ಸಾವು

ಪ್ರಾಣ ಇದ್ದವು
ಅದನ್ನು
ಕಳೆದುಕೊಂಡಾಗ
ಸಂಭವಿಸುವುದು
ಸಾವು.
ಸೂಕ್ಷ್ಮಾತಿ ಸೂಕ್ಷ್ಮಜೀವಿ,
ಜಲಚರ, ಪಶು, ಪಕ್ಷಿ
ಸಕಲ ಸಸ್ಯ, ವೃಕ್ಷ
ದೈತ್ಯ ಕಾಯ ಎಲ್ಲಕೂ
ನಿಶ್ಚಿತ.. ಸಾವು.
‘ಜಾತಸ್ಯ ಮರಣಂ ಧೃವಂ’.

ಮಾನವನ ಮಾತೇ ಬೇರೆ.
ಅವನ ಅಂತ್ಯಕ್ಕೆ
ಬರಬೇಕಿಲ್ಲ ಮರಣ.
ಸ್ವಲ್ಪವೂ ಇಲ್ಲದಾಗ ಹಣ
ಆಸ್ತಿಪಾಸ್ತಿಯ ಜೊತೆಗೆ
ಮಾನ ಮರ್ಯಾದೆ
ಎಲ್ಲವೂ ಹರಾಜಾದಾಗ
ಸುಖದ ಸೌಧ ಕುಸಿದಾಗ
ಬಂತವನ ‘ಆರ್ಥಿಕ ಮರಣ’.
ಅವನಾಗ ಸಜೀವ ಶವ!

ಮಾನ ಉಳ್ಳವ ‘ಮಾನವ’
ಹೋದರವನ ಮಾನ
ಬಂತವನ ಮರಣ.

ಪರಸ್ಪರ ದ್ವೇಷ-ಅಸೂಯೆ
ಶೀತಲ ಯುದ್ಧ,
ಹೊಲಸು ರಾಜಕೀಯ –
ವಿಷ ವರ್ತುಲದಲ್ಲಿ
ಸಿಲುಕಿ, ತೇಜೋವಧೆ
ಗೊಂಡವನ ಸ್ಥಿತಿ
“ಬೌದ್ಧಿಕ ಮರಣ”.
ತಲೆ ಕೆಟ್ಟು, ಕಳೆದು
ಚಿತ್ತ ಸ್ವಾಸ್ಥ್ಯ
ಹುಚ್ಚು ಹಿಡಿದು
ನಗ್ನನಾಗಿ ಸುತ್ತಿ ಅಲೆದು
ಯಾರಿಗೂ ಬೇಡವಾಗಿ
ಅರ್ಥವಿಲ್ಲದ ರಾಶಿ ಕಸ ಹೊತ್ತು
ಕಿರುಚಿ, ಕುಣಿದು, ನಕ್ಕು, ಅತ್ತು
ರಸ್ತೆಯ ಮೇಲೆ ಬಿದ್ದು
ಹೊರಳಿ, ಹೊರಳಿ, ಸಾಯಲಾರದೆ
ಕರ್ಮ ಕಳೆಯಲಾಗದೆ
ಕ್ರಿಮಿಯ ಬಾಳು ನಡೆಸಿ
‘ಜೀವನ್ಮರಣ’ ಪಡೆದವಗೆ
ಸಾವು…ಮೋಕ್ಷ.
ಸತ್ತು ಬದುಕಿದ!
*****
೧೪-೦೬-೧೯೯೨

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿಗಳ ಕವಿ ಎಜ್ರಾ ಪೌಂಡ್
Next post ದೀಪ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ರಾಜಕೀಯ ಮುಖಂಡರು

    ಪ್ರಕರಣ ೧೦ ಆವಲಹಳ್ಳಿಯಲ್ಲಿ ನಡೆದ ಉಪಾಧ್ಯಾಯರ ಸಂಘದ ಸಭೆ ರೇಂಜಿನಲ್ಲೆಲ್ಲ ದೊಡ್ಡ ಜಾಗಟೆಯನ್ನು ಬಾರಿಸಿದಂತಾಯಿತು. ಅದರ ಕಾರ್ಯಕಲಾಪಗಳು, ಔತಣದ ವೈಖರಿ, ಇನ್ಸ್ಪೆಕ್ಟರು ಸಲಿಗೆಯಿಂದ ಉಪಾಧ್ಯಾಯರೊಡನೆ ಮಿಳಿತರಾಗಿ ಅವರ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…