ಕನ್ನಡಿಗ

ಹಸಿರು ಪೈರು ನಗುವ ನೆಲದಲಿ
ನೇಗಿಲ ಹೊತ್ತ ರೈತನಂತೆ
ಕಚ್ಚೆ ಕಟ್ಟಿ ತಿಲಕವಿಟ್ಟು
ಧೀರ ನೀನಾಗಬೇಕು ಕನ್ನಡಿಗ ||

ಕಳೆಯ ತೆಗೆದು ಸ್ವಚ್ಛವಾದ
ಹೊಲದ ಪರಿಯು ನಿನ್ನ ಮನಸು
ತಾಯ ಸೇವೆ ಮಾಡಲೆಂದು ಹೂವಾಗಿ
ಅಣಿಯಗೊಳಿಸು ಕನ್ನಡಿಗ ||

ನಾಡ ಮಣ್ಣ ಬಸಿರಿನಲ್ಲಿ
ಹುಟ್ಟಿದ ನೀನು ಮುಂದೆ ಬೆಳೆದು
ತಾಯಿ ನುಡಿಯ ಉಳಿಸಿ ಬೆಳೆಸಿ
ಧೀರ ನೀನಾಗಬೇಕು ಕನ್ನಡಿಗ ||

ಪಂಪ ರನ್ನ ಕುಮಾರ
ವ್ಯಾಸರ | ನೆಲ ಕಣ್ಣು
ನೀನು ಅವರ ಮನದ
ದೀವಿಗೆ ನೀನಾಗಬೇಕು ಕನ್ನಡಿಗ ||

ಸಾವಿರ ಸಾವಿರ ವರ್ಷಗಳ
ಇತಿಹಾಸ ನಮ್ಮದು
ಅದರ ಕಣಕಣದಲಿ
ಬೆರೆತ ಭಾವದುಸಿರು ನೀನಾಗಬೇಕು ಕನ್ನಡಿಗ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಗತಿ ಅಥವಾ ದಾಸ್ಯವಿಮೋಚನೆ – ೯ನೆಯ ಖಂಡ – ನಿರಾಶಾಮಯ ಆಶಾ
Next post ಹಿಮಗಾನ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…