ತಂಗಿ

ಹೀಗಾಗಬಹುದೆಂದು
ನಾನೆಣಿಸಿರಲಿಲ್ಲ ಕನಸಿನಲ್ಲಿಯೂ.
ಒಡಹುಟ್ಟಿದ ತಂಗಿಯೆಂದು
ಅನ್ನವಿಟ್ಟು ಆದರಿಸಿದೆ,
ನಿನ್ನ ಉನ್ನತಿಯ ಬಯಸಿದೆ,
ನಿಯತ್ತಿನಿಂದ ಶ್ರಮಿಸಿದೆ,
ಮನಸಾರ ಹರಸಿದೆ.
ನನ್ನ ಸೇವಕರಾದ
ಕಲಾವಿದರನ್ನೂ, ತಂತ್ರಜ್ಞರನ್ನೂ
ನಿನ್ನ ಸೇವೆಗೆ ನೇಮಿಸಿದೆ.
ನನ್ನ ಆರಾಧಕನನ್ನೇ
ನಿನ್ನನಾಧರಿಸಲು ಬೇಡಿದೆ.
ನನ್ನ ಬೆಡಗು ಬಿನ್ನಾಣಗಳನ್ನೂ
ಮನರಂಜಿಪ ಕಾರ್ಯಕ್ರಮಗಳನ್ನೂ
ನನಗೂ ಕೊಟ್ಟೆ – ನಿನ್ನ
ಉನ್ನತಿಯ ಬಯಸಿದೆ.
ಮನಸಾರ ಹರಸಿದೆ.
ಆದರೆ ಎಂತಹ ಘೋರ ಫಲಿತಾಂಶ!
ನನ್ನ ಪತಿ “ಶೋತೃ” ಮೈ ಮರೆತ
ನಿನ್ನ ರೂಪ ಲಾವಣ್ಯದಲಿ!
ಮರುಳಾದ ನಿನ್ನ ಒನಪು, ವೈಯಾರಕ್ಕೆ
ನನ್ನ ಮರೆಯುತ, ನಿನ್ನೆಡೆಗೆ
ಬಹು ಬೇಗ ಸರಿದ… ನನ್ನಿನಿಯ
“ಶೋತೃ ಬಾಂಧವ” ನಿನ್ನ
“ಪ್ರಿಯ ವೀಕ್ಷಕ”ನಾದ!
ನನ್ನ ಹಿರಿಮೆ, ಆಕರ್ಷಣೆ
ಬರುಬರುತ್ತಾ ಕಡಿಮೆಯಾಗಿ,
ನವ ಯುವತಿ ನೀನಾದೆ
“ದೂರದರ್ಶನ” ರಾಣಿ!
ಗರತಿ ನಾ ಮೂಲೆಗುಂಪಾದೆ
ನಿನ್ನ ನತದೃಷ್ಟ ಹಿರಿಯಕ್ಕ
“ಆಕಾಶವಾಣಿ”!
*****
೧೪-೦೬-೧೯೮೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸತ್ಯ: ಸರಳತೆ ಮತ್ತು ಸಂಕೀರ್ಣತೆಯ ನಡುವೆ
Next post ಕಳಕಳಿ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

cheap jordans|wholesale air max|wholesale jordans|wholesale jewelry|wholesale jerseys