ಇವುಗಳ ಪಾಲಿಸು

ಬದುಕು ಇದು ಸ್ಥಿರವಲ್ಲ ಓ ಮನುಜ
ನೀರ ಮೇಲಿನ ಗುಳ್ಳೆ ಇದು ಸಹಜ
ನೀರು ಹರಿಯುವಾಗ ಗುಳ್ಳೆ ಅರಳುವುದು
ನೀರು ಬತ್ತಿದರೆ ತಾನು ಸತ್ತು ಹೊಗುವುದು

ದೇಹ ಸುಖಕ್ಕೆ ಅವಕಾಶವಾದಿಯಾಗದಿರು
ಕಾಲದಲಿ ಕರಗುವ ಮುನ್ನ ಎಚ್ಚರವಾಗಿರು
ಸತ್ಯಗಳ ಒಳಹೊರಗು ನೀನು ಆಚರಿಸು
ತನ ಮನ ದನಿಯಲಿ ಅಹಿಂಸೆಯ ಪಾಲಿಸು

ಇನ್ನೊಬ್ಬರ ಹೆಣ್ಣು ಹೊನ್ನಿಗೆ ಕನ್ನ ಹಾಕದಿರು
ಅಬ್ಬರ ಆಡಂಬರದಿ ಸಿರಿ ಸಂಪದಿಸದಿರು
ದೇವರು ನೀಡಿದನ್ನು ಪಡೆದು ಶಾಂತಿಯಿಂದಿರು
ಬ್ರಹ್ಮಚರ್ಯವುತನು ಮನ ದನಿಯಲಿ ರಕ್ಷಿಸು

ದಿನವಿಡೀ ಪರಮಾತ್ಮನ ಸ್ವಾದ್ಯಾಯ ಮಾಡು
ರಾತ್ರಿಯಲಿ ದೇವರ ಧ್ಯಾನವ ಮಾಡು
ಬಾಳಿನಲ್ಲಿಯೇ ದೇವರ ದರ್ಶನ ಪಡೆ
ಮಾಣಿಕ್ಯ ವಿಠಲನಾಗಿ ಸಾವಿನೆಡೆಗೆ ನಡೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೋಳಿ ಕೂಗಿದರೇನೇ
Next post ಸಾರ್ಥಕ ಜೀವನ

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…