ಭಾರತಾಂಬೆಯ ಮಕ್ಕಳು

ಭಾರತಾಂಬೆಯ ಮಕ್ಕಳು ನಾವು
ಕನ್ನಡ ತಾಯಿಯ ಒಕ್ಕಲು ||

ತಾಯಿಯ ಒಡಲ ಹೂಗಳು ನಾವು
ಅವಳ ಅಕ್ಕರೆಯ ಕಿರಣಗಳು ||

ಹಸಿರ ಒಡಲ ಕಣಗಳು ನಾವು
ಉಸಿರಾಗುವ ಮಾನವತೆಯ ಸಸಿಗಳು || ಭಾ ||

ಗಂಗೆ ಯಮುನೆ ಸಿಂಧು
ಕಾವೇರಿ ತುಂಗೆ ಭದ್ರೆ ಜೀವನದಿ || ಭಾ ||

ಜಾತಿ ಭೇದ ಭಾವ ನೀತಿ
ಸತ್ಯ ಶಾಂತಿ ತ್ಯಾಗ ಅಮರ ಕೀರುತಿ || ಭಾ ||

ನಮ್ಮ ಛಲವು ನಮ್ಮ ಒಲವು
ಸ್ವಾಭಿಮಾನ ಒಂದೇ ಅಂತರಂಗ ನಿಲುವು || ಭಾ ||

ಹೊಸತು ಜನ್ಮ ಹಳೆಯ ಬಾಳ್ವೆ
ತಾಯಬೇರು ಅನಂತ ವಾಹಿನಿಕಾಣ್ವೆ || ಭಾ ||

ರಾಮಾಯಣ ದರ್ಶನ ಮಹಾಭಾರತ ಮಜ್ಜನ
ಇರುವ ಭೂಮಿಕೆ ಸಪ್ತ ರೂಪಗಳು || ಭಾ ||

ಪದಕುಂಜ ನಕ್ಷತ್ರ ಪುಂಜ ಬೆಳಕು
ಮಹಾತ್ಮ ವೀರರ ಗತಕಾಲ ನಮ್ಮದು || ಭಾ ||

ನೆರೆಹೊರೆಯ ಪ್ರೀತಿ ಸಲುಗೆ ನೀತಿ
ನಿತ್ಯ ಸತ್ಯ ಜ್ಯೋತಿ ಬೆಳಗುವೆವು || ಭಾ ||

ಹಿರಿಯ ಕಿರಿಯರಿಲ್ಲ ಇಲ್ಲಿ ಶ್ರೀಮಂತ
ಭಾರತಾಂಬೆ ಮಕ್ಕಳು ಕನ್ನಡಾಂಬೆ ಒಕ್ಕಲು || ಭಾ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

ಪಾಳೇಗಾರ Previous post ಪಾಳಯಗಾರರು – ಭೂಮಿಯ ಹಿಡುವಳಿ ವಿಧಾನ
Next post ಭಾವ ತುಂಬಿದ ಉಸಿರು ಅಲ್ಲೆಲ್ಲ ಹರಡಿತು, ಅಲ್ಲಲ್ಲೆ ಬಿದ್ದಿತ್ತು

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…