ಯಾರಿದ್ದರೇನಂತೆ

ಯಾರಿದ್ದರೇನಂತೆ
ಯಾರು ಇಲ್ಲದಿರಲೇನಂತೆ
ನಿನಗೆ ನೀನೇ ಸಾಟಿ ಸಖಿ

ಹೂವು ಹೂವಿನಲಿ ನೀನು
ದುಂಬಿ ಆಲಾಪದಲಿ
ನಿನ್ನ ಹೆಸರೇ ಹೇಳುತಿದೆ
ಬರೆದೆ ಎಲೆಗಳ ನರನಾಡಿಗಳಲಿ

ಪ್ರಕೃತಿಯೇ ನೀನು
ವಿಕೃತಿಯೇ ನೀನು
ಋತುಗಾನ ವಿಲಾಸಿನಿ
ಸೌಂದರ್ಯವತಿಯೇ ನೀನು

ಜೀವನದ ಜೀವ ತರಂಗ ನೀನು
ಸಪ್ತ ಸಾಗರವೇ ನೀನು
ಸುಪ್ತಗಾಮಿನಿ ಹಿಮಮಣಿ
ಮಕುಟ ಶೃಂಖಲೆ ನೀನು

ಆಗಸದರ ಮನೆಯ ಒಡತಿ
ಆ ಮೋಡಗಳೇ ರಥ ಕುಂಚಗಳು
ಸೂರ್ಯ ಚಂದ್ರ ನಕ್ಷತ್ರ ತಾರಾ
ವಿಹಂಗಿಣೆ ಸೌಮ್ಯ ರೂಪಿಣಿ

ನಿನ್ನ ಮೌನದ ಗಾನವೇ
ಆವರಿಸಿದೆ ಚಿಲಿಪಿಲಿ ಹಕ್ಕಿ
ಗಳಲಿ ಸಂವತ್ಸರದ ಹಾಡು
ಹಾಡಲಿ ನೆರಳಾಗಿಹೆ ನೀನು ಸಖಿ

ಯಾರು ಮರತರೇನಂತೆ ನಿನ್ನ
ಮರಲಾಗುವುದೇ ನಿನ್ನ ನಿಲುವೂ
ನಿನ್ನ ತ್ಯಾಗ ಬಲಿದಾನ ಫಲವೇ
ನೀನು ಯುಗಗಳೇ ಸಾರಿದೆ ಸಖಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಗತಿ ಅಥವಾ ದಾಸ್ಯವಿಮೋಚನೆ – ೧೩ನೆಯ ಖಂಡ – ಪ್ರಸನ್ನತೆ
Next post ಕುಬ್ಜರು

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…