ಆತ್ಮದ ಬೆಳಕು

ಹರಿ ನಿನ್ನ ಕೃಪೆಯೊಂದು ಆಧಾರ
ಅದುವೆ ಈ ಬಾಳಿನ ಸರ್ವ ಕಾಮ್ಯ
ನಿನ್ನ ನೋಟವೊಂದೆ ಎನ್ನ ಕಾಯಲಿ
ನಿನ್ನ ರೂಪವೇ ಎನಗೆ ನಿತ್ಯ ಗಮ್ಯ

ಈ ಬದುಕು ನೀನಿಲ್ಲದ ಬರಡು
ಎಲ್ಲಯದು ಸಂತಸ ನವ್ಯ ಚೈತ್ಯ
ನೀನು ನನ್ನೊಂದಿಗೆ ಕೈ ನೀಡಿ ನಡೆಸು
ನಾನಾಗುವೆನು ನಿನ್ನ ಪಾದದಲಿ ಪಾವಿತ್ರ್ಯ

ಆಕಾಶ ಪಾತಾಳಗಳೆಲ್ಲ ನಿನ್ನ ಛಾಯೆ
ಭೂಲೋಕ ತುಂಬ ನಿನ್ನ ಮಾಯೆ
ಈ ಮಾಯೆದಿ ನೀನೆ ನನ್ನ ಬಿಡಿಸು
ನೀನೇ ನನ್ನ ಜನ್ಮ ಜನ್ಮಕ್ಕೂ ತಾಯೆ

ಎನ್ನ ಕಂಗಳ ತುಂಬೆಲ್ಲ ಇರಲಿ ರೂಪ
ಹೃದಯ ತುಂಬಲಿ ನಿನ್ನ ಭಕ್ತಿ ಸರಕು
ನಾನು ಪಡೆಯಲಿ ನನ್ನಾತ್ಮ ಬೆಳಕು
ಮಾಣಿಕ್ಯ ವಿಠಲನಾಗಲಿ ಅದೆಲ್ಲದಕು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಟುಕರಾಗದಿರಿ ನೀವು
Next post ಕೋಮು ಹಾಗೂ ಭಯೋತ್ಪಾದನೆ ಬೇರುಗಳು

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…