Home / ಕವನ / ಕವಿತೆ / ಕನ್ನಡವಾಗಲಿ ನಿತ್ಯ

ಕನ್ನಡವಾಗಲಿ ನಿತ್ಯ

ಕನ್ನಡವಾಗಲಿ ನಿತ್ಯ
ಕನ್ನಡವಾಗಲಿ ಸತ್ಯ|
ಕನ್ನಡ ಕಂಪಿನ ಹೂಮಳೆ ಸುರಿದು
ಸಮೃದ್ಧಿಯಾಗಲಿ ಕರುನಾಡು|
ಭವ್ಯ ಪರಂಪರೆಯ ಈ ನಾಡು||

ಕರುಣೆಯ ಕಡಲು ಈ ಕರುನಾಡು
ಶಾಂತಿಗೆ ಹೆಸರು ಈ ಕನ್ನಡನಾಡು
ಪ್ರೀತಿಗೆ ಮನೆಮಾತು ಈ ಕರುನಾಡು
ತ್ಯಾಗಕೆ ಎತ್ತಿದಕೈ ಈ ಕನ್ನಡನಾಡು|
ಸ್ನೇಹಕೆ ಸ್ನೇಹವ ತೋರುವ ನಾಡು
ಪ್ರಾಣಕೆ ಪ್ರಾಣವ ನೀಡುವ ನಾಡು
ಇದುವೇ ಕವಿ ಕೋಗಿಲೆಗಳ ಪುಣ್ಯದ ಬೀಡು||

ಶಿಲ್ಪಕಲೆಗಳ ಸುಂದರ ನಾಡು
ಶಿಲೆಗಳು ಸಂಗೀತವನಾಡುವ ನಾಡು|
ಹಸಿದವರಿಗನ್ನವ ನೀಡುವ ನಾಡು
ಧರ್ಮ ದೇವರುಗಳು ನೆಲಸಿಹ ನಾಡು
ನವದುರ್ಗಾ ದೇವತೆಗಳ ತಾಯ್ನಾಡು|
ತುಂಗೆ ಭದ್ರೆ ನೇತಾವತಿ ಕೃಷ್ಣೆ
ನಿತ್ಯ ಹರಿಯುವ ಸುಂದರ ನಾಡು||

ಹಕ್ಕಬುಕ್ಕರಾಳಿದ ಈ ಸಿರಿ ನಾಡು
ವಿಜಯನಗರ ವೀರರು ಆಳಿದನಾಡು|
ಹೊಯ್ಸಳ ಕದಂಬ ವಿರಚಿತನಾಡು
ತಾಯಿ ಕಾವೇರಿ ಉದಯಿಸಿದನಾಡು|
ಶಂಕರ ರಾಮಾನುಜ
ವಿದ್ಯಾರಣ್ಯರು ಬೆಳೆಸಿದ ನಾಡು||

ಕವಿರನ್ನ ಪಂಪರ ನೆಚ್ಚಿನ ನಾಡು
ಬೇಂದ್ರೆ ಕುವೆಂಪು ಮಾಸ್ತಿ ಕಾರಂತ
ಗೋಕಾಕರ ಸುಂದರ ಕನ್ನಡ ನಾಡು
ಕನಕ ಪುರಂದರ ಬಸವ ಸರ್ವಜ್ಞರ
ಶ್ರೀಮಂತ ಸಾಹಿತ್ಯದ ತವರು ಈ ಕರುನಾಡು||
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...