ತಂಗಿ

ಹೀಗಾಗಬಹುದೆಂದು
ನಾನೆಣಿಸಿರಲಿಲ್ಲ ಕನಸಿನಲ್ಲಿಯೂ.
ಒಡಹುಟ್ಟಿದ ತಂಗಿಯೆಂದು
ಅನ್ನವಿಟ್ಟು ಆದರಿಸಿದೆ,
ನಿನ್ನ ಉನ್ನತಿಯ ಬಯಸಿದೆ,
ನಿಯತ್ತಿನಿಂದ ಶ್ರಮಿಸಿದೆ,
ಮನಸಾರ ಹರಸಿದೆ.
ನನ್ನ ಸೇವಕರಾದ
ಕಲಾವಿದರನ್ನೂ, ತಂತ್ರಜ್ಞರನ್ನೂ
ನಿನ್ನ ಸೇವೆಗೆ ನೇಮಿಸಿದೆ.
ನನ್ನ ಆರಾಧಕನನ್ನೇ
ನಿನ್ನನಾಧರಿಸಲು ಬೇಡಿದೆ.
ನನ್ನ ಬೆಡಗು ಬಿನ್ನಾಣಗಳನ್ನೂ
ಮನರಂಜಿಪ ಕಾರ್ಯಕ್ರಮಗಳನ್ನೂ
ನನಗೂ ಕೊಟ್ಟೆ – ನಿನ್ನ
ಉನ್ನತಿಯ ಬಯಸಿದೆ.
ಮನಸಾರ ಹರಸಿದೆ.
ಆದರೆ ಎಂತಹ ಘೋರ ಫಲಿತಾಂಶ!
ನನ್ನ ಪತಿ “ಶೋತೃ” ಮೈ ಮರೆತ
ನಿನ್ನ ರೂಪ ಲಾವಣ್ಯದಲಿ!
ಮರುಳಾದ ನಿನ್ನ ಒನಪು, ವೈಯಾರಕ್ಕೆ
ನನ್ನ ಮರೆಯುತ, ನಿನ್ನೆಡೆಗೆ
ಬಹು ಬೇಗ ಸರಿದ… ನನ್ನಿನಿಯ
“ಶೋತೃ ಬಾಂಧವ” ನಿನ್ನ
“ಪ್ರಿಯ ವೀಕ್ಷಕ”ನಾದ!
ನನ್ನ ಹಿರಿಮೆ, ಆಕರ್ಷಣೆ
ಬರುಬರುತ್ತಾ ಕಡಿಮೆಯಾಗಿ,
ನವ ಯುವತಿ ನೀನಾದೆ
“ದೂರದರ್ಶನ” ರಾಣಿ!
ಗರತಿ ನಾ ಮೂಲೆಗುಂಪಾದೆ
ನಿನ್ನ ನತದೃಷ್ಟ ಹಿರಿಯಕ್ಕ
“ಆಕಾಶವಾಣಿ”!
*****
೧೪-೦೬-೧೯೮೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸತ್ಯ: ಸರಳತೆ ಮತ್ತು ಸಂಕೀರ್ಣತೆಯ ನಡುವೆ
Next post ಕಳಕಳಿ

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…