ಮತ ಕೊಡುವಾಗ
ನನ್ನ ಮತ ಬೇಡವೆಂದಿತ್ತ
ಮುಂಗಾರು ಒಳನುಗ್ಗಿ
ಸಿಡಿದೆದ್ದು ಮುರಿದಿದ್ದ
ಮನಮಂದಿರದ ಬಾಗಿಲನು ಜಗ್ಗಿ
ಕಿಟಕಿಯ ಬಿಸಿಲುಗನ್ನಡಿಯೊಳಗಿನ
ತಂಪನು ಘಾಸಿಗೊಳಿಸಿ
ಅಂತರಂಗದಲಿ ದಶಮಾನಗಳಿಂದಲು
ಒಳಿತು ಕೆಡುಕುಗಳ ಅರಿವು
ಬಂದಂದಿನಿಂದಲು
ಸೃಷ್ಟಿಯಾದ,
ಉದ್ದಗಲಕೆ ಬೆಳೆದ ಒಂದು ಸುಂದರ
ಮನೋಹರ ಪ್ರತಿಮೆ
ಕೆಡವಿ ನೆಲಸಮವಾದುದರ
ಅನುಭವ ನಿತ್ಯ ಸತ್ಯವಾಗಿ;
ಭ್ರಷ್ಟ ವೃಷ್ಟಿಯು ಇಂದು
ಏಕೋ ಅತಿಯಾಗಿ
ನರನ ಹರ್ಷದ ರೇಖೆ
ಒಂದು ಕತೆಯಾಗಿ
ನಾಲ್ದೆಸೆಗೂ ಹಬ್ಬಿ
ಭೂ-ವ್ಯೋಮಗಳ ನಡುವಿನ
ಅಳೆಯಲಾರದ ಅಂತರವನು
ಕಾರ್ಮೋಡಗಳಿಂದ ಅಳೆದು
ಮೇಘಗರ್ಜನೆಯಿಂದ
ನನ್ನೆದೆಯನು ತತ್ತರಿಸಿ ಒಡೆದು;
ನರನಿಂದು ಹುಂಬ
ಮನುಷ್ಯನೂ ಸಿಂಹನೂ ಆಗಿರದೆ
ತನ್ನ ಗರಜಿಗೆ ತಾನಗೆಟ್ಟು
ಕುಣಿಯುವ ಡೊಂಬ
ಎಂಬ ಧ್ಯಾನವನ್ನು ಮೂಡಿಸಿತ್ತು.
*****
Related Post
ಸಣ್ಣ ಕತೆ
-
ಎದಗೆ ಬಿದ್ದ ಕತೆ
೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…
-
ಗಿಣಿಯ ಸಾಕ್ಷಿ
ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…
-
ವಲಯ
ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…
-
ರಾಧೆಯ ಸ್ವಗತ
ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…
-
ಇನ್ನೊಬ್ಬ
ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…