Home / ಕವನ / ಕವಿತೆ / ಸೂಚನೆಯ ಪತ್ರ

ಸೂಚನೆಯ ಪತ್ರ

ಮರ, ನಮ್ಮ ಕೈಮರ
ನಾಗರೀಕರ ಅಗತ್ಯದ ಕುರುಹಾಗಿ
ಹಸಿರು ಛಿಂದಿಯನುಟ್ಟ ಗುಡ್ಡದ ಸನಿಹ
ಹತ್ತಾರು ಮೀಟರು ಅಂತರದಿ
ತೇರಂತೆ ಎತ್ತರಕ್ಕೆ ಬೆಳೆದು ರಾರಾಜಿಸುತ್ತಿತ್ತು.

ನಾವು, ಒತ್ತರಿಕೆ ಗುಣದವರು
ಎಬ್ಬಿಸಿದ ಸಾಲು, ಸಾಲು ಕಾಂಕ್ರೀಟು
ಬೆಟ್ಟ ಗುಡ್ಡಗಳಂತ ಕಟ್ಟಡಗಳು
ರಸ್ತೆ, ಆವರಣ, ತರ ತರ ಕಾಮಗಾರಿಗಳು
ತಂದಿರಲಿಲ್ಲ ಧಕ್ಕೆ, ಸಧ್ಯ !
ಅದರ ಅಸ್ತಿತ್ವಕ್ಕೆ.

ನೆಲೆ ತಪ್ಪಿ ಕಂಗೆಟ್ಟ
ಹದ್ದು, ಹಕ್ಕಿ, ಕ್ರಿಮಿ ಕೀಟಗಳಿಗೆ
ಹಸಿರು ಪ್ರಿಯರಿಗೆ
ಬತ್ತದ ಸಿಹಿ ನೀರ ಪುಟ್ಟ ಬುಗ್ಗೆಯಂತೆ ತೋರುಗಾಣುತ್ತಿತ್ತು.

ಬಾಹ್ಯದಿ ನಗು ನಗುತ್ತಿತ್ತು
ಅಂತರಾಳದಿ ಹಲ್ಲುಕಚ್ಚಿ ಹೋರಾಟ ನಡೆಸಿತ್ತು
ಜೀವ ಸೆಲೆಗಾಗಿ;
ಮುಂದೆ, ಜೀವ ಜಂತುಗಳ ನಡುವೆ ಸಂಭವಿಸುವ
ಸಮರ ಸಂದರ್ಭವ ಸಾಕ್ಷೀಕರಿಸಿ.

ಫಲಿಸಲಿಲ್ಲ.
ಅಕಾಲದಲಿ ಮುಪ್ಪಡರಿ
ಎಲೆಗಳು ಉದುರಿವೆ;
ಟಿಸಿಲು, ಟಿಸಿಲು ಒಣಗಿ ಮುರಿದು ಬೀಳುತಿವೆ
ಗೆದ್ದಲು ಮುಗಿ ಬಿದ್ದಿವೆ
ಚೆಕ್ಕೆ ತೊಗಲು ಸುಲಿಯುತಿದೆ
ಜೀವ ಜಗದ ಮುಂಬರುವ
ಕರಾಳ ದಿನಗಳ ತೋರು ಬೆರಳಾಗಿ.

ನಿಗೂಢವೆಂದರೆ
ತೆರವುಗೊಳಿಸಿಲ್ಲ
ಹದ್ಹೊಂದು ತನ್ನ ಗೂಡ
ಇಂದಿಗೂ ನಡೆಸಿದೆ ಬಾಳು ಅದರ ಸಂಗಡ
ಪ್ರೇಮಕ್ಕೋ.. ವಿಧಿಯಿಲ್ಲದಕ್ಕೋ.. ಭಂಡತನಕ್ಕೋ…
ಬರೆಯುತ್ತ ವಿನಾಶ ಸೂಚನೆಯ ಪತ್ರ!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...