ನಾವೆಲ್ಲ ಕುಬ್ಜರು
ಮನಸ್ಸು, ಬುದ್ಧಿ, ಭಾವನೆಯಿಂದ
ಚೇತನ, ಚಿಂತನ, ವಿವೇಕದಿಂದ
ನಾವು ವಿಶಿಷ್ಟರಲ್ಲ
ಸಾಮಾನ್ಯರು, ಅದಕೆಂದೆ
ಎಲ್ಲ ಕಾಲದಲ್ಲಿಯು
ಕುಬ್ಜರಿರ ಬೇಕೆಂದೆ
ಲೋಕದ ಬಯಕೆ.
ವಕ್ತಾರರಿಗೆ ಶೋತೃಗಳಾಗಿ
ನೇತಾರರಿಗೆ ಹಿಂಬಾಲಕರಾಗಿ
ಭೋಧಕರಿಗೆ ಪಾಠಕರು
ಅಂದೋಲನಕೆ ಗುಂಪು
ಧರ್ಮಕ್ಕೆ ಭಕ್ತರಾಗಿ,
ಸಂಪ್ರದಾಯಗಳಿಗೆ ಮತಿಮಂದರಾಗಿ
ಆಡಳಿತೆಗೆ ಬಾಬುಗಳು
ಗಿರಣಿಗಳಿಗೆ ಕಾರ್ಮಿಕರಾಗಿ
ತೋಪುಗಳಿಗೆ ಕಾರ್ತೂಸ್
ಪಕ್ಷದೊಡೆಯರಿಗೆ ಯಸ್ಮೆನ್
ಆಳುವವರಿಗೆ ಗುಲಾಮರಾಗಿ
ವ್ಯವಸ್ಥೆಗೆ ಭ್ರಷ್ಟರು
ಡೆಮೊಕ್ರಸಿಗೆ ಮಿಡಿಯೊಕರು
ಮತವಾದಿಗಳಿಗೆ ಮೂರ್ಖರು
ಪಾರ್ಟಿಯ ಅಂಧ ಅನುಯಾಯಿಗಳಾಗಿ
ನಾವೆಲ್ಲ
ಯುಗ ಯುಗದಿಂದ
ಅವರಿಗಾಗಿಯೆ ಬದುಕಿ ಬಂದಿದ್ದೇವೆ
ಕ್ರೀತದಾಸರು ನಾವು
ಇತಿಹಾಸದ ಚಿಂದಿ ಹೊಲಿಯುತ್ತೇವೆ
ಇತಿಹಾಸ ಅವರದು
ನಾವು ಶಾಯಿ ಮಾತ್ರ
ವಿಜಯ ಅವರದು
ನಾವು ಗಾಯಾಳುಗಳು
ಎಂದೆಂದಿಗೂ
ಗಾಯಗೊಂಡ ಸಿಪಾಯಿಯಾಗಿ
ಆ ದೈತ್ಯರ ಸೇವೆಗೈಯುತ
ಬದುಕ ಬೇಕಾಗಿದೆ
ಕುಬ್ಜರಾಗಿ.
*****
ಮೂಲ: ಗಿರಿಜಾ ಕುಮಾರ ಮಾಥುರ್
(ಹಿಂದಿ)
Related Post
ಸಣ್ಣ ಕತೆ
-
ಜೋತಿಷ್ಯ
ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…
-
ದಾರಿ ಯಾವುದಯ್ಯಾ?
ಮೂವತೈದು ವರ್ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…
-
ದೇವರು
ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…
-
ಅಮ್ಮ
‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…
-
ಇಬ್ಬರು ಹುಚ್ಚರು
ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…