ಯಾರಿದ್ದರೇನಂತೆ

ಯಾರಿದ್ದರೇನಂತೆ
ಯಾರು ಇಲ್ಲದಿರಲೇನಂತೆ
ನಿನಗೆ ನೀನೇ ಸಾಟಿ ಸಖಿ

ಹೂವು ಹೂವಿನಲಿ ನೀನು
ದುಂಬಿ ಆಲಾಪದಲಿ
ನಿನ್ನ ಹೆಸರೇ ಹೇಳುತಿದೆ
ಬರೆದೆ ಎಲೆಗಳ ನರನಾಡಿಗಳಲಿ

ಪ್ರಕೃತಿಯೇ ನೀನು
ವಿಕೃತಿಯೇ ನೀನು
ಋತುಗಾನ ವಿಲಾಸಿನಿ
ಸೌಂದರ್ಯವತಿಯೇ ನೀನು

ಜೀವನದ ಜೀವ ತರಂಗ ನೀನು
ಸಪ್ತ ಸಾಗರವೇ ನೀನು
ಸುಪ್ತಗಾಮಿನಿ ಹಿಮಮಣಿ
ಮಕುಟ ಶೃಂಖಲೆ ನೀನು

ಆಗಸದರ ಮನೆಯ ಒಡತಿ
ಆ ಮೋಡಗಳೇ ರಥ ಕುಂಚಗಳು
ಸೂರ್ಯ ಚಂದ್ರ ನಕ್ಷತ್ರ ತಾರಾ
ವಿಹಂಗಿಣೆ ಸೌಮ್ಯ ರೂಪಿಣಿ

ನಿನ್ನ ಮೌನದ ಗಾನವೇ
ಆವರಿಸಿದೆ ಚಿಲಿಪಿಲಿ ಹಕ್ಕಿ
ಗಳಲಿ ಸಂವತ್ಸರದ ಹಾಡು
ಹಾಡಲಿ ನೆರಳಾಗಿಹೆ ನೀನು ಸಖಿ

ಯಾರು ಮರತರೇನಂತೆ ನಿನ್ನ
ಮರಲಾಗುವುದೇ ನಿನ್ನ ನಿಲುವೂ
ನಿನ್ನ ತ್ಯಾಗ ಬಲಿದಾನ ಫಲವೇ
ನೀನು ಯುಗಗಳೇ ಸಾರಿದೆ ಸಖಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಗತಿ ಅಥವಾ ದಾಸ್ಯವಿಮೋಚನೆ – ೧೩ನೆಯ ಖಂಡ – ಪ್ರಸನ್ನತೆ
Next post ಕುಬ್ಜರು

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys