ಆತ್ಮದ ಬೆಳಕು

ಹರಿ ನಿನ್ನ ಕೃಪೆಯೊಂದು ಆಧಾರ
ಅದುವೆ ಈ ಬಾಳಿನ ಸರ್ವ ಕಾಮ್ಯ
ನಿನ್ನ ನೋಟವೊಂದೆ ಎನ್ನ ಕಾಯಲಿ
ನಿನ್ನ ರೂಪವೇ ಎನಗೆ ನಿತ್ಯ ಗಮ್ಯ

ಈ ಬದುಕು ನೀನಿಲ್ಲದ ಬರಡು
ಎಲ್ಲಯದು ಸಂತಸ ನವ್ಯ ಚೈತ್ಯ
ನೀನು ನನ್ನೊಂದಿಗೆ ಕೈ ನೀಡಿ ನಡೆಸು
ನಾನಾಗುವೆನು ನಿನ್ನ ಪಾದದಲಿ ಪಾವಿತ್ರ್ಯ

ಆಕಾಶ ಪಾತಾಳಗಳೆಲ್ಲ ನಿನ್ನ ಛಾಯೆ
ಭೂಲೋಕ ತುಂಬ ನಿನ್ನ ಮಾಯೆ
ಈ ಮಾಯೆದಿ ನೀನೆ ನನ್ನ ಬಿಡಿಸು
ನೀನೇ ನನ್ನ ಜನ್ಮ ಜನ್ಮಕ್ಕೂ ತಾಯೆ

ಎನ್ನ ಕಂಗಳ ತುಂಬೆಲ್ಲ ಇರಲಿ ರೂಪ
ಹೃದಯ ತುಂಬಲಿ ನಿನ್ನ ಭಕ್ತಿ ಸರಕು
ನಾನು ಪಡೆಯಲಿ ನನ್ನಾತ್ಮ ಬೆಳಕು
ಮಾಣಿಕ್ಯ ವಿಠಲನಾಗಲಿ ಅದೆಲ್ಲದಕು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಟುಕರಾಗದಿರಿ ನೀವು
Next post ಕೋಮು ಹಾಗೂ ಭಯೋತ್ಪಾದನೆ ಬೇರುಗಳು

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

cheap jordans|wholesale air max|wholesale jordans|wholesale jewelry|wholesale jerseys