ಭಾವ ತುಂಬಿದ ಉಸಿರು ಅಲ್ಲೆಲ್ಲ ಹರಡಿತು, ಅಲ್ಲಲ್ಲೆ ಬಿದ್ದಿತ್ತು

ಜೋಲು ಮೋರೆಯ ಮಾಡಿ
ಕಲ್ಲ ಮೇಲೆಯೆ ಕುಳಿತ
ನಲ್ಲೆಯೊಬ್ಬಳು – ಬಳಿಯೆ ಹೂವು ಚೆಲ್ಲಿತ್ತು.

ಯಾರಿಲ್ಲ ಬಳಿಯಲ್ಲಿ, ಮೇರು ವ್ಯಥೆ ಮನದಲ್ಲಿ
ಯಾರದೋ ವ್ಯಸನ, ಆವದೋ ಚಿಂತನ
ಮಾರುತನ ಮಂದ ಅಲೆ ತುಂಬುತಿದೆ ಮನ
ಜಾರುತಿದೆ ಸೆರಗು, ಏರುತಿದೆ ಮೆರಗು-ಅರಿವಿಲ್ಲವಲ್ಲಿ

ಏನೊ ಆ ಕೊರಗು
ಏಕೊ ಆ ಸೊರಗು
ಏಕೋ ಕುಂದಿಹ ನೋಟ
ಏನೊ ಕನಸಿನ ಆಟ

ನೇಹ ಸುಂದರವಿತ್ತೆ?
ಗೇಯ ಗೆಲುವಾಗಿತ್ತೆ?
ಮಾಯೆ ಒಲುಮೆಯ ಬಲಿತು
ಮೋಹ ಹೃದಯದಲಿತ್ತೆ??

ಭಾವ ತುಂಬಿತ್ತು ಆಕ್ಷೀಣ ಉಸಿರಿನಲಿ,
ಜೀವ ಮಿಡುಕುತಲಿತ್ತು
ತೇವ ಕಂಗಳಲಿತ್ತು;
ನೋವು ಸೇರಿತ್ತು ಆ ವಿರಹದೊಸರಿನಲಿ
……ಹಕ್ಕಿಗಳ ಸಾಲೊಂದು ಗೂಡಿಗೋಡುತ್ತಲಿತ್ತು

ರೆಕ್ಕೆಗಳ ಬಡಿಯುತ್ತ
ಅಕ್ಕರದಿ ಕರೆಯುತ್ತ
ದಕ್ಕಲಾರದ ಆಶೆ, ದುಃಖ ಜೀವಕ್ಕಿತ್ತು
ಮುಂದೋಡುತಿತ್ತು!

ಎಲ್ಲ ನಲ್ಲುಲಿಯು ಚೆಲ್ಲಿ ಹೋದಂತಿತ್ತು!
ಅಲ್ಲಿ ಹೃದಯದ ವೀಣೆ
ಸೊಲ್ಲ ಮಿಡಿವುದ ಕಾಣೆ…..
ಗಲ್ಲದಲ್ಲೊಂದು ತೊಟ್ಟು ಮೆಲ್ಲನಿಳಿಯುತ್ತಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾರತಾಂಬೆಯ ಮಕ್ಕಳು
Next post ಯುದ್ಧದುಳಿಕೆ ಗೊಬ್ಬರವನಿಟ್ಟವರು ಜಾಣರೇ?

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…