ಕನ್ನಡಿಗ

ಹಸಿರು ಪೈರು ನಗುವ ನೆಲದಲಿ
ನೇಗಿಲ ಹೊತ್ತ ರೈತನಂತೆ
ಕಚ್ಚೆ ಕಟ್ಟಿ ತಿಲಕವಿಟ್ಟು
ಧೀರ ನೀನಾಗಬೇಕು ಕನ್ನಡಿಗ ||

ಕಳೆಯ ತೆಗೆದು ಸ್ವಚ್ಛವಾದ
ಹೊಲದ ಪರಿಯು ನಿನ್ನ ಮನಸು
ತಾಯ ಸೇವೆ ಮಾಡಲೆಂದು ಹೂವಾಗಿ
ಅಣಿಯಗೊಳಿಸು ಕನ್ನಡಿಗ ||

ನಾಡ ಮಣ್ಣ ಬಸಿರಿನಲ್ಲಿ
ಹುಟ್ಟಿದ ನೀನು ಮುಂದೆ ಬೆಳೆದು
ತಾಯಿ ನುಡಿಯ ಉಳಿಸಿ ಬೆಳೆಸಿ
ಧೀರ ನೀನಾಗಬೇಕು ಕನ್ನಡಿಗ ||

ಪಂಪ ರನ್ನ ಕುಮಾರ
ವ್ಯಾಸರ | ನೆಲ ಕಣ್ಣು
ನೀನು ಅವರ ಮನದ
ದೀವಿಗೆ ನೀನಾಗಬೇಕು ಕನ್ನಡಿಗ ||

ಸಾವಿರ ಸಾವಿರ ವರ್ಷಗಳ
ಇತಿಹಾಸ ನಮ್ಮದು
ಅದರ ಕಣಕಣದಲಿ
ಬೆರೆತ ಭಾವದುಸಿರು ನೀನಾಗಬೇಕು ಕನ್ನಡಿಗ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಗತಿ ಅಥವಾ ದಾಸ್ಯವಿಮೋಚನೆ – ೯ನೆಯ ಖಂಡ – ನಿರಾಶಾಮಯ ಆಶಾ
Next post ಹಿಮಗಾನ

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

cheap jordans|wholesale air max|wholesale jordans|wholesale jewelry|wholesale jerseys