ಕೋಳಿ ಕೂಗಿದರೇನೇ

ಕೋಳಿ ಕೂಗಿದರೇನೇ
ಬೆಳಗಾವುದೆಂಬ ಕಾಲವೊಂದಿತ್ತು|
ನನ್ನ ಮನೆ ಬೆಂಕಿಯಿಂದಲೇ
ಊರ ಜನರ ಬೇಳೆ ಬೇಯ್ಯುವುದೆಂಬ
ಅಜ್ಞಾನದ ಕಾಲವೊಂದಿತ್ತು||

ಎಲ್ಲರೂ ಸರ್ವ ಸ್ವತಂತ್ರರು
ಯಾರ ಹಿಡಿತದಲಿ ಯಾರಿಲ್ಲ|
ಅಜ್ಞಾನಿಗಳು ಅಜ್ಞಾನದಿಂದ
ಮುಗ್ಧರ ಆಳಬಯಸುವರು|
ಸತ್ಯವನೆಂದೂ ಮುಚ್ಚಿಡಲಾರರು
ಬೆಳಕ ಮುಷ್ಠಿಯಲಿಡಿಯಬಹುವುದೇ ? ||

ಸಕಲ ಜೀವ ಸಂಕುಲಕೆ
ಗಾಳಿ ಮಳೆ ಬೆಳಕು ಭಾಗ್ಯಗಳು
ಉಚಿತವಾಗಿ ಸಿಗುತ್ತಿರುವಾಗ
ಮಧ್ಯವರ್ತಿಗಳ ಭಯವೇಕೆ?
ಮತ್ತವರು ಬೇಕೇಕೆ?
ನಾವು ನಾವೇ ಒಬ್ಬರಿಗೊಬ್ಬರು
ಸ್ನೇಹ ಹಸ್ತವ ನೀಡಿ
ಉಪಯೋಗ ಲಭ್ಯವಾಗುತ್ತಿರಲು||

ಕಾಲ ಬಂದಿದೆ ಒಬ್ಬರನೊಬ್ಬರು
ಅರಿತು ಸಹಾಯದಿ ಬದುಕುವ|
ಮಿತವ್ಯಯ, ಮಿತ ಆಹಾರ ಪದ್ಧತಿ
ಆರೋಗ್ಯಕರ ಹಾಗೂ ಸುಸಂಸ್ಕೃತಿ|
ಬೇಡ ಅನ್ಯರ ಸ್ವತಂತ್ರವನಾಳುವ ಮತಿ
ಅವಶ್ಯಕತೆಯನರಿತು ಆಟವಾಡುವುದು,
ಸಮಯಸಾಧಕ ಬುದ್ಧಿ, ಹಸಿದವರೊಡನೆ ಸ್ಪರ್ದ್ಧಿ
ಅದು ನಿನಗೇ ಮಾರಕ, ಹಾನಿಕಾರಕ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದು ಎಲೆ ಹೇಳಿದ್ದು
Next post ಇವುಗಳ ಪಾಲಿಸು

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

cheap jordans|wholesale air max|wholesale jordans|wholesale jewelry|wholesale jerseys