ತಲೆ ಇಲ್ಲದವರು

ರಾಮನಾಳಿದರೇನು?
ರಾವಣನೇ ಆಳಿದರೇನು?
ನಮ್ಮ ಕಷ್ಟ ಹರಿಯಲಿಲ್ಲ
ಭ್ರಷ್ಟಾಚಾರ ಹೋಗಲಿಲ್ಲ
ಬೆಲೆ ಏರಿಕೆ ನಿಲ್ಲಲ್ಲ.
“ಖದೀಮರ ಕೊನೆಯ ತಾಣ
ರಾಜಕೀಯ” ಎಂದು
ತಿಳಿದೂ… ತಿಳಿದೂ…
ಪುಢಾರಿಗಳನ್ನು ನಂಬುವ
ನಾವು… ತಲೆ ಇಲ್ಲದವರು.

ಸತ್ಯ ಹೇಳಿದರೆ ನಂಬುವವರಾರು?
“ಸತ್ಯ ಹೇಳಿದರೆ ಸುಡುಗಾಡೇ ಗತಿ”,
“ಗೆದ್ದವ ಸೋತ, ಸೋತವ ಸತ್ತ”
ಎಂದೆಲ್ಲ ತಿಳಿದಿದ್ದರೂ,
ಛಲದಿಂದ ಧುಮುಕುವ
ನಾವು…. ತಲೆ ಇಲ್ಲದವರು.

ಮಳೆಯಲ್ಲಿ ಬಸ್ಸಿಗಾಗಿ ಕಾಯುತ್ತಾ
ನಿಂತವಳಿಗೆ ಡ್ರಾಪ್ ಕೊಡಲು ಬಂದ
ಸಹೋದ್ಯೋಗಿಯ ತಿರಸ್ಕರಿಸಿ
“ಆಟೋದಲ್ಲೇ ಹೋಗುವೆ” ಎಂದ
ಮುಖ ತಿರುವಿದ, ಪತಿವ್ರತೆ (?)
ಆಟೋದವನಿಂದ ರೇಪಾದ
ಸುದ್ದಿ ಕೇಳಿದಾಗ! ಗಾಬರಿ…
ಅಯ್ಯೋ ಪಾಪ… ಎನಿಸಿದರೂ…
“ಕುರಿ ನಂಬುವುದೇ ಕುರುಬನನ್ನು”
ಎಂದು ತಿಳಿದೂ, ಇಂತಹವರಿಗೆ
ಸಹಾಯ ಮಾಡಲು ಹೋಗುವ
ನಾವು… ತಲೆ ಇಲ್ಲದವರು.
*****
೧೮-೦೮-೧೯೮೭

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವ ಕರುಣಿಸು
Next post ನಾಯಿ ಬಾಯಿಗೆ ಚಿಂದಿಯಾದ ಪೈಜಾಮ…!

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

cheap jordans|wholesale air max|wholesale jordans|wholesale jewelry|wholesale jerseys