Home / ಕವನ / ಕವಿತೆ / ಅನಂತ

ಅನಂತ

ಕಿರಿ ಕಿರಿ
ಮನಸ್ಸಿನ ಒಳಗೆ ಹೊರಗೆ
ಪರೀಕ್ಷಾ ಭವನದಲಿ ಕೂತ ವಿದ್ಯಾರ್ಥಿಯ
ತಲೆಯಲ್ಲಿ….
ತಲೆಯ ಮೇಲೆ ಫೋನಿನ ಕಿರ್ ಕಿರಿ
ಆಫೀಸಿನಲ್ಲಿ ಮೇಲಾಧಿಕಾರಿಗಳ
ಅವರಿಗೆ ಕಂಪನಿಯ ಲಾಭ ಹಾನಿಗಳ
ಓದು ರೂಮಿನಲಿ
ಓದುವ ಹುಡುಗರ…ಹುಡುಗಿಯರ
‘ಮೇಲಂಕಲಿಯಾ ಎಂದರೇನು ಸಾರ್’
ಅಯ್ಯೋ ಪೆದ್ದೆ. ಎಷ್ಟು ಸಾರಿ ವಿವರಿಸಲಿ?
ಸ್ವಲ್ಪ ಓದ ಬಿಡಿ (ಅದನ್ನು ತಿಳಿದು ನೀವು ಮಾಡುವುದೇನು)
ಮನೆಯಲ್ಲಿ ಓದಲಾಗುವುದಿಲ್ಲ
ಹೆಂಡತಿಯ ಕಿರಿ ಕಿರಿ
ಮಕ್ಕಳ ಕಿರಿ ಕಿರಿ
ಪಕ್ಕದ ಮನೆಯ ಹೆಣ್ಮಕ್ಕಳ ಕಿರಿ ಕಿರಿ
ಆಕೆ ಫರೀದಾ – ಅಡಿಗಡಿಗೆ ಬರುತ್ತಾಳೆ
ನನ್ನ ಓದುವ ಟೇಬಲಿಗೆ ಒರಗುತ್ತಾಳೆ
ಬುದ್ಧಿ ಮನಸ್ಸಿಗೆ
ಓದಲಾಗುವುದಿಲ್ಲ
ಥತ್, ಹರೆಯದ ಹುಡುಗಿ
ತಲೆಯಷ್ಟು ದಪ್ಪ ಎದೆ
ಕಿರಿ ಕಿರಿ ಎಲ್ಲಾ ಕಡೆ
ನೆತ್ತಿಯ ಕುಕ್ಕಿ ‘ಕವಿ ಸಮಯ’ದ ಬಗ್ಗೆ
ವಿಚಾರ ಮಾಡ ತೊಡಗಿದಾಗ
ಮತ್ತೆ ಕಿರ್ರ್…..
‘ತಗೊಳ್ಳಿ, ಈ ಮಗುವನ್ನ
ನನಗೆ ಒಳಗೆ ಕೆಲಸ ಇದೆ….
(ನಿನಗೆ ಕೆಲಸ ಇಲ್ಲದಿದ್ದುದು ಯಾವಾಗ)’
ಓದಿ ನೀವು ಮಾಡಿದ್ದೇನು?
‘ಮಾಡಿದ್ದೇನು’
ಮೂರು ಕಾಸಿನ ಬೆಲೆಯ ಶಿಕ್ಷಣ ವೃತ್ತಿ
ಅಲ್ಲಿ ಪ್ರಿಂಸಿಪಾಲನ,
ಸಂಚಾಲಕರ ಕಿರುಕುಳ
‘ನಿನ್ನೆ ಪಿರೇಡ್ ಬಂಕ್ ಮಾಡಿದಿ?
ವಿದ್ಯಾರ್ಥಿಗಳ ಕಂಪ್ಲೇಂಟ್ ಬಂದಿದೆ….’
ಮಾಡಿದ್ದು ಅರ್ಥವಾಯಿತೆ ಅವರಿಗೆ?
ಕಿರಾಣಿ ಅಂಗಡಿಯಲ್ಲಿ
ರೇಶನಿಗೆ ನಿಂತಾಗ ಹಿಂದು-ಮುಂದಿನವರ
ಗಲಾಟೆ, ಕಿರಿಕಿರಿ
‘ಅಕ್ಕಿಯಿದೆ, ಗೋದಿಯಿಲ್ಲ’
ಆದರದು (ಮನುಷ್ಯರು ತಿನ್ನುವಂಥಾದ್ದಲ್ಲ)
‘ಗೋದಿಯಿದೆ, ಸಕ್ಕರೆ ಇಲ್ಲ’ – (ಸ್ನ್ಯಾಮಿನೊಳಗಿದೆ ಎಲ್ಲ.)
ಅವನ ಮುಖಕ್ಕೆ ಹೊಡೆದಷ್ಟು ಸಿಟ್ಟು
ಒಮ್ಮೆಲೆ ಆತಂಕಿ ಆಗಿ ಬಿಡಲೆ
ಆಗ ಮೈ ಒರಸಿ ಮಾತಿಗೆ ನಿಂತ
‘ಅವಳ’ ಮದಮತ್ತ ಶರೀರದ ರೂಪ-ಅತಿ-ಸಮೀಪ.
ಮತ್ತೆ ಕಿರಿ ಕಿರಿ
ಸಿಟ್ಟಿನ ವಿಚಾರವೂ ಹೋಯಿತು.
ಬದುಕಿನುದ್ದಕೂ
ಮೈ-ಮನಗಳನ್ನು ಆವರಿಸಿ ನಿಂತ
ಕಿರುಕುಳ ಚಿರ ಅನಂತ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...