ಕಟುಕರಾಗದಿರಿ ನೀವು

ಕಟುಕರಾಗದಿರಿ ನೀವು|
ಕನ್ನಡ ತಿಳಿದೂ
ಕನ್ನಡದವರೆದುರು
ಕನ್ನಡ ಮಾತನಾಡದೆ||

ಕನ್ನಡ ತಿಳಿದು ಮಾತನಾಡದವರನು
ಕಠಿಣ ಹೃದಯಿಗಳೆಂದರೆ ತಪ್ಪೇಕೆ?
ಇಂಥವರನು ಹುಡುಕಲು ಕನ್ನಡಿ ಬೇಕೇಕೆ?
ಇವರ ಮೆಚ್ಚಿಸಲು, ಹೊಗಳಲು ನಾ
ಮುನ್ನುಡಿ ಬರಿಯ ಬೇಕೆ?||

ಇರುವುದು ಕನ್ನಡ ನೆಲ
ಕುಡಿಯುವದು ಕನ್ನಡ ಜಲ|
ಬರುವುದು ಭಾಷೆ ಕನ್ನಡ
ನುಡಿಯಲೇಕೆ ಮನಸು ಬಾರದು|
ಜ್ಞಾನಾರ್ಜನೆಗೆ ಕಲಿಯಲಿ ಹತ್ತಾರು ಭಾಷೆ
ಈ ನೆಲದ ಋಣಭಾರಕಾದರೂ
ನಿತ್ಯ ಕನ್ನಡ ಮಾತನಾಡಲೇಕೆ ಚೌಕಾಸಿ||

ಸಲ್ಲದೀ ಬಿಗುಮಾನ
ಸಡಿಲದಿದ್ದರೆ ಅವಮಾನ|
ಇರಲಿ ಸ್ವಾಭಿಮಾನ
ಸ್ವಲ್ಪವಾದರೂ ಅಭಿಮಾನ|
ತಿನ್ನುತಿರುವುದು ಕನ್ನಡದ ಅನ್ನ
ಬಾಯಿದ್ದು ಸ್ಥಳಿಯರೊಡನೆ
ಅನ್ಯಭಾಷೆಯಲಿ ಮತನಾಡಿದರೆ
ಈ ನೆಲಕೆ ನೀ ಕೃತಘ್ನ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಶ್ನಾರ್ಥ ಚಿನ್ಹೆ
Next post ಆತ್ಮದ ಬೆಳಕು

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

cheap jordans|wholesale air max|wholesale jordans|wholesale jewelry|wholesale jerseys