Home / ಕವನ / ಕವಿತೆ / ನೆಲದ ಬೆಲೆ ಉಳಿಸೋಣ

ನೆಲದ ಬೆಲೆ ಉಳಿಸೋಣ

ಅಟ್ಟೋಣ, ಮೆಟ್ಟೋಣ ಕೆಚ್ಚೆದೆಯ ಮಿಂಚಿನಲಿ
ತಟ್ಟೋಣ ದವಡೆಯನೆ ಧಾಂಡಿಗರ ಸಂಚಿನಲಿ….

ನಮ್ಮುಸಿರ ಬಿಸಿಯು ಆರುವ ಮುನ್ನ
ನಮ್ಮೆದೆಯ ಅಸುವು ನೀಗುವ ಮುನ್ನ
ನಾಡಿಗರ ಹಸಿರಕ್ತ ಬರಿದೆ ಹೋಗುವ ಮುನ್ನ
ಕ್ರೋಧದುರಿ ಮೈತಾಳಿ ನಮ್ಮನೇ ಸುಡುವ ಮುನ್ನ…
ಅಟ್ಟೋಣ ದ್ರೋಹಿಗಳ, ಮೆಟ್ಟೋಣ ಬನ್ನಿ
ಕಟ್ಟಳೆಯ ಬದಿಗಿಟ್ಟು ಉರಿವ ಬೆಂಕಿಯ ತನ್ನಿ

ನಮ್ಮಳಲು ನಮಗಿರಲಿ
ಕೆಂಪಿರುಳು ಬೇಡ
ಸ್ವಾತಂತ್ರ್ಯ ಉಳಿದಿರಲಿ
ದಾಸ್ಯದಳು ಬೇಡ….

ನಮ್ಮೂರು ಕನಸಿನ ನಾಕ
ನಮ್ಮವರು ಉಸಿರಿತ್ತು
ಸಾವನ್ನೆ ಮುತ್ತಿಟ್ಟು
ನಮಗಿತ್ತ ಸುರಲೋಕ….

ನಮ್ಮೊಡಲ ಒಡೆಯರು ನಾವು
ಒಮ್ಮನದಿ ವೈರಿಗಳ ಹೊಡೆದು
ಜೀವ-ಭಾವೈಕ್ಯದ ಸಿಡಿಲ-ಮಳೆಗರೆದು
ದೇಶಕಂಟಕರ ಕೆಡಿಸುವೆವು….. ಇಲ್ಲವೆ ಸಾವು!

ಕಾಳರಾತ್ರಿಯ ಭಯವ ತಡೆದು
ಹಾಳು ಪ್ರಭುತನದ ಬೇಡಿ ಒಡೆದು
ಹೊಸತೇಜ-ಓಜಗಳ ಮೆರಗಿಂದ
ರಸಭರಿತ ಬೀಡಕಟ್ಟಿಹೆವು ನಾವು….

ನಮ್ಮ ನೆಲ ಚಂದನದ ಕಂಪಿನದು
ನಮ್ಮ ಹೊಲ ಹಸುರುಮಯ ಸೊಂಪಿನದು
ಶಾಂತಿದೂತರ, ಕ್ರಾಂತಿವೀರರ
ನಮ್ಮಕುಲ ಇಳೆಯಲತಿ ಪೆಂಪಿನದು…

ರಣಕಹಳೆ ನಾಡಿಗಳ ಹೊಕ್ಕು ನೆತ್ತರಿನ
ಕಣಕಣದಿ ಹೊಸ ಬಿರುಸನಿತ್ತು
ಕೆಣಕುತಿದೆ ನಮ್ಮ ನೆಲದಭಿಮಾನವನಿಂದು
ಹೋಗೋಣ ಬನ್ನಿ, ಮಾತೆಯ ಮಾನ ಉಳಿಸೋಣ

ಭಾರತಾಂಬೆಯ ವೀರ ಪುತ್ರರು
ಮೇರುಗಿರಿಯ ಹಿಮಖಂಡದಲಿ
ನೆತ್ತರಿನ ಕುಯಿಲು ಹರಿಸುತಿರೆ
ಭೀತರಾಗದೆ ನಾವು ನೆಗೆಯೋಣ, ಬಗೆಯೋಣ….

ಹೊನ್ನು ಮಣ್ಣಿನ ಕಲಹ ಬೇಡ ನಮಗಿಂದು
ಕುನ್ನಿಗಳ ಕೆಂಗಣ್ಣ ಕಿಡಿಯಿಹುದು ಮುಂದು
ನನ್ನಿಯಲಿ ನಮ್ಮೊಲವು
ಚಿನ್ನಿಗಳ ಕಣ್ಣುಗಳೆ ನಮಗೆ ಕುಂದು

ಇಂದು ಬನ್ನಿ ಒಂದಾಗೋಣ
ಮುಂದೆ ಎದೆಸೆಟೆದು ಸಾಗೋಣ
ಕಡೆಯುಸಿರು ಇರುವನಕ
ನೆಲದ ಬೆಲೆ ಉಳಿಸೋಣ…

(ಅಡಿಗರನ್ನು ನೆನೆದು)
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...