ತಲೆ ಇಲ್ಲದವರು

ರಾಮನಾಳಿದರೇನು?
ರಾವಣನೇ ಆಳಿದರೇನು?
ನಮ್ಮ ಕಷ್ಟ ಹರಿಯಲಿಲ್ಲ
ಭ್ರಷ್ಟಾಚಾರ ಹೋಗಲಿಲ್ಲ
ಬೆಲೆ ಏರಿಕೆ ನಿಲ್ಲಲ್ಲ.
“ಖದೀಮರ ಕೊನೆಯ ತಾಣ
ರಾಜಕೀಯ” ಎಂದು
ತಿಳಿದೂ… ತಿಳಿದೂ…
ಪುಢಾರಿಗಳನ್ನು ನಂಬುವ
ನಾವು… ತಲೆ ಇಲ್ಲದವರು.

ಸತ್ಯ ಹೇಳಿದರೆ ನಂಬುವವರಾರು?
“ಸತ್ಯ ಹೇಳಿದರೆ ಸುಡುಗಾಡೇ ಗತಿ”,
“ಗೆದ್ದವ ಸೋತ, ಸೋತವ ಸತ್ತ”
ಎಂದೆಲ್ಲ ತಿಳಿದಿದ್ದರೂ,
ಛಲದಿಂದ ಧುಮುಕುವ
ನಾವು…. ತಲೆ ಇಲ್ಲದವರು.

ಮಳೆಯಲ್ಲಿ ಬಸ್ಸಿಗಾಗಿ ಕಾಯುತ್ತಾ
ನಿಂತವಳಿಗೆ ಡ್ರಾಪ್ ಕೊಡಲು ಬಂದ
ಸಹೋದ್ಯೋಗಿಯ ತಿರಸ್ಕರಿಸಿ
“ಆಟೋದಲ್ಲೇ ಹೋಗುವೆ” ಎಂದ
ಮುಖ ತಿರುವಿದ, ಪತಿವ್ರತೆ (?)
ಆಟೋದವನಿಂದ ರೇಪಾದ
ಸುದ್ದಿ ಕೇಳಿದಾಗ! ಗಾಬರಿ…
ಅಯ್ಯೋ ಪಾಪ… ಎನಿಸಿದರೂ…
“ಕುರಿ ನಂಬುವುದೇ ಕುರುಬನನ್ನು”
ಎಂದು ತಿಳಿದೂ, ಇಂತಹವರಿಗೆ
ಸಹಾಯ ಮಾಡಲು ಹೋಗುವ
ನಾವು… ತಲೆ ಇಲ್ಲದವರು.
*****
೧೮-೦೮-೧೯೮೭

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವ ಕರುಣಿಸು
Next post ನಾಯಿ ಬಾಯಿಗೆ ಚಿಂದಿಯಾದ ಪೈಜಾಮ…!

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…