ಝುಳು ಝುಳು

ಝುಳು ಝುಳು
ನಡು ಬಳುಕಿಸಿ
ಬಂದಳು ನೀರೆ
ಯಾರಿವಳು ಹೇಳೆ ||

ಮೌನದಿ ತೂಗುತ
ಜಾಲವ ಬೀಸುತ
ಚಂಚಲೆ ಇವಳು
ಯಾರಿವಳು ಹೇಳೆ ||

ವೈಯಾರಿ ಇವಳು
ಗಯ್ಯಾಳಿ ಇವಳು
ಮರ್ಮವ ತಿಳಿ
ಯಾರಿವಳು ಹೇಳೆ ||

ಊರ ಹೊರಗೆ
ಊರನಾಳ್ವಳು
ಆಗರ್ಭ ಸಂಜಾತೆ
ಇವಳೆ ಇವಳು ಕೇಳೆ ||

ಪಾಪದ ಕೂಪದ
ಕರ್ಮವ ನೀಗುವ
ಪುಣ್ಯವಂತೆ ಇವಳು
ಬಲ್ಲೆಯೇನೆ ಸಖಿ ||

ಜಾತಿ ನೀತಿ ಭೇದ
ಇಲ್ಲದ ಬಾಲೆ ಇವಳು
ಜಡದಲಿ ಹಾಯುವ
ಶೋಡಶಿ ಇವಳೇ ಸಖಿ… ||

ಮಾಂತ್ರಿಕಳಿವಳು
ತಾಂತ್ರಿಕಳಿವಳು
ಮನವ ಸೆಳೆವ ನೀರೇ
ಮನೋಹರಿ ಕೇಳೆ ಸಖಿ ||

ಮಂದಗಾಯಿನಿ
ಗುಪ್ತಗಾಮಿನಿ
ಸಂಗೀತ ದಾಯಿನಿ
ರಸಿಕಳಿವಳು ಸಖಿ… ||

ಗಂಗೆ ತುಂಗೆ ಭದ್ರೆ
ಕಾವೇರಿ ಕೃಷ್ಣೆ
ವಿಶ್ವರೂಪ ಇವಳದು
ವಿಶ್ವಾಂಕಿತ ಸುಂದರಿ ಸಖಿ ||

ಹಸಿರು ಉಸಿರಿನ
ದಾಹವ ನೀಗುತ
ಮನುಜ ಮತದ
ವಿಶ್ವದಾತೆ ಮಾಳ್ವಿಕೆ ಸಖಿ
ಇವಳು ಕೇಳೆ…||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಗತಿ ಅಥವಾ ದಾಸ್ಯವಿಮೋಚನೆ – ೭ನೆಯ ಖಂಡ – ಅನನ್ಯಗತಿಕತ್ವವೂ, ಸಂಕಲ್ಪಶಕ್ತಿಯೂ
Next post ಮಳೆ

ಸಣ್ಣ ಕತೆ

  • ತಿಮ್ಮರಯಪ್ಪನ ಕಥೆ

    ರಂಗಣ್ಣ ಎರಡು ತಿಂಗಳು ಕಾಲ ರಜ ತೆಗೆದು ಕೊಂಡು ಬೆಂಗಳೂರಿಗೆ ಬಂದು ವಾಸಮಾಡುತ್ತಿದ್ದನು. ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ ಮುಸುರುವ ಸೊಳ್ಳೆಗಳ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…