Home / ಕವನ / ಕವಿತೆ / ಬಾಳ ದಿಬ್ಬಣ

ಬಾಳ ದಿಬ್ಬಣ

ಬಾಳ ದಿಬ್ಬಣವು ಹೊರಟಿಹುದು ಅಂದದಲಿ
ಗೋಳ ಜೀವನದ ವಾದ್ಯದಿಂದುಸುರುತಲಿ…
ಮುಂದೆ ಬದುಕಿನ ಸೋಗ
ಕಂಡು ಮೆರೆಯಲು ಬೇಗ

ಜೀವನದ ಬಂಡಿಯನು ಹೊಡೆಯುತಲಿ
ಜೀವಿಕೆಯ ಸುಗಮತೆಯನರಸುತಲಿ…
ಕಲ್ಲು-ಮುಳ್ಳಿನ ಹಾದಿ
ಗೆಲ್ಲು-ಸೋಲಿನ ಬೀದಿ.

ಬದುಕಿನುದ್ದಕು ಇಹುದೆಂದು
ಅದುವೆ ಜೀವನದ ಸೊಗಸೆಂದು
ಉಳಿದುಳಿದು ನುಡಿಸುತಲಿ
ಅಳವಡಿತ ಭಾವದಲಿ…

ಮುಂದಿಹುದು ಕಳೆಹೀನ ಪಥವೆಂದು
ಬಂದಿಹುದು ರಸಹೀನ ಜಗಕೆಂದು,
ಬಂಧನವು ಬಡತನದ ಹಗಲಿರುಳು ಬಿಡದೆಂದು

ಅರಿತಿದ್ದು ಕಳೆಗೊಟ್ಟು ಸಾಗುತಲಿ
ಪರಿಪರಿಯ ಗಾನವನು ಮಾಡುತಲಿ…
ಸುರುಸುರುಳಿ ಹೊರಹೊರಳಿ ರಾಗಿಸುವ ನಾಗಸರ
ತರುಗಳನು ಮೋದಿಸಿ ಪರವಶ ಪಡಿಸುತಿದೆ,

ಮರುಕಳಿಸಿ ಪದಪಿಂದ ಪಾಡಿತಿದೆ
ಕಿರುಗವನ ಮರಗಳಿಗೆ ಅರುಹುತಿದೆ
ಮರುಗಳಿಗೆ ತಡವರಿಸೆ ಗೀತಸುಧೆ…
ಹುರುಪಳಿದ ಮಧುಬನವು ನಿಡುಸುಯ್ಯುತಿದೆ…..

ಬರಸಿಡಿಲು ದಡಲೆಂದು ಬಡಿದರೂ
ಚರಚರನೆ ಮಳೆಗಾಳಿ ಸುರಿದರೂ
ಗರಬಡಿದ ದಿಬ್ಬಣವು ಸಾಗಿಹುದು, ಬಾಳ-
ಚರಮ ಸೀಮೆಯ ಕೊನೆಯಂಚನರಸುತಲಿ….

‘ಬದುಕು’-‘ಭಾಗ್ಯ’ಗಳೆಂಬ ವಧೂ-ವರರನು
ಸದಭಿಮಾನದ ಹುರುಪಿಂದ ಮುನ್ನಡೆಸುತಲಿ
*****

Tagged:

Leave a Reply

Your email address will not be published. Required fields are marked *

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...

ಶೋಭಾ, ನಿನ್ನ ಎಲ್ಲಾ ಕಾಗದಗಳೂ ತಲುಪಿವೆ. ಓದುತ್ತಲೂ ಇದ್ದೇನೆ. ‘ತಂಪೆರೆಯುವ ನಿನ್ನ ಕಾಗದಗಳನ್ನು ದಿನಾ ಎದುರು ನೋಡುತ್ತಿರುತ್ತೇನೆ. ಅಬ್ಬಾ! ಎಷ್ಟು ಪ್ರಶ್ನೆಗಳನ್ನು ಕೇಳಿದ್ದೀಯಾ? ಬರೆಯುವ ಶಕ್ತಿ ಬರಲೀಂತ ಕಾಯ್ತಾ ಇದ್ದೆ. ಮಾನಸಿಕ ವಿಪ್ಲವದಲ್ಲಿ ಮನಸ್ಸು, ದೇಹ ಎಲ್ಲವೂ ಕೊರಡಿನಂತಾ...