
ಬಡವನೆಂದು ಒಪ್ಪಿದವನ
ಮೇಲೆ
ಯಾವದೇ ಕಾರಣದಿಂದ
ಅಪಯಶದ ಧೂಳು ಹಾರಿದರೆ
ನೀನು
ಕಟುವಚನದಿಂದ ಅವನನ್ನು
ದೂರುವ ತಪ್ಪು ಮಾಡದಿರು.
ಇವನು ಹಾಗೇ ಇದ್ದನೆಂದು
ನೂರಾರು ಪುರಾವೆಗಳ ಹಿಡಿದು
ಸಾಧಿಸದಿರು,
ಅವನು ನಿಜವಾಗಿಯೂ ಎಡವಿ
ತಪ್ಪುದಾರಿ ಹಿಡಿದರೆ
ಕಟು ಮಾತಿನಿಂದಲ್ಲ
ಸ್ನೇಹದಿಂದ ಮಾತಾಡಿ ನೋಡು.
ದೋಷ ಎಷ್ಟು ಆಳವಾದರು
ಸ್ನೇಹ ಅಲ್ಲಿ ಇಳಿಯುವುದು
ಲೋಕ ಎಷ್ಟು ಭ್ರಷ್ಟವಾದರು
ಸ್ನೇಹ ಎಲ್ಲರಿಗೆ ಹಿಡಿಸುವುದು
ಬಿದ್ದವರನ್ನು ಎಬ್ಬಿಸುವಷ್ಟು
ಪ್ರಿಯ ಕಾರ್ಯವಿಲ್ಲ
ಎತ್ತಿ ಸ್ನೇಹ ಹಂಚದ
ಕೀಳ್ತನದಷ್ಟು ಪತನ ಬೇರಿಲ್ಲ.
ಸ್ನೇಹಲ ದೃಷ್ಟಿಯಿಂದ
ನೋಡಿದರೆ, ಕಣ್ಣಿನ ದುಸ್ಸಾಹಸ
ಮರೆಯಾಗುವುದು
ಪ್ರತಿಯೊಂದು ದುಷ್ಟತನ
ಕಂಬನಿಯಾಗಿ
ಕಪೋಲದಿಂದ ಹರಿಯುವುದು.
ಆಣೆಯ ಮೇಲೆ ನಿನಗೆ
ಹೆಚ್ಚು ಮೋಹ
ಆಣೆ ಹಾಕುವ ಚಟ ಒಳಿತಲ್ಲ
ಶಪಥ ಜೊತೆಗೆ ತೊಂದರೆಯನ್ನು ತರುವುದು
ನಿನ್ನ ಮೇಲೆ ಹಾವಿಯಾಗುವುದು.
ಹೊರೆಸುವೆನು ಆಣೆ ನಿನ್ನ ಮೇಲೆ ನಾನು
ಇಳಿಸಿ ಹಾಡಿ ಹರಡು
ಸ್ನೇಹದಿ ನೀನು,
ಆಣೆ ನಿನಗೆ ಆ ಕರುಣಾಕರನ,
ಬೆತ್ತಲೆಯಾಗಿ ಸ್ನೇಹದ
ಭಿಕ್ಷೆ ಬೇಡುವ ಭಿಕ್ಷುಕನ
ಕಟುವಾಗಿ ಒರೆಯದೆ, ಹೊರಡು
ಅಂತರಮನದ ನೇಹದಿ ಹೇಳು
ಕೊನರುವುದು ಕೊರಡು.
*****
ಮೂಲ: ಭವಾನಿ ಪ್ರಸಾದ ಮಿಶ್ರ
(ಹಿಂದಿ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕತ್ತಲು ಕಳೆಯಲು
Next post ಸಾವಯವವೆಂದರದೆಂತು ಹಿನ್ನಡೆದಂತೆ?

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…