Home / ಕವನ / ಕವಿತೆ / ಸೂಚನೆಯ ಪತ್ರ

ಸೂಚನೆಯ ಪತ್ರ

ಮರ, ನಮ್ಮ ಕೈಮರ
ನಾಗರೀಕರ ಅಗತ್ಯದ ಕುರುಹಾಗಿ
ಹಸಿರು ಛಿಂದಿಯನುಟ್ಟ ಗುಡ್ಡದ ಸನಿಹ
ಹತ್ತಾರು ಮೀಟರು ಅಂತರದಿ
ತೇರಂತೆ ಎತ್ತರಕ್ಕೆ ಬೆಳೆದು ರಾರಾಜಿಸುತ್ತಿತ್ತು.

ನಾವು, ಒತ್ತರಿಕೆ ಗುಣದವರು
ಎಬ್ಬಿಸಿದ ಸಾಲು, ಸಾಲು ಕಾಂಕ್ರೀಟು
ಬೆಟ್ಟ ಗುಡ್ಡಗಳಂತ ಕಟ್ಟಡಗಳು
ರಸ್ತೆ, ಆವರಣ, ತರ ತರ ಕಾಮಗಾರಿಗಳು
ತಂದಿರಲಿಲ್ಲ ಧಕ್ಕೆ, ಸಧ್ಯ !
ಅದರ ಅಸ್ತಿತ್ವಕ್ಕೆ.

ನೆಲೆ ತಪ್ಪಿ ಕಂಗೆಟ್ಟ
ಹದ್ದು, ಹಕ್ಕಿ, ಕ್ರಿಮಿ ಕೀಟಗಳಿಗೆ
ಹಸಿರು ಪ್ರಿಯರಿಗೆ
ಬತ್ತದ ಸಿಹಿ ನೀರ ಪುಟ್ಟ ಬುಗ್ಗೆಯಂತೆ ತೋರುಗಾಣುತ್ತಿತ್ತು.

ಬಾಹ್ಯದಿ ನಗು ನಗುತ್ತಿತ್ತು
ಅಂತರಾಳದಿ ಹಲ್ಲುಕಚ್ಚಿ ಹೋರಾಟ ನಡೆಸಿತ್ತು
ಜೀವ ಸೆಲೆಗಾಗಿ;
ಮುಂದೆ, ಜೀವ ಜಂತುಗಳ ನಡುವೆ ಸಂಭವಿಸುವ
ಸಮರ ಸಂದರ್ಭವ ಸಾಕ್ಷೀಕರಿಸಿ.

ಫಲಿಸಲಿಲ್ಲ.
ಅಕಾಲದಲಿ ಮುಪ್ಪಡರಿ
ಎಲೆಗಳು ಉದುರಿವೆ;
ಟಿಸಿಲು, ಟಿಸಿಲು ಒಣಗಿ ಮುರಿದು ಬೀಳುತಿವೆ
ಗೆದ್ದಲು ಮುಗಿ ಬಿದ್ದಿವೆ
ಚೆಕ್ಕೆ ತೊಗಲು ಸುಲಿಯುತಿದೆ
ಜೀವ ಜಗದ ಮುಂಬರುವ
ಕರಾಳ ದಿನಗಳ ತೋರು ಬೆರಳಾಗಿ.

ನಿಗೂಢವೆಂದರೆ
ತೆರವುಗೊಳಿಸಿಲ್ಲ
ಹದ್ಹೊಂದು ತನ್ನ ಗೂಡ
ಇಂದಿಗೂ ನಡೆಸಿದೆ ಬಾಳು ಅದರ ಸಂಗಡ
ಪ್ರೇಮಕ್ಕೋ.. ವಿಧಿಯಿಲ್ಲದಕ್ಕೋ.. ಭಂಡತನಕ್ಕೋ…
ಬರೆಯುತ್ತ ವಿನಾಶ ಸೂಚನೆಯ ಪತ್ರ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...