Home / ಕವನ / ಕವಿತೆ / ಸಾವು

ಸಾವು

ಪ್ರಾಣ ಇದ್ದವು
ಅದನ್ನು
ಕಳೆದುಕೊಂಡಾಗ
ಸಂಭವಿಸುವುದು
ಸಾವು.
ಸೂಕ್ಷ್ಮಾತಿ ಸೂಕ್ಷ್ಮಜೀವಿ,
ಜಲಚರ, ಪಶು, ಪಕ್ಷಿ
ಸಕಲ ಸಸ್ಯ, ವೃಕ್ಷ
ದೈತ್ಯ ಕಾಯ ಎಲ್ಲಕೂ
ನಿಶ್ಚಿತ.. ಸಾವು.
‘ಜಾತಸ್ಯ ಮರಣಂ ಧೃವಂ’.

ಮಾನವನ ಮಾತೇ ಬೇರೆ.
ಅವನ ಅಂತ್ಯಕ್ಕೆ
ಬರಬೇಕಿಲ್ಲ ಮರಣ.
ಸ್ವಲ್ಪವೂ ಇಲ್ಲದಾಗ ಹಣ
ಆಸ್ತಿಪಾಸ್ತಿಯ ಜೊತೆಗೆ
ಮಾನ ಮರ್ಯಾದೆ
ಎಲ್ಲವೂ ಹರಾಜಾದಾಗ
ಸುಖದ ಸೌಧ ಕುಸಿದಾಗ
ಬಂತವನ ‘ಆರ್ಥಿಕ ಮರಣ’.
ಅವನಾಗ ಸಜೀವ ಶವ!

ಮಾನ ಉಳ್ಳವ ‘ಮಾನವ’
ಹೋದರವನ ಮಾನ
ಬಂತವನ ಮರಣ.

ಪರಸ್ಪರ ದ್ವೇಷ-ಅಸೂಯೆ
ಶೀತಲ ಯುದ್ಧ,
ಹೊಲಸು ರಾಜಕೀಯ –
ವಿಷ ವರ್ತುಲದಲ್ಲಿ
ಸಿಲುಕಿ, ತೇಜೋವಧೆ
ಗೊಂಡವನ ಸ್ಥಿತಿ
“ಬೌದ್ಧಿಕ ಮರಣ”.
ತಲೆ ಕೆಟ್ಟು, ಕಳೆದು
ಚಿತ್ತ ಸ್ವಾಸ್ಥ್ಯ
ಹುಚ್ಚು ಹಿಡಿದು
ನಗ್ನನಾಗಿ ಸುತ್ತಿ ಅಲೆದು
ಯಾರಿಗೂ ಬೇಡವಾಗಿ
ಅರ್ಥವಿಲ್ಲದ ರಾಶಿ ಕಸ ಹೊತ್ತು
ಕಿರುಚಿ, ಕುಣಿದು, ನಕ್ಕು, ಅತ್ತು
ರಸ್ತೆಯ ಮೇಲೆ ಬಿದ್ದು
ಹೊರಳಿ, ಹೊರಳಿ, ಸಾಯಲಾರದೆ
ಕರ್ಮ ಕಳೆಯಲಾಗದೆ
ಕ್ರಿಮಿಯ ಬಾಳು ನಡೆಸಿ
‘ಜೀವನ್ಮರಣ’ ಪಡೆದವಗೆ
ಸಾವು…ಮೋಕ್ಷ.
ಸತ್ತು ಬದುಕಿದ!
*****
೧೪-೦೬-೧೯೯೨

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...