Home / ಕವನ / ಕವಿತೆ / ಸೂಚನೆಯ ಪತ್ರ

ಸೂಚನೆಯ ಪತ್ರ

ಮರ, ನಮ್ಮ ಕೈಮರ
ನಾಗರೀಕರ ಅಗತ್ಯದ ಕುರುಹಾಗಿ
ಹಸಿರು ಛಿಂದಿಯನುಟ್ಟ ಗುಡ್ಡದ ಸನಿಹ
ಹತ್ತಾರು ಮೀಟರು ಅಂತರದಿ
ತೇರಂತೆ ಎತ್ತರಕ್ಕೆ ಬೆಳೆದು ರಾರಾಜಿಸುತ್ತಿತ್ತು.

ನಾವು, ಒತ್ತರಿಕೆ ಗುಣದವರು
ಎಬ್ಬಿಸಿದ ಸಾಲು, ಸಾಲು ಕಾಂಕ್ರೀಟು
ಬೆಟ್ಟ ಗುಡ್ಡಗಳಂತ ಕಟ್ಟಡಗಳು
ರಸ್ತೆ, ಆವರಣ, ತರ ತರ ಕಾಮಗಾರಿಗಳು
ತಂದಿರಲಿಲ್ಲ ಧಕ್ಕೆ, ಸಧ್ಯ !
ಅದರ ಅಸ್ತಿತ್ವಕ್ಕೆ.

ನೆಲೆ ತಪ್ಪಿ ಕಂಗೆಟ್ಟ
ಹದ್ದು, ಹಕ್ಕಿ, ಕ್ರಿಮಿ ಕೀಟಗಳಿಗೆ
ಹಸಿರು ಪ್ರಿಯರಿಗೆ
ಬತ್ತದ ಸಿಹಿ ನೀರ ಪುಟ್ಟ ಬುಗ್ಗೆಯಂತೆ ತೋರುಗಾಣುತ್ತಿತ್ತು.

ಬಾಹ್ಯದಿ ನಗು ನಗುತ್ತಿತ್ತು
ಅಂತರಾಳದಿ ಹಲ್ಲುಕಚ್ಚಿ ಹೋರಾಟ ನಡೆಸಿತ್ತು
ಜೀವ ಸೆಲೆಗಾಗಿ;
ಮುಂದೆ, ಜೀವ ಜಂತುಗಳ ನಡುವೆ ಸಂಭವಿಸುವ
ಸಮರ ಸಂದರ್ಭವ ಸಾಕ್ಷೀಕರಿಸಿ.

ಫಲಿಸಲಿಲ್ಲ.
ಅಕಾಲದಲಿ ಮುಪ್ಪಡರಿ
ಎಲೆಗಳು ಉದುರಿವೆ;
ಟಿಸಿಲು, ಟಿಸಿಲು ಒಣಗಿ ಮುರಿದು ಬೀಳುತಿವೆ
ಗೆದ್ದಲು ಮುಗಿ ಬಿದ್ದಿವೆ
ಚೆಕ್ಕೆ ತೊಗಲು ಸುಲಿಯುತಿದೆ
ಜೀವ ಜಗದ ಮುಂಬರುವ
ಕರಾಳ ದಿನಗಳ ತೋರು ಬೆರಳಾಗಿ.

ನಿಗೂಢವೆಂದರೆ
ತೆರವುಗೊಳಿಸಿಲ್ಲ
ಹದ್ಹೊಂದು ತನ್ನ ಗೂಡ
ಇಂದಿಗೂ ನಡೆಸಿದೆ ಬಾಳು ಅದರ ಸಂಗಡ
ಪ್ರೇಮಕ್ಕೋ.. ವಿಧಿಯಿಲ್ಲದಕ್ಕೋ.. ಭಂಡತನಕ್ಕೋ…
ಬರೆಯುತ್ತ ವಿನಾಶ ಸೂಚನೆಯ ಪತ್ರ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...