ನನ್ನೂರಿನವರು

ಆಡಮ್ ಅಗೆದಾಗ ಈವ್ ನೇಯ್ದಾಗ
ಇದ್ದರೆ ಇವರು ?
ಮೊಹೆಂಜೊದಾರೋದ ಶವಗಳಿಗೆಲ್ಲಾ
ಜೀವ ಏಕ್ ದಮ್ ಬಂದ ಹಾಗೆ
ಕುರುಕ್ಷೇತ್ರದಲ್ಲಿ ಹೂತವರೆಲ್ಲಾ ರಜಾದ ಮೇಲೆ ತಿರುಗುವ ಹಾಗೆ
ಎಂದೋ ಹುಟ್ಟಬೇಕಿದ್ದವರು ಫಕ್ಕನೆ ನೆನಪಾಗಿ
ಲೇಟಾಗಿ ಅವತರಿಸಿದ ಹಾಗೆ
ಪರ್ಗೆಟೋರಿಯೋದಿಂದ ತಪ್ಪಿಸಿಕೊಂಡು
ವೈತರಣೀ ನದಿಯಲ್ಲಿ ಮುಳುಗದೆ ಬಂದು
ಹಳೆ ವಿಳಾಸಗಳ ಹುಡುಕುವವರಂತೆ
ಹಣಕೀ ಹಣಕೀ ನೋಡುವರು
ನಿದ್ದೆಹೋದ ರೋಡುಗಳಲ್ಲಿ ವಾಲುತ್ತಾ ನಡೆಯುವರು
ಗಂಟೆಗಟ್ಟಳೆ ಮಾತಾಡುವರು
ಮಾತಾಡುತ್ತಾ ಇಳಿಯುವರು-ಊಟಕ್ಕೆ ಅಥವಾ ಜಗಳಕ್ಕೆ
ಹುಲಿ ಹಾಲನ್ನು ಕುಡಿದವರು ಕತ್ತೆ ಹಾಲಲ್ಲಿ ಮಿಂದವರು
ಸರಸ್ವತಿಯ ಸ್ತನದ್ವಯ ಪಂಡಿತರು
ಕತ್ತಿ ಹಿಡಿದಲ್ಲಿ ಕಲಿಗಳು
ಸಂಸ್ಕೃತಿ ಸುಧೆಯ ಎಮ್ಮೆಗಳು ಈ ಹೆಮ್ಮೆಯ ಜನರು
ಗಕ್ಕನೆ ನಿಲ್ಲುವರು ಸುಮ್ಮನೆ ಹೋಗುವರು
ಮಾನವ ದುರಂತದ ಒಂದಂಕ ಆಡುವರು
ಬಲವಂತದ ಹೇರಿನ ಕೆಳಗೆ
ಬದುಕುವರು-ಬದುಕುತ್ತೇವೆಂದು ಭ್ರಮಿಸುವರು
ಈ ಅನಾಥ ಜನರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅತ್ಯಂತ ಚಿಕ್ಕ ಮುದ್ರಣ ಯಂತ್ರ
Next post ಕುಣಿಯೋದು

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…