ಕುಬ್ಜರು

ನಾವೆಲ್ಲ ಕುಬ್ಜರು
ಮನಸ್ಸು, ಬುದ್ಧಿ, ಭಾವನೆಯಿಂದ
ಚೇತನ, ಚಿಂತನ, ವಿವೇಕದಿಂದ
ನಾವು ವಿಶಿಷ್ಟರಲ್ಲ
ಸಾಮಾನ್ಯರು, ಅದಕೆಂದೆ
ಎಲ್ಲ ಕಾಲದಲ್ಲಿಯು
ಕುಬ್ಜರಿರ ಬೇಕೆಂದೆ
ಲೋಕದ ಬಯಕೆ.
ವಕ್ತಾರರಿಗೆ ಶೋತೃಗಳಾಗಿ
ನೇತಾರರಿಗೆ ಹಿಂಬಾಲಕರಾಗಿ
ಭೋಧಕರಿಗೆ ಪಾಠಕರು
ಅಂದೋಲನಕೆ ಗುಂಪು
ಧರ್ಮಕ್ಕೆ ಭಕ್ತರಾಗಿ,
ಸಂಪ್ರದಾಯಗಳಿಗೆ ಮತಿಮಂದರಾಗಿ
ಆಡಳಿತೆಗೆ ಬಾಬುಗಳು
ಗಿರಣಿಗಳಿಗೆ ಕಾರ್ಮಿಕರಾಗಿ
ತೋಪುಗಳಿಗೆ ಕಾರ್ತೂಸ್
ಪಕ್ಷದೊಡೆಯರಿಗೆ ಯಸ್‌ಮೆನ್
ಆಳುವವರಿಗೆ ಗುಲಾಮರಾಗಿ
ವ್ಯವಸ್ಥೆಗೆ ಭ್ರಷ್ಟರು
ಡೆಮೊಕ್ರಸಿಗೆ ಮಿಡಿಯೊಕರು
ಮತವಾದಿಗಳಿಗೆ ಮೂರ್ಖರು
ಪಾರ್ಟಿಯ ಅಂಧ ಅನುಯಾಯಿಗಳಾಗಿ
ನಾವೆಲ್ಲ
ಯುಗ ಯುಗದಿಂದ
ಅವರಿಗಾಗಿಯೆ ಬದುಕಿ ಬಂದಿದ್ದೇವೆ
ಕ್ರೀತದಾಸರು ನಾವು
ಇತಿಹಾಸದ ಚಿಂದಿ ಹೊಲಿಯುತ್ತೇವೆ
ಇತಿಹಾಸ ಅವರದು
ನಾವು ಶಾಯಿ ಮಾತ್ರ
ವಿಜಯ ಅವರದು
ನಾವು ಗಾಯಾಳುಗಳು
ಎಂದೆಂದಿಗೂ
ಗಾಯಗೊಂಡ ಸಿಪಾಯಿಯಾಗಿ
ಆ ದೈತ್ಯರ ಸೇವೆಗೈಯುತ
ಬದುಕ ಬೇಕಾಗಿದೆ
ಕುಬ್ಜರಾಗಿ.
*****
ಮೂಲ: ಗಿರಿಜಾ ಕುಮಾರ ಮಾಥುರ್
(ಹಿಂದಿ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರಿದ್ದರೇನಂತೆ
Next post ಕೃಷಿಯ ಬಲಿಕೊಟ್ಟೇನು ಕೈಗಾರಿಕೆಯೋ?

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…