ಮಾಗು

ಅಯ್ಯೋ….
ಮುಟ್ಟುವ ತನಕ ಗೊತ್ತೇ ಆಗಲಿಲ್ಲ.
ನನ್ನಂತೆಯೇ ಅವನೂ ಮನುಷ್ಯನೆಂದು!

ಅಪ್ಪಿಕೊಂಡ ಮೇಲೆ ಅರಿವಾಯಿತು
ನಾನೂ ಅವನೂ ಒಂದೇ ಎಂದು!

ಕೇಡಿಗೆ ವಶವಾಗಿ
ಹಲ್ಲುಗಳ ಮಸೆದಿದ್ದೆವು ಹುಡಿಯಾಗುವ ತನಕ
ಕಲ್ಲುಗಳನೆತ್ತೆತ್ತಿ ಒಗೆದಿದ್ದೆವು ಪುಡಿಯಾಗುವ ತನಕ

ಕುರುಡಾಗಿ ಕಾದಾಡಿದೆವು
ಬರಡಾಗಿ ಬೈದಾಡಿದೆವು
ಒಡಲಲ್ಲಿ ಬೆಂಕಿ ಎದೆಯಲ್ಲಿ ವಿಷ
ದಗಧಗನೆ ಉರಿದುಕೊಂಡು
ಕವಕವನೆ ಕಾರಿಕೊಂಡು
ಸಾಧಿಸಿದೆವು ಹಟ ಪಣಕೊಟ್ಟು…

ಭಿನ್ನ-ಭೇದದ ಹೊರೆ ಹೊತ್ತು
ವಾಲಿತ್ತು ಕತ್ತು ಎತ್ತಲಾಗದೆ ಶಿರ
ನೋಯುತ್ತಾ ಬೇಯುತ್ತಾ
ಕೊಳೆಯುತ್ತಾ ಬರುತ್ತಾ
ಭಂಡ ಬಾಳುವೆಯ ಬಾಳಿ
ನಲುಗಿದ್ದೆವು ರವರವ ನರಕದಲ್ಲಿ…

ಗರ ಬಡಿದಿತ್ತೆ ನಾಲಿಗೆಗೆ ?
ಹೌದು….
ಸುಳ್ಳು ನುಡಿದಿತ್ತು ಕಳ್ಳಾಟವಾಡಿತ್ತು
ಮುಳ್ಳು ಹೊಕ್ಕಿತ್ತು ಮಳ್ಳು ಹಿಡಿದಿತ್ತು!

ಹೊರಗೆ ಕಾಣಿಸದಿದ್ದರೂ
ಒಳಗೊಳಗೆ ಅನಿಸಿತ್ತು
ಹಟವೇಕೆ ಘಟ ನೀನು
ದಿಟವಲ್ಲ ಪಟ ನೀನು
ಮಿಗವಾಗು ಖಗವಾಗು
ಪಶು ಪಕ್ಷಿ ಹುಳುವಾಗು
ಗಿಡವಾಗು ಮರವಾಗು
ಹೂ-ಬಳ್ಳಿ ಹುಲ್ಲಾಗು
ಜಗವಾಗು ಮಗುವಾಗು
ಹೊರೆಯಿಳಿಸಿ ಹಗುರಾಗು
ತೂಗು ಬಾಗು ಮಾಗು…
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭ್ರಮಣ – ೧೩
Next post ಸೊಸೆ

ಸಣ್ಣ ಕತೆ

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…