ತಲೆ ಇಲ್ಲದವರು

ರಾಮನಾಳಿದರೇನು?
ರಾವಣನೇ ಆಳಿದರೇನು?
ನಮ್ಮ ಕಷ್ಟ ಹರಿಯಲಿಲ್ಲ
ಭ್ರಷ್ಟಾಚಾರ ಹೋಗಲಿಲ್ಲ
ಬೆಲೆ ಏರಿಕೆ ನಿಲ್ಲಲ್ಲ.
“ಖದೀಮರ ಕೊನೆಯ ತಾಣ
ರಾಜಕೀಯ” ಎಂದು
ತಿಳಿದೂ… ತಿಳಿದೂ…
ಪುಢಾರಿಗಳನ್ನು ನಂಬುವ
ನಾವು… ತಲೆ ಇಲ್ಲದವರು.

ಸತ್ಯ ಹೇಳಿದರೆ ನಂಬುವವರಾರು?
“ಸತ್ಯ ಹೇಳಿದರೆ ಸುಡುಗಾಡೇ ಗತಿ”,
“ಗೆದ್ದವ ಸೋತ, ಸೋತವ ಸತ್ತ”
ಎಂದೆಲ್ಲ ತಿಳಿದಿದ್ದರೂ,
ಛಲದಿಂದ ಧುಮುಕುವ
ನಾವು…. ತಲೆ ಇಲ್ಲದವರು.

ಮಳೆಯಲ್ಲಿ ಬಸ್ಸಿಗಾಗಿ ಕಾಯುತ್ತಾ
ನಿಂತವಳಿಗೆ ಡ್ರಾಪ್ ಕೊಡಲು ಬಂದ
ಸಹೋದ್ಯೋಗಿಯ ತಿರಸ್ಕರಿಸಿ
“ಆಟೋದಲ್ಲೇ ಹೋಗುವೆ” ಎಂದ
ಮುಖ ತಿರುವಿದ, ಪತಿವ್ರತೆ (?)
ಆಟೋದವನಿಂದ ರೇಪಾದ
ಸುದ್ದಿ ಕೇಳಿದಾಗ! ಗಾಬರಿ…
ಅಯ್ಯೋ ಪಾಪ… ಎನಿಸಿದರೂ…
“ಕುರಿ ನಂಬುವುದೇ ಕುರುಬನನ್ನು”
ಎಂದು ತಿಳಿದೂ, ಇಂತಹವರಿಗೆ
ಸಹಾಯ ಮಾಡಲು ಹೋಗುವ
ನಾವು… ತಲೆ ಇಲ್ಲದವರು.
*****
೧೮-೦೮-೧೯೮೭

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವ ಕರುಣಿಸು
Next post ನಾಯಿ ಬಾಯಿಗೆ ಚಿಂದಿಯಾದ ಪೈಜಾಮ…!

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…