Home / ಕವನ / ಕವಿತೆ / ಕೋಳಿ ಕೂಗಿದರೇನೇ

ಕೋಳಿ ಕೂಗಿದರೇನೇ

ಕೋಳಿ ಕೂಗಿದರೇನೇ
ಬೆಳಗಾವುದೆಂಬ ಕಾಲವೊಂದಿತ್ತು|
ನನ್ನ ಮನೆ ಬೆಂಕಿಯಿಂದಲೇ
ಊರ ಜನರ ಬೇಳೆ ಬೇಯ್ಯುವುದೆಂಬ
ಅಜ್ಞಾನದ ಕಾಲವೊಂದಿತ್ತು||

ಎಲ್ಲರೂ ಸರ್ವ ಸ್ವತಂತ್ರರು
ಯಾರ ಹಿಡಿತದಲಿ ಯಾರಿಲ್ಲ|
ಅಜ್ಞಾನಿಗಳು ಅಜ್ಞಾನದಿಂದ
ಮುಗ್ಧರ ಆಳಬಯಸುವರು|
ಸತ್ಯವನೆಂದೂ ಮುಚ್ಚಿಡಲಾರರು
ಬೆಳಕ ಮುಷ್ಠಿಯಲಿಡಿಯಬಹುವುದೇ ? ||

ಸಕಲ ಜೀವ ಸಂಕುಲಕೆ
ಗಾಳಿ ಮಳೆ ಬೆಳಕು ಭಾಗ್ಯಗಳು
ಉಚಿತವಾಗಿ ಸಿಗುತ್ತಿರುವಾಗ
ಮಧ್ಯವರ್ತಿಗಳ ಭಯವೇಕೆ?
ಮತ್ತವರು ಬೇಕೇಕೆ?
ನಾವು ನಾವೇ ಒಬ್ಬರಿಗೊಬ್ಬರು
ಸ್ನೇಹ ಹಸ್ತವ ನೀಡಿ
ಉಪಯೋಗ ಲಭ್ಯವಾಗುತ್ತಿರಲು||

ಕಾಲ ಬಂದಿದೆ ಒಬ್ಬರನೊಬ್ಬರು
ಅರಿತು ಸಹಾಯದಿ ಬದುಕುವ|
ಮಿತವ್ಯಯ, ಮಿತ ಆಹಾರ ಪದ್ಧತಿ
ಆರೋಗ್ಯಕರ ಹಾಗೂ ಸುಸಂಸ್ಕೃತಿ|
ಬೇಡ ಅನ್ಯರ ಸ್ವತಂತ್ರವನಾಳುವ ಮತಿ
ಅವಶ್ಯಕತೆಯನರಿತು ಆಟವಾಡುವುದು,
ಸಮಯಸಾಧಕ ಬುದ್ಧಿ, ಹಸಿದವರೊಡನೆ ಸ್ಪರ್ದ್ಧಿ
ಅದು ನಿನಗೇ ಮಾರಕ, ಹಾನಿಕಾರಕ||
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...