ಕೂಲಿಕೆಲಸ ನಮ್ಮದು

ಕೂಲಿಕೆಲಸ ನಮ್ಮದು
ದಿನದ ಕೂಲಿಕೆಲಸ ನಮ್ಮದು|
ಅಂದಿನದ ಕೂಲಿ ಅಂದೇ ಪಡೆವ
ನಾಳಿನ ಕೆಲಸದ ಖಾತ್ರಿಯೇ ಇಲ್ಲ||

ದಿನದ ಕರ್ಮಕೆ ಪ್ರತಿಫಲವ
ಅಂದೇ ಕೊಡುವಕಾಲ|
ಹಿಂದಿನಂತೆ ಮುಂದಿನ ಜನ್ಮಕೆ
ವರ್ಗಾವಣೆಯೆಂಬುದೇ ಇಲ್ಲ|
ಪುಣ್ಯವಿದ್ದರೇನೇ ನಾಳೆಯ
ಕೆಲಸ ನೀ ಪಡೆಯುವೆ
ಇಲ್ಲದಿರೆ ಇಂದೇ
ಕಂತೆ ಒಗೆದು ಸಂತೆಮುಗಿಸಿ
ಇಹದ ಪ್ರಯಾಣ ಮುಗಿಸುವೆ||

ಕೋಟಿ ಇರಲಿ ಆಸ್ತಿ
ನಿನ್ನದಲ್ಲ ನಾಳೆಗೆ|
ಭೀತಿ ಇರಲಿ ನಿನಗೆ
ನಾಳೆಯ ಪಾಳಿಗೆ|
ಭಯವಿರಲಿ ಧರ್ಮದ
ಮಾನದಂಡ ಚಾಟಿಗೆ|
ನೀತಿ ನಿಯಮವಿರಲಿ
ನಿನ್ನ ದುಡಿಮೆಗೆ||

ಎಷ್ಟು ಗಳಿಸಿ ಕೂಡಿಟ್ಟರೇನು
ಹೆತ್ತಮಕ್ಕಳು ಕಡೆಗಣಿಸೆ ಮುಪ್ಪಿನಲಿ
ನೊಂದು ಮನಮಿಡಿಯೆ
ಯಾರಿರುವರು ನಿನ್ನೊಟ್ಟಿಗೆ|
ಸತ್ತಾಗ ಬಂಧು-ಸಂಸಾರ
ಬರುವುದೇ ನಿನ್ನೊಂದಿಗೆ
ಧರ್ಮ, ಪುಣ್ಯಕರ್ಮ ಫಲಗಳೆರಡೇ
ಉಳಿವವು ನಿನ್ನ ಜೊತೆಗೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೌನ
Next post ಹರಿ ನಿನ್ನ ನೋಡದೆ…

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ದೊಡ್ಡ ಬೋರೇಗೌಡರು

    ಪ್ರಕರಣ ೭ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸಗಳ ಸಮಸ್ಯೆ ಬಹಳ ದೊಡ್ಡದೆಂದು ರಂಗಣ್ಣನಿಗೆ ತಿಳಿದುಬಂತು. ಮೇಲಿನವರು ಬರಿಯ ವರದಿಗಳನ್ನು ತಯಾರು ಮಾಡುವುದರಲ್ಲಿಯೂ ಹೊರಗಿನ ಪ್ರಾಂತದವರಿಗೆ - ಅದರಲ್ಲಿಯೂ… Read more…

  • ಮೇಷ್ಟ್ರು ರಂಗಪ್ಪ

    ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…