ಮಿತಿ

ಪ್ರಿಯ ಸಖಿ,
ಇತ್ತೀಚೆಗೆ ಆತ್ಮೀಯರೊಬ್ಬರಿಗೆ ಅಪಘಾತವಾಗಿ ಸರ್ಕಾರಿ ಆಸ್ಪತ್ರೆಯಲ್ಲಿರುವ ವಿಷಯ ತಿಳಿದು ಅವರನ್ನು ನೋಡಲು ಹೋದೆ. ಆಸ್ಪತ್ರೆಯ ಎಲ್ಲ ವಾರ್ಡುಗಳಲ್ಲೂ ವಿವಿಧ ರೋಗಗಳಿಗಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಾಲು ಕಾಣಿಸಿತು. ನನ್ನ ಪರಿಚಿತರು ಎಲ್ಲೆಂದು ಬಿಳಿ ಯೂನಿಫಾರಂ ಧರಿಸಿದ್ದವರೊಬ್ಬರನ್ನು ಕೇಳಿದರೆ, ಅವರು ಸ್ಥಳದಲ್ಲೇ ಸತ್ತರು ಅನ್ಸುತ್ತೆ ಎಂದು ಬಿಟ್ಟರು! ಇದನ್ನು ಕೇಳಿ ಜೀವ ಬಾಯಿಗೆ ಬಂದಾಯ್ತು. ಆತನ ಪಕ್ಕದಲ್ಲಿದ್ದವರು ತುರ್ತು ಚಿಕಿತ್ಸಾ ವಿಭಾಗಕ್ಕೆ ಹೋಗಿ ವಿಚಾರಿಸಿ ಎಂದು ದಾರಿ ತೋರಿದರು. ಅಲ್ಲಿ ಬಂದು ನೋಡಿದರೆ……..  ಅದೊಂದು ಜೀವಂತ ನರಕ!

ಕೈ ಕತ್ತರಿಸಿದ್ದವರು, ಕಾಲು ಕತ್ತರಿಸಿದ್ದವರು, ತಲೆಗೆ ಏಟು ಬಿದ್ದವರು, ಮೂಳೆ ಮುರಿದವರು, …… ಇತ್ಯಾದಿ ಅಪಘಾತಕ್ಕೊಳಗಾದವರ ಸಾಲು ಮಂಚಗಳು. ಮೃತ್ಯುಲೋಕವನ್ನು ಹೊಕ್ಕು ಬಂದಂತಹಾ ಪ್ರೇತ ಕಳೆಯಾಡುವ ಮುಖಗಳು! ಮಂಚಗಳಲ್ಲೊಂದರಲ್ಲಿ ನನ್ನ ಆತ್ಮೀಯರು! ಆ ಎಲ್ಲ ನೋವಿನಿಂದ ಮುಲುಗುಟ್ಟುವ ಸದ್ದಿನಡಿಯಿಂದಲೇ ಮೂಡಿ ಬಂತೊಂದು ಕರುಳು-ಕಿವುಚುವ ಆರ್ತನಾದ! ಅಬ್ಬಾ! ಅದು ಎಷ್ಟು ಮಾರ್ಮಿಕವಾಗಿತ್ತೆಂದರೆ………. ಸಖಿ, ನಾನದನ್ನು ವರ್ಣಿಸಲಾರೆ. ನೋವನ್ನು ಬಣ್ಣಬಣ್ಣದ ಪದಗಳಿಂದ ವರ್ಣಿಸುತ್ತಾ ನೋವಿನನುಭವವನ್ನು ಸಣ್ಣಗಾಗಿಸಲಾರೆ! ಬಹುಶಃ ಅದನ್ನು ಯಾವ ಕವಿಯೂ ಕವಿತೆಯಾಗಿಸಲಾರ. ಯಾವ ಸಂಗೀತಗಾರನೂ ನೋವು ತುಂಬಿ ಹಾಡಲಾರ, ಯಾವ ಚಿತ್ರಗಾರನೂ ತನ್ನ ಚಿತ್ರ, ಶಿಲ್ಪದಲ್ಲಿ ಚಿತ್ರಿಸಲಾರ. ನಿಜಕ್ಕೂ ಆ ವೇದನೆಯನ್ನು ಯಾವ ಸಮರ್ಥ ನಟನೂ ಅಭಿನಯಿಸಿ ತೋರಿಸಲಾರ. ಆ ಕ್ಷಣದಲ್ಲಿ ಅವ್ಯಕ್ತ ಭಾವವೊಂದು ಮನವನ್ನು ಆವರಿಸಿ ಮಿಕ್ಕಿದ್ದೆಲ್ಲಾ ಮಿಥ್ಯ. ಆ ನೋವು ತುಂಬಿದ ಆರ್ತನಾದವೊಂದೇ ಸತ್ಯ ಎನಿಸಿಬಿಟ್ಟಿತು. ಅತ್ಯಂತ ಸಮರ್ಥ ಕಲಾವಿದ ಕೂಡ ಇದರ ಹತ್ತಿರಕ್ಕೆ ಹೋಗಬಲ್ಲ, ಆ ಭಾವನೆಯೇ ಆಗಲಾರ ಅದು ಕಲಾವಿದನ ಮಿತಿಯೂ ಹೌದು!

ಸಖಿ, ಹಾಗಿದ್ದರೆ ಇಂತಹ ಹೃದ್ಯಭಾವನೆಗಳನ್ನು ಹಿಡಿದಿಡಲು ಯಾವ ಸೃಜನಶೀಲ ಕಲೆಗೂ ಸಾಧ್ಯವಿಲ್ಲವೇ? ಗುರುಗಳೊಬ್ಬರು ಹೇಳುತ್ತಿದ್ದುದು ನೆನಪಾಗುತ್ತದೆ. ಇಲ್ಲಿ ಎಷ್ಟೊಂದು ಕಣ್ಣಿನಿಂದ ನೋಡಲಾಗುವುದಿಲ್ಲ. ಅದನ್ನು ಹೃದಯದಿಂದ ಮಾತ್ರ ಅನುಭವಿಸಲು ಸಾಧ್ಯ. ಪ್ರಿಯ ಸಖಿ, ಯಾವ ಮಾಧ್ಯಮದಲ್ಲೂ ಸಮರ್ಥವಾಗಿ ನಮ್ಮ ಎಲ್ಲ ಭಾವನೆಗಳನ್ನು ಅಭಿವ್ಯಕ್ತಿಸಲು ಸಾಧ್ಯವಾಗದೇ ಸೋಲುತ್ತೇವೆ. ಹಾಗೆ ಸೋತರೂ ಸರಿಯೇ, ಮಾನವನ ಎಲ್ಲ ಭಾವನೆಗಳನ್ನೂ ಹೃದಯದಿಂದ ಅನುಭವಿಸಲೂ ಆಗದಂತೆ ನಾವು ಸೋಲುವುದು ಬೇಡ. ನಾವು ಮಾನವರೆನ್ನುವುದನ್ನು ಎಂದಿಗೂ ಮರೆಯದಿರೋಣ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನೆಗೆ ಮಾತ್ರ ಕಿಟಕಿ ಇದೆ
Next post ಎರಡೆಳೆ ದಾರ

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

cheap jordans|wholesale air max|wholesale jordans|wholesale jewelry|wholesale jerseys