ಹೆಣ್ಣು ಜೀವ

ಸೋನೆ ಮಳೆಯ ಸಂಜೆ…
ಒಲೆಯ ಮೇಲೆ ಚಹಾ ಕುದಿಯುತ್ತಾ ಇತ್ತು
ದೀಪ ಹಚ್ಚಿ, ಧೂಪ ಹಾಕಿ, ದೇವರನ್ನು ಬೆಚ್ಚಗಾಗಿಸಿ
ಸ್ವೆಟರ್ ಏರಿಸಿ ಹಾಳೂರು..
ಎಂದು ಇಲ್ಲದ ಕರೆಂಟಿಗೆ ಬಾಯ್ತುಂಬ ಬಯ್ದು
ದೀಪ ಧಾರಿಣಿಯಾದೆ,
ಗಾಳಿ ಬಾಗಿಲ ತಳ್ಳಿತು

ಎದುರಲ್ಲಿ ತೊಯ್ದು ತೊಪ್ಪೆಯಾಗಿ ನಿಂತಿತ್ತು ಹೆಣ್ಣು ಜೀವ
ಆತುಕೊಂಡಿದ್ದ ಎಳೆಯ ಕಂದಮ್ಮಗಳ ಜೋಡಿ
ಹಾಕಿದವು ಮೋಡಿ, ತುಸುವೆ ಮೆದುವಾಯಿತು ಭಾವ
ಕೇಳದೆಯೇ ಹೇಳದೆಯೇ
ಎಲ್ಲವೂ ಅರ್ಥವಾದಂತೆ, ಭಾಷೆಯ ಹಂಗಿಲ್ಲದೆ
ನೇರ ಹೃದಯವನೆ ಮುಟ್ಟಿದಂತೆ.

ಏನೂ ಮಾಡಲು ತೋಚದೆ…
ಆರಿ ಹೋಗಲಿದ್ದ ದೀಪಕ್ಕೆ ಅಡ್ಡ ಕೈ ಹಿಡಿದು
ಒಳಗೆ ಬಂದೆ, ಹೊರಗೆ ಹೋದೆ…
ದೀಪ ಹೊಯ್ದಾಡುತ್ತಾ ಇತ್ತು
ತೀರಿಕೊಂಡ ಅಜ್ಜಿ, ದೊಡ್ಡವ್ವ, ಶಕ್ಕು….
ಯಾರೆಲ್ಲ ನಿಂತಂತಾಗಿ ಕಣ್ಣೆದುರು –
ಜಗುಲಿಯ ಮೂಲೆಗೆ ಗೋಣಿ ಹಾಸಿ
ಬಟ್ಟಲಿಗೆ ಬಿಸಿ ಹಾಲು ಅನ್ನ ಸುರಿದು
ಬಾಗಿಲು ಮುಚ್ಚಿ ಕಿಟಕಿ ತರೆದೆ
ಇದೀಗ-
ಕಂದಮ್ಮಗಳು ಸಮರೋಪಾದಿಯಲ್ಲಿ
ಅಮ್ಮನ ಮೊಲೆಗೆ ಬಾಯಿಟ್ಟು
ಹಾಲು ಹೀರುತ್ತಿದ್ದವು
ತಾಯಿ ಬೆಚ್ಚಗೆ ಕಣ್ಮುಚ್ಚಿ ಮಲಗಿತ್ತು
ವಾಸನೆ ಹಿಡಿದು ತುಸುವೆ ಬಾಲ ಅಲ್ಲಾಡಿಸಿ

ನನ್ನ ಗುರುತಿಸಿತು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭ್ರಮಣ – ೧೧
Next post ಕೆನ್ನೆ

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಕನಸು ದಿಟವಾಯಿತು

    ಪ್ರಕರಣ ೨ ಸೂರ್ಯೋದಯವಾಯಿತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ಮಾಡುತ್ತಾ ರಂಗಣ್ಣನು ಹೆಂಡತಿಗೆ ಕನಸಿನ ಸಮಾಚಾರವನ್ನು ತಿಳಿಸಿದನು. ಆಕೆ- ಸರಿ, ಇನ್ನು ಈ ಹುಚ್ಚೊಂದು ನಿಮಗೆ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…