ನೆಲದ ಬೆಲೆ ಉಳಿಸೋಣ

ಅಟ್ಟೋಣ, ಮೆಟ್ಟೋಣ ಕೆಚ್ಚೆದೆಯ ಮಿಂಚಿನಲಿ
ತಟ್ಟೋಣ ದವಡೆಯನೆ ಧಾಂಡಿಗರ ಸಂಚಿನಲಿ….

ನಮ್ಮುಸಿರ ಬಿಸಿಯು ಆರುವ ಮುನ್ನ
ನಮ್ಮೆದೆಯ ಅಸುವು ನೀಗುವ ಮುನ್ನ
ನಾಡಿಗರ ಹಸಿರಕ್ತ ಬರಿದೆ ಹೋಗುವ ಮುನ್ನ
ಕ್ರೋಧದುರಿ ಮೈತಾಳಿ ನಮ್ಮನೇ ಸುಡುವ ಮುನ್ನ…
ಅಟ್ಟೋಣ ದ್ರೋಹಿಗಳ, ಮೆಟ್ಟೋಣ ಬನ್ನಿ
ಕಟ್ಟಳೆಯ ಬದಿಗಿಟ್ಟು ಉರಿವ ಬೆಂಕಿಯ ತನ್ನಿ

ನಮ್ಮಳಲು ನಮಗಿರಲಿ
ಕೆಂಪಿರುಳು ಬೇಡ
ಸ್ವಾತಂತ್ರ್ಯ ಉಳಿದಿರಲಿ
ದಾಸ್ಯದಳು ಬೇಡ….

ನಮ್ಮೂರು ಕನಸಿನ ನಾಕ
ನಮ್ಮವರು ಉಸಿರಿತ್ತು
ಸಾವನ್ನೆ ಮುತ್ತಿಟ್ಟು
ನಮಗಿತ್ತ ಸುರಲೋಕ….

ನಮ್ಮೊಡಲ ಒಡೆಯರು ನಾವು
ಒಮ್ಮನದಿ ವೈರಿಗಳ ಹೊಡೆದು
ಜೀವ-ಭಾವೈಕ್ಯದ ಸಿಡಿಲ-ಮಳೆಗರೆದು
ದೇಶಕಂಟಕರ ಕೆಡಿಸುವೆವು….. ಇಲ್ಲವೆ ಸಾವು!

ಕಾಳರಾತ್ರಿಯ ಭಯವ ತಡೆದು
ಹಾಳು ಪ್ರಭುತನದ ಬೇಡಿ ಒಡೆದು
ಹೊಸತೇಜ-ಓಜಗಳ ಮೆರಗಿಂದ
ರಸಭರಿತ ಬೀಡಕಟ್ಟಿಹೆವು ನಾವು….

ನಮ್ಮ ನೆಲ ಚಂದನದ ಕಂಪಿನದು
ನಮ್ಮ ಹೊಲ ಹಸುರುಮಯ ಸೊಂಪಿನದು
ಶಾಂತಿದೂತರ, ಕ್ರಾಂತಿವೀರರ
ನಮ್ಮಕುಲ ಇಳೆಯಲತಿ ಪೆಂಪಿನದು…

ರಣಕಹಳೆ ನಾಡಿಗಳ ಹೊಕ್ಕು ನೆತ್ತರಿನ
ಕಣಕಣದಿ ಹೊಸ ಬಿರುಸನಿತ್ತು
ಕೆಣಕುತಿದೆ ನಮ್ಮ ನೆಲದಭಿಮಾನವನಿಂದು
ಹೋಗೋಣ ಬನ್ನಿ, ಮಾತೆಯ ಮಾನ ಉಳಿಸೋಣ

ಭಾರತಾಂಬೆಯ ವೀರ ಪುತ್ರರು
ಮೇರುಗಿರಿಯ ಹಿಮಖಂಡದಲಿ
ನೆತ್ತರಿನ ಕುಯಿಲು ಹರಿಸುತಿರೆ
ಭೀತರಾಗದೆ ನಾವು ನೆಗೆಯೋಣ, ಬಗೆಯೋಣ….

ಹೊನ್ನು ಮಣ್ಣಿನ ಕಲಹ ಬೇಡ ನಮಗಿಂದು
ಕುನ್ನಿಗಳ ಕೆಂಗಣ್ಣ ಕಿಡಿಯಿಹುದು ಮುಂದು
ನನ್ನಿಯಲಿ ನಮ್ಮೊಲವು
ಚಿನ್ನಿಗಳ ಕಣ್ಣುಗಳೆ ನಮಗೆ ಕುಂದು

ಇಂದು ಬನ್ನಿ ಒಂದಾಗೋಣ
ಮುಂದೆ ಎದೆಸೆಟೆದು ಸಾಗೋಣ
ಕಡೆಯುಸಿರು ಇರುವನಕ
ನೆಲದ ಬೆಲೆ ಉಳಿಸೋಣ…

(ಅಡಿಗರನ್ನು ನೆನೆದು)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾರೆಗಳ ಊರಲ್ಲಿ
Next post ತುಂಬು ಮುಳ್ಳಿನೊಳಿಲ್ಲವೇ ಮಾಧುರ್‍ಯ?

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

cheap jordans|wholesale air max|wholesale jordans|wholesale jewelry|wholesale jerseys