ತಲೆ ಇಲ್ಲದವರು

ರಾಮನಾಳಿದರೇನು?
ರಾವಣನೇ ಆಳಿದರೇನು?
ನಮ್ಮ ಕಷ್ಟ ಹರಿಯಲಿಲ್ಲ
ಭ್ರಷ್ಟಾಚಾರ ಹೋಗಲಿಲ್ಲ
ಬೆಲೆ ಏರಿಕೆ ನಿಲ್ಲಲ್ಲ.
“ಖದೀಮರ ಕೊನೆಯ ತಾಣ
ರಾಜಕೀಯ” ಎಂದು
ತಿಳಿದೂ… ತಿಳಿದೂ…
ಪುಢಾರಿಗಳನ್ನು ನಂಬುವ
ನಾವು… ತಲೆ ಇಲ್ಲದವರು.

ಸತ್ಯ ಹೇಳಿದರೆ ನಂಬುವವರಾರು?
“ಸತ್ಯ ಹೇಳಿದರೆ ಸುಡುಗಾಡೇ ಗತಿ”,
“ಗೆದ್ದವ ಸೋತ, ಸೋತವ ಸತ್ತ”
ಎಂದೆಲ್ಲ ತಿಳಿದಿದ್ದರೂ,
ಛಲದಿಂದ ಧುಮುಕುವ
ನಾವು…. ತಲೆ ಇಲ್ಲದವರು.

ಮಳೆಯಲ್ಲಿ ಬಸ್ಸಿಗಾಗಿ ಕಾಯುತ್ತಾ
ನಿಂತವಳಿಗೆ ಡ್ರಾಪ್ ಕೊಡಲು ಬಂದ
ಸಹೋದ್ಯೋಗಿಯ ತಿರಸ್ಕರಿಸಿ
“ಆಟೋದಲ್ಲೇ ಹೋಗುವೆ” ಎಂದ
ಮುಖ ತಿರುವಿದ, ಪತಿವ್ರತೆ (?)
ಆಟೋದವನಿಂದ ರೇಪಾದ
ಸುದ್ದಿ ಕೇಳಿದಾಗ! ಗಾಬರಿ…
ಅಯ್ಯೋ ಪಾಪ… ಎನಿಸಿದರೂ…
“ಕುರಿ ನಂಬುವುದೇ ಕುರುಬನನ್ನು”
ಎಂದು ತಿಳಿದೂ, ಇಂತಹವರಿಗೆ
ಸಹಾಯ ಮಾಡಲು ಹೋಗುವ
ನಾವು… ತಲೆ ಇಲ್ಲದವರು.
*****
೧೮-೦೮-೧೯೮೭

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವ ಕರುಣಿಸು
Next post ನಾಯಿ ಬಾಯಿಗೆ ಚಿಂದಿಯಾದ ಪೈಜಾಮ…!

ಸಣ್ಣ ಕತೆ

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…