ಬಾಳ ದಿಬ್ಬಣ

ಬಾಳ ದಿಬ್ಬಣವು ಹೊರಟಿಹುದು ಅಂದದಲಿ
ಗೋಳ ಜೀವನದ ವಾದ್ಯದಿಂದುಸುರುತಲಿ…
ಮುಂದೆ ಬದುಕಿನ ಸೋಗ
ಕಂಡು ಮೆರೆಯಲು ಬೇಗ

ಜೀವನದ ಬಂಡಿಯನು ಹೊಡೆಯುತಲಿ
ಜೀವಿಕೆಯ ಸುಗಮತೆಯನರಸುತಲಿ…
ಕಲ್ಲು-ಮುಳ್ಳಿನ ಹಾದಿ
ಗೆಲ್ಲು-ಸೋಲಿನ ಬೀದಿ.

ಬದುಕಿನುದ್ದಕು ಇಹುದೆಂದು
ಅದುವೆ ಜೀವನದ ಸೊಗಸೆಂದು
ಉಳಿದುಳಿದು ನುಡಿಸುತಲಿ
ಅಳವಡಿತ ಭಾವದಲಿ…

ಮುಂದಿಹುದು ಕಳೆಹೀನ ಪಥವೆಂದು
ಬಂದಿಹುದು ರಸಹೀನ ಜಗಕೆಂದು,
ಬಂಧನವು ಬಡತನದ ಹಗಲಿರುಳು ಬಿಡದೆಂದು

ಅರಿತಿದ್ದು ಕಳೆಗೊಟ್ಟು ಸಾಗುತಲಿ
ಪರಿಪರಿಯ ಗಾನವನು ಮಾಡುತಲಿ…
ಸುರುಸುರುಳಿ ಹೊರಹೊರಳಿ ರಾಗಿಸುವ ನಾಗಸರ
ತರುಗಳನು ಮೋದಿಸಿ ಪರವಶ ಪಡಿಸುತಿದೆ,

ಮರುಕಳಿಸಿ ಪದಪಿಂದ ಪಾಡಿತಿದೆ
ಕಿರುಗವನ ಮರಗಳಿಗೆ ಅರುಹುತಿದೆ
ಮರುಗಳಿಗೆ ತಡವರಿಸೆ ಗೀತಸುಧೆ…
ಹುರುಪಳಿದ ಮಧುಬನವು ನಿಡುಸುಯ್ಯುತಿದೆ…..

ಬರಸಿಡಿಲು ದಡಲೆಂದು ಬಡಿದರೂ
ಚರಚರನೆ ಮಳೆಗಾಳಿ ಸುರಿದರೂ
ಗರಬಡಿದ ದಿಬ್ಬಣವು ಸಾಗಿಹುದು, ಬಾಳ-
ಚರಮ ಸೀಮೆಯ ಕೊನೆಯಂಚನರಸುತಲಿ….

‘ಬದುಕು’-‘ಭಾಗ್ಯ’ಗಳೆಂಬ ವಧೂ-ವರರನು
ಸದಭಿಮಾನದ ಹುರುಪಿಂದ ಮುನ್ನಡೆಸುತಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲದ ಹಸೆಮಣೆ
Next post ಶಕ್ತಿ ಮೂಲಗಳೇರದೆ ಪರಿಸರವನುಳಿಸುವುದೆಂತು?

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys