Home / ಕವನ / ಕವಿತೆ / ಸಾವು

ಸಾವು

ಪ್ರಾಣ ಇದ್ದವು
ಅದನ್ನು
ಕಳೆದುಕೊಂಡಾಗ
ಸಂಭವಿಸುವುದು
ಸಾವು.
ಸೂಕ್ಷ್ಮಾತಿ ಸೂಕ್ಷ್ಮಜೀವಿ,
ಜಲಚರ, ಪಶು, ಪಕ್ಷಿ
ಸಕಲ ಸಸ್ಯ, ವೃಕ್ಷ
ದೈತ್ಯ ಕಾಯ ಎಲ್ಲಕೂ
ನಿಶ್ಚಿತ.. ಸಾವು.
‘ಜಾತಸ್ಯ ಮರಣಂ ಧೃವಂ’.

ಮಾನವನ ಮಾತೇ ಬೇರೆ.
ಅವನ ಅಂತ್ಯಕ್ಕೆ
ಬರಬೇಕಿಲ್ಲ ಮರಣ.
ಸ್ವಲ್ಪವೂ ಇಲ್ಲದಾಗ ಹಣ
ಆಸ್ತಿಪಾಸ್ತಿಯ ಜೊತೆಗೆ
ಮಾನ ಮರ್ಯಾದೆ
ಎಲ್ಲವೂ ಹರಾಜಾದಾಗ
ಸುಖದ ಸೌಧ ಕುಸಿದಾಗ
ಬಂತವನ ‘ಆರ್ಥಿಕ ಮರಣ’.
ಅವನಾಗ ಸಜೀವ ಶವ!

ಮಾನ ಉಳ್ಳವ ‘ಮಾನವ’
ಹೋದರವನ ಮಾನ
ಬಂತವನ ಮರಣ.

ಪರಸ್ಪರ ದ್ವೇಷ-ಅಸೂಯೆ
ಶೀತಲ ಯುದ್ಧ,
ಹೊಲಸು ರಾಜಕೀಯ –
ವಿಷ ವರ್ತುಲದಲ್ಲಿ
ಸಿಲುಕಿ, ತೇಜೋವಧೆ
ಗೊಂಡವನ ಸ್ಥಿತಿ
“ಬೌದ್ಧಿಕ ಮರಣ”.
ತಲೆ ಕೆಟ್ಟು, ಕಳೆದು
ಚಿತ್ತ ಸ್ವಾಸ್ಥ್ಯ
ಹುಚ್ಚು ಹಿಡಿದು
ನಗ್ನನಾಗಿ ಸುತ್ತಿ ಅಲೆದು
ಯಾರಿಗೂ ಬೇಡವಾಗಿ
ಅರ್ಥವಿಲ್ಲದ ರಾಶಿ ಕಸ ಹೊತ್ತು
ಕಿರುಚಿ, ಕುಣಿದು, ನಕ್ಕು, ಅತ್ತು
ರಸ್ತೆಯ ಮೇಲೆ ಬಿದ್ದು
ಹೊರಳಿ, ಹೊರಳಿ, ಸಾಯಲಾರದೆ
ಕರ್ಮ ಕಳೆಯಲಾಗದೆ
ಕ್ರಿಮಿಯ ಬಾಳು ನಡೆಸಿ
‘ಜೀವನ್ಮರಣ’ ಪಡೆದವಗೆ
ಸಾವು…ಮೋಕ್ಷ.
ಸತ್ತು ಬದುಕಿದ!
*****
೧೪-೦೬-೧೯೯೨

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...