ಕನ್ನಡವಾಗಲಿ ನಿತ್ಯ

ಕನ್ನಡವಾಗಲಿ ನಿತ್ಯ
ಕನ್ನಡವಾಗಲಿ ಸತ್ಯ|
ಕನ್ನಡ ಕಂಪಿನ ಹೂಮಳೆ ಸುರಿದು
ಸಮೃದ್ಧಿಯಾಗಲಿ ಕರುನಾಡು|
ಭವ್ಯ ಪರಂಪರೆಯ ಈ ನಾಡು||

ಕರುಣೆಯ ಕಡಲು ಈ ಕರುನಾಡು
ಶಾಂತಿಗೆ ಹೆಸರು ಈ ಕನ್ನಡನಾಡು
ಪ್ರೀತಿಗೆ ಮನೆಮಾತು ಈ ಕರುನಾಡು
ತ್ಯಾಗಕೆ ಎತ್ತಿದಕೈ ಈ ಕನ್ನಡನಾಡು|
ಸ್ನೇಹಕೆ ಸ್ನೇಹವ ತೋರುವ ನಾಡು
ಪ್ರಾಣಕೆ ಪ್ರಾಣವ ನೀಡುವ ನಾಡು
ಇದುವೇ ಕವಿ ಕೋಗಿಲೆಗಳ ಪುಣ್ಯದ ಬೀಡು||

ಶಿಲ್ಪಕಲೆಗಳ ಸುಂದರ ನಾಡು
ಶಿಲೆಗಳು ಸಂಗೀತವನಾಡುವ ನಾಡು|
ಹಸಿದವರಿಗನ್ನವ ನೀಡುವ ನಾಡು
ಧರ್ಮ ದೇವರುಗಳು ನೆಲಸಿಹ ನಾಡು
ನವದುರ್ಗಾ ದೇವತೆಗಳ ತಾಯ್ನಾಡು|
ತುಂಗೆ ಭದ್ರೆ ನೇತಾವತಿ ಕೃಷ್ಣೆ
ನಿತ್ಯ ಹರಿಯುವ ಸುಂದರ ನಾಡು||

ಹಕ್ಕಬುಕ್ಕರಾಳಿದ ಈ ಸಿರಿ ನಾಡು
ವಿಜಯನಗರ ವೀರರು ಆಳಿದನಾಡು|
ಹೊಯ್ಸಳ ಕದಂಬ ವಿರಚಿತನಾಡು
ತಾಯಿ ಕಾವೇರಿ ಉದಯಿಸಿದನಾಡು|
ಶಂಕರ ರಾಮಾನುಜ
ವಿದ್ಯಾರಣ್ಯರು ಬೆಳೆಸಿದ ನಾಡು||

ಕವಿರನ್ನ ಪಂಪರ ನೆಚ್ಚಿನ ನಾಡು
ಬೇಂದ್ರೆ ಕುವೆಂಪು ಮಾಸ್ತಿ ಕಾರಂತ
ಗೋಕಾಕರ ಸುಂದರ ಕನ್ನಡ ನಾಡು
ಕನಕ ಪುರಂದರ ಬಸವ ಸರ್ವಜ್ಞರ
ಶ್ರೀಮಂತ ಸಾಹಿತ್ಯದ ತವರು ಈ ಕರುನಾಡು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಂದೆ ಪ್ರೀತಿ?
Next post ನಿಗೂಢ

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…