ಶ್ರೇಷ್ಠ ಕನಿಷ್ಠ ಪ್ರಶ್ನೆಯೇ… ಅಸಂಗತ

ಕ್ಯಾತೆ ತೆಗೆದಿತ್ತು
ಜೀವನ ಸಾವ ಜೊತೆಗೆ
ಶ್ರೇಷ್ಠರಾರು ? ಪ್ರಶ್ನೆಯೆತ್ತಿಕೊಂಡು
ತುಸು ಗಂಭೀರವಾಗಿಯೇ !

ಜೀವನ, ನಾನು ಮೊದಲು !
ಜೀವ-ಜೀವಕ್ಕೆ, ಜಡ-ಜಡಕ್ಕೆ, ಕಾಲ-ಕಾಲಕ್ಕೆ
ಭಿನ್ನ! ಭಿನ್ನ! ರಂಗು! ರಂಗು!
ಬೆಳಕು; ಸಂತಸ.

ಕರುಣಿಸುವೆನು
ಅಂಗಳದಿ ಸೋಲು, ಗೆಲುವು, ಸಮಾಧಾನ;
ತಮ್ಮ, ತಮ್ಮ ಗುಣಾವಗುಣ,
ಅಭಿರುಚಿ, ಅನುಕೂಲ, ಶಕ್ತಿ, ದೌರ್ಬಲ್ಯಗಳಿಗೆ ತಕ್ಕಂತೆ.

ತುಡಿಸುವೆನು
ನನ್ನ ಪಂದ್ಯದಲಿರಲು
ಎಲ್ಲವನು ಎಲ್ಲರನು ಸದಾ!
ಜೀವಂತಿಕೆಯೇ ನನ್ನ ಹೂರಣ.

ಮಾಡುವೆನು ಅದಲು, ಬದಲು
ನಿಧಾನವಾಗಿ, ವೇಗವಾಗಿ, ಬೇಕಾದ ಹಾಗೆ!
ನೆಚ್ಚದಂತೆ.
ನಿಲ್ಲಿಸೆನು ಯಾವುದನೂ ಒಂದೇ ಸ್ತರದಲಿ
ಕೆಲ, ಕೆಲವರನು ಬಿಟ್ಟು,

ನಾನು ವಿಕ್ಷಿಪ್ತನಲ್ಲ!
ಹುಟ್ಟಿ ಬರುವ ಎಲ್ಲಕ್ಕೂ ಎಲ್ಲರಿಗೂ ಸಲ್ಲುವೆನು
ನನ್ನಲ್ಲಿ ಅರಳಿ ಬೆಳೆದವರು ಸಾವ ಗೆಲುವರು
ಉಳಿಯುವರು; ಬೆಳಗುವರು
ಚರಿತ್ರೆಯಲಿ ಚಿರಕಾಲ.

ನಾನು ಸಾವು,
ಭಯ! ನೋವು! ಕತ್ತಲು! ಮೌನ!
ಸತ್ಯ! ಸಾರ್ವತ್ರಿಕ! ಬಿಡುಗಡೆ!!

ನನಗೆ ಸ್ವಾಗತವಿಲ್ಲ; ಆರಾಧನೆಯಿಲ್ಲ
ಯಾರೂ… ತಾವೇ ಬಂದು ಬೀಳರು
ನನ್ನ ಮಡಿಲಿಗೆ
ಬಹಳ ಬದುಕಲರಿಯದವರು; ಧೀರರು ವಿನಃ.

ಶರಣು!
ಸತ್ತು ಬದುಕುವ ಗೆದ್ದವರಿಗೆ
ನಾನು, ಈಗ… ಆಗ… ಯಾವಾಗ ಬೇಕಾದರೂ…
ಯಾವರೂಪದಲ್ಲಾದರೂ…
ಬಂದೆರಗಬಹುದು; ಮುಗಿಸಬಹುದು.
ಸತ್ಯವಿದನು ತಿಳಿದೂ… ತಿಳಿದೂ
ಏನು ನಿಲ್ಲಿಸದೆ ಎಲ್ಲವನು ಮಾಮೂಲಾಗಿ
ಮುಂದುವರಿಸುವ
ಜೀವ ವಿಶೇಷರಿಗೆ.

ಹುಟ್ಹುಟ್ಟಿ ಬರುವ
ಜೀವದಲೆ ಎಲೆಗಳು ಬಾಳಿ
ಹಣ್ಣಾಗಿ ಉದುರಬೇಕು
ಚಿಗುರಾಗಿ ಮೂಡಬೇಕು; ಬೆಳೆಯಬೇಕು
ಬಾಳೆಂಬ ತೇರು ತರು ಹೊಸ ಹೊಸದಾಗಿ
ಸಿಂಗಾರಗೊಳಬೇಕು
ಅರ್ಥಪೂರ್ಣವಾಗಬೇಕು.

ಇದು ನ್ಯಾಯ! ಸರ್ವ ಸಮ್ಮತ !
ಜಗದಲಿ ಶ್ರೇಷ್ಠ, ಕನಿಷ್ಠ ಪ್ರಶ್ನೆಯೇ ಅಸಂಗತ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚೆಲುವಿನ ನಾಡು ಕರುನಾಡು
Next post ಮುತ್ತಿಗೆ

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…