Home / ಕವನ / ಕವಿತೆ / ಅನಂತ

ಅನಂತ

ಕಿರಿ ಕಿರಿ
ಮನಸ್ಸಿನ ಒಳಗೆ ಹೊರಗೆ
ಪರೀಕ್ಷಾ ಭವನದಲಿ ಕೂತ ವಿದ್ಯಾರ್ಥಿಯ
ತಲೆಯಲ್ಲಿ….
ತಲೆಯ ಮೇಲೆ ಫೋನಿನ ಕಿರ್ ಕಿರಿ
ಆಫೀಸಿನಲ್ಲಿ ಮೇಲಾಧಿಕಾರಿಗಳ
ಅವರಿಗೆ ಕಂಪನಿಯ ಲಾಭ ಹಾನಿಗಳ
ಓದು ರೂಮಿನಲಿ
ಓದುವ ಹುಡುಗರ…ಹುಡುಗಿಯರ
‘ಮೇಲಂಕಲಿಯಾ ಎಂದರೇನು ಸಾರ್’
ಅಯ್ಯೋ ಪೆದ್ದೆ. ಎಷ್ಟು ಸಾರಿ ವಿವರಿಸಲಿ?
ಸ್ವಲ್ಪ ಓದ ಬಿಡಿ (ಅದನ್ನು ತಿಳಿದು ನೀವು ಮಾಡುವುದೇನು)
ಮನೆಯಲ್ಲಿ ಓದಲಾಗುವುದಿಲ್ಲ
ಹೆಂಡತಿಯ ಕಿರಿ ಕಿರಿ
ಮಕ್ಕಳ ಕಿರಿ ಕಿರಿ
ಪಕ್ಕದ ಮನೆಯ ಹೆಣ್ಮಕ್ಕಳ ಕಿರಿ ಕಿರಿ
ಆಕೆ ಫರೀದಾ – ಅಡಿಗಡಿಗೆ ಬರುತ್ತಾಳೆ
ನನ್ನ ಓದುವ ಟೇಬಲಿಗೆ ಒರಗುತ್ತಾಳೆ
ಬುದ್ಧಿ ಮನಸ್ಸಿಗೆ
ಓದಲಾಗುವುದಿಲ್ಲ
ಥತ್, ಹರೆಯದ ಹುಡುಗಿ
ತಲೆಯಷ್ಟು ದಪ್ಪ ಎದೆ
ಕಿರಿ ಕಿರಿ ಎಲ್ಲಾ ಕಡೆ
ನೆತ್ತಿಯ ಕುಕ್ಕಿ ‘ಕವಿ ಸಮಯ’ದ ಬಗ್ಗೆ
ವಿಚಾರ ಮಾಡ ತೊಡಗಿದಾಗ
ಮತ್ತೆ ಕಿರ್ರ್…..
‘ತಗೊಳ್ಳಿ, ಈ ಮಗುವನ್ನ
ನನಗೆ ಒಳಗೆ ಕೆಲಸ ಇದೆ….
(ನಿನಗೆ ಕೆಲಸ ಇಲ್ಲದಿದ್ದುದು ಯಾವಾಗ)’
ಓದಿ ನೀವು ಮಾಡಿದ್ದೇನು?
‘ಮಾಡಿದ್ದೇನು’
ಮೂರು ಕಾಸಿನ ಬೆಲೆಯ ಶಿಕ್ಷಣ ವೃತ್ತಿ
ಅಲ್ಲಿ ಪ್ರಿಂಸಿಪಾಲನ,
ಸಂಚಾಲಕರ ಕಿರುಕುಳ
‘ನಿನ್ನೆ ಪಿರೇಡ್ ಬಂಕ್ ಮಾಡಿದಿ?
ವಿದ್ಯಾರ್ಥಿಗಳ ಕಂಪ್ಲೇಂಟ್ ಬಂದಿದೆ….’
ಮಾಡಿದ್ದು ಅರ್ಥವಾಯಿತೆ ಅವರಿಗೆ?
ಕಿರಾಣಿ ಅಂಗಡಿಯಲ್ಲಿ
ರೇಶನಿಗೆ ನಿಂತಾಗ ಹಿಂದು-ಮುಂದಿನವರ
ಗಲಾಟೆ, ಕಿರಿಕಿರಿ
‘ಅಕ್ಕಿಯಿದೆ, ಗೋದಿಯಿಲ್ಲ’
ಆದರದು (ಮನುಷ್ಯರು ತಿನ್ನುವಂಥಾದ್ದಲ್ಲ)
‘ಗೋದಿಯಿದೆ, ಸಕ್ಕರೆ ಇಲ್ಲ’ – (ಸ್ನ್ಯಾಮಿನೊಳಗಿದೆ ಎಲ್ಲ.)
ಅವನ ಮುಖಕ್ಕೆ ಹೊಡೆದಷ್ಟು ಸಿಟ್ಟು
ಒಮ್ಮೆಲೆ ಆತಂಕಿ ಆಗಿ ಬಿಡಲೆ
ಆಗ ಮೈ ಒರಸಿ ಮಾತಿಗೆ ನಿಂತ
‘ಅವಳ’ ಮದಮತ್ತ ಶರೀರದ ರೂಪ-ಅತಿ-ಸಮೀಪ.
ಮತ್ತೆ ಕಿರಿ ಕಿರಿ
ಸಿಟ್ಟಿನ ವಿಚಾರವೂ ಹೋಯಿತು.
ಬದುಕಿನುದ್ದಕೂ
ಮೈ-ಮನಗಳನ್ನು ಆವರಿಸಿ ನಿಂತ
ಕಿರುಕುಳ ಚಿರ ಅನಂತ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...