ವೃಷ್ಟಿ

ಮತ ಕೊಡುವಾಗ
ನನ್ನ ಮತ ಬೇಡವೆಂದಿತ್ತ
ಮುಂಗಾರು ಒಳನುಗ್ಗಿ
ಸಿಡಿದೆದ್ದು ಮುರಿದಿದ್ದ
ಮನಮಂದಿರದ ಬಾಗಿಲನು ಜಗ್ಗಿ
ಕಿಟಕಿಯ ಬಿಸಿಲುಗನ್ನಡಿಯೊಳಗಿನ
ತಂಪನು ಘಾಸಿಗೊಳಿಸಿ
ಅಂತರಂಗದಲಿ ದಶಮಾನಗಳಿಂದಲು
ಒಳಿತು ಕೆಡುಕುಗಳ ಅರಿವು
ಬಂದಂದಿನಿಂದಲು
ಸೃಷ್ಟಿಯಾದ,
ಉದ್ದಗಲಕೆ ಬೆಳೆದ ಒಂದು ಸುಂದರ
ಮನೋಹರ ಪ್ರತಿಮೆ
ಕೆಡವಿ ನೆಲಸಮವಾದುದರ
ಅನುಭವ ನಿತ್ಯ ಸತ್ಯವಾಗಿ;
ಭ್ರಷ್ಟ ವೃಷ್ಟಿಯು ಇಂದು
ಏಕೋ ಅತಿಯಾಗಿ
ನರನ ಹರ್ಷದ ರೇಖೆ
ಒಂದು ಕತೆಯಾಗಿ
ನಾಲ್ದೆಸೆಗೂ ಹಬ್ಬಿ
ಭೂ-ವ್ಯೋಮಗಳ ನಡುವಿನ
ಅಳೆಯಲಾರದ ಅಂತರವನು
ಕಾರ್ಮೋಡಗಳಿಂದ ಅಳೆದು
ಮೇಘಗರ್ಜನೆಯಿಂದ
ನನ್ನೆದೆಯನು ತತ್ತರಿಸಿ ಒಡೆದು;
ನರನಿಂದು ಹುಂಬ
ಮನುಷ್ಯನೂ ಸಿಂಹನೂ ಆಗಿರದೆ
ತನ್ನ ಗರಜಿಗೆ ತಾನಗೆಟ್ಟು
ಕುಣಿಯುವ ಡೊಂಬ
ಎಂಬ ಧ್ಯಾನವನ್ನು ಮೂಡಿಸಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆತ್ತು ಹೊತ್ತಾದರೂ
Next post ಜೀವೋಪಯೋಗವಿಲ್ಲದ ಅವಯವವುಂಟೇ ?

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…