ಭಾವ ತುಂಬಿದ ಉಸಿರು ಅಲ್ಲೆಲ್ಲ ಹರಡಿತು, ಅಲ್ಲಲ್ಲೆ ಬಿದ್ದಿತ್ತು

ಜೋಲು ಮೋರೆಯ ಮಾಡಿ
ಕಲ್ಲ ಮೇಲೆಯೆ ಕುಳಿತ
ನಲ್ಲೆಯೊಬ್ಬಳು – ಬಳಿಯೆ ಹೂವು ಚೆಲ್ಲಿತ್ತು.

ಯಾರಿಲ್ಲ ಬಳಿಯಲ್ಲಿ, ಮೇರು ವ್ಯಥೆ ಮನದಲ್ಲಿ
ಯಾರದೋ ವ್ಯಸನ, ಆವದೋ ಚಿಂತನ
ಮಾರುತನ ಮಂದ ಅಲೆ ತುಂಬುತಿದೆ ಮನ
ಜಾರುತಿದೆ ಸೆರಗು, ಏರುತಿದೆ ಮೆರಗು-ಅರಿವಿಲ್ಲವಲ್ಲಿ

ಏನೊ ಆ ಕೊರಗು
ಏಕೊ ಆ ಸೊರಗು
ಏಕೋ ಕುಂದಿಹ ನೋಟ
ಏನೊ ಕನಸಿನ ಆಟ

ನೇಹ ಸುಂದರವಿತ್ತೆ?
ಗೇಯ ಗೆಲುವಾಗಿತ್ತೆ?
ಮಾಯೆ ಒಲುಮೆಯ ಬಲಿತು
ಮೋಹ ಹೃದಯದಲಿತ್ತೆ??

ಭಾವ ತುಂಬಿತ್ತು ಆಕ್ಷೀಣ ಉಸಿರಿನಲಿ,
ಜೀವ ಮಿಡುಕುತಲಿತ್ತು
ತೇವ ಕಂಗಳಲಿತ್ತು;
ನೋವು ಸೇರಿತ್ತು ಆ ವಿರಹದೊಸರಿನಲಿ
……ಹಕ್ಕಿಗಳ ಸಾಲೊಂದು ಗೂಡಿಗೋಡುತ್ತಲಿತ್ತು

ರೆಕ್ಕೆಗಳ ಬಡಿಯುತ್ತ
ಅಕ್ಕರದಿ ಕರೆಯುತ್ತ
ದಕ್ಕಲಾರದ ಆಶೆ, ದುಃಖ ಜೀವಕ್ಕಿತ್ತು
ಮುಂದೋಡುತಿತ್ತು!

ಎಲ್ಲ ನಲ್ಲುಲಿಯು ಚೆಲ್ಲಿ ಹೋದಂತಿತ್ತು!
ಅಲ್ಲಿ ಹೃದಯದ ವೀಣೆ
ಸೊಲ್ಲ ಮಿಡಿವುದ ಕಾಣೆ…..
ಗಲ್ಲದಲ್ಲೊಂದು ತೊಟ್ಟು ಮೆಲ್ಲನಿಳಿಯುತ್ತಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾರತಾಂಬೆಯ ಮಕ್ಕಳು
Next post ಯುದ್ಧದುಳಿಕೆ ಗೊಬ್ಬರವನಿಟ್ಟವರು ಜಾಣರೇ?

ಸಣ್ಣ ಕತೆ

  • ರಾಜಕೀಯ ಮುಖಂಡರು

    ಪ್ರಕರಣ ೧೦ ಆವಲಹಳ್ಳಿಯಲ್ಲಿ ನಡೆದ ಉಪಾಧ್ಯಾಯರ ಸಂಘದ ಸಭೆ ರೇಂಜಿನಲ್ಲೆಲ್ಲ ದೊಡ್ಡ ಜಾಗಟೆಯನ್ನು ಬಾರಿಸಿದಂತಾಯಿತು. ಅದರ ಕಾರ್ಯಕಲಾಪಗಳು, ಔತಣದ ವೈಖರಿ, ಇನ್ಸ್ಪೆಕ್ಟರು ಸಲಿಗೆಯಿಂದ ಉಪಾಧ್ಯಾಯರೊಡನೆ ಮಿಳಿತರಾಗಿ ಅವರ… Read more…

  • ಆವಲಹಳ್ಳಿಯಲ್ಲಿ ಸಭೆ

    ಪ್ರಕರಣ ೯ ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…