ಭಾವ ತುಂಬಿದ ಉಸಿರು ಅಲ್ಲೆಲ್ಲ ಹರಡಿತು, ಅಲ್ಲಲ್ಲೆ ಬಿದ್ದಿತ್ತು

ಜೋಲು ಮೋರೆಯ ಮಾಡಿ
ಕಲ್ಲ ಮೇಲೆಯೆ ಕುಳಿತ
ನಲ್ಲೆಯೊಬ್ಬಳು – ಬಳಿಯೆ ಹೂವು ಚೆಲ್ಲಿತ್ತು.

ಯಾರಿಲ್ಲ ಬಳಿಯಲ್ಲಿ, ಮೇರು ವ್ಯಥೆ ಮನದಲ್ಲಿ
ಯಾರದೋ ವ್ಯಸನ, ಆವದೋ ಚಿಂತನ
ಮಾರುತನ ಮಂದ ಅಲೆ ತುಂಬುತಿದೆ ಮನ
ಜಾರುತಿದೆ ಸೆರಗು, ಏರುತಿದೆ ಮೆರಗು-ಅರಿವಿಲ್ಲವಲ್ಲಿ

ಏನೊ ಆ ಕೊರಗು
ಏಕೊ ಆ ಸೊರಗು
ಏಕೋ ಕುಂದಿಹ ನೋಟ
ಏನೊ ಕನಸಿನ ಆಟ

ನೇಹ ಸುಂದರವಿತ್ತೆ?
ಗೇಯ ಗೆಲುವಾಗಿತ್ತೆ?
ಮಾಯೆ ಒಲುಮೆಯ ಬಲಿತು
ಮೋಹ ಹೃದಯದಲಿತ್ತೆ??

ಭಾವ ತುಂಬಿತ್ತು ಆಕ್ಷೀಣ ಉಸಿರಿನಲಿ,
ಜೀವ ಮಿಡುಕುತಲಿತ್ತು
ತೇವ ಕಂಗಳಲಿತ್ತು;
ನೋವು ಸೇರಿತ್ತು ಆ ವಿರಹದೊಸರಿನಲಿ
……ಹಕ್ಕಿಗಳ ಸಾಲೊಂದು ಗೂಡಿಗೋಡುತ್ತಲಿತ್ತು

ರೆಕ್ಕೆಗಳ ಬಡಿಯುತ್ತ
ಅಕ್ಕರದಿ ಕರೆಯುತ್ತ
ದಕ್ಕಲಾರದ ಆಶೆ, ದುಃಖ ಜೀವಕ್ಕಿತ್ತು
ಮುಂದೋಡುತಿತ್ತು!

ಎಲ್ಲ ನಲ್ಲುಲಿಯು ಚೆಲ್ಲಿ ಹೋದಂತಿತ್ತು!
ಅಲ್ಲಿ ಹೃದಯದ ವೀಣೆ
ಸೊಲ್ಲ ಮಿಡಿವುದ ಕಾಣೆ…..
ಗಲ್ಲದಲ್ಲೊಂದು ತೊಟ್ಟು ಮೆಲ್ಲನಿಳಿಯುತ್ತಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾರತಾಂಬೆಯ ಮಕ್ಕಳು
Next post ಯುದ್ಧದುಳಿಕೆ ಗೊಬ್ಬರವನಿಟ್ಟವರು ಜಾಣರೇ?

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…