Home / ಕವನ / ಅನುವಾದ / ಹಿಮಗಾನ

ಹಿಮಗಾನ

ಸೀಮಾಂತ ಪ್ರದೇಶದಲಿ ಕರಗುವ
ಶಿಲ್ಪವ ಕಂಡೆ ನಾನು
ಸರ್ವದೂರದಲಿ ಹಿಮ ಪ್ರತಿಮೆ
ಯಾತನಾಮಯ ಹಿಮಗಂಧ ಸಂಗೀತ
ಅಗಾಧ ಹಿಮ
ಮಾಯಾ ಮಹಿಮೆ.
ಉದುರುವ ಕಲೆ ಶಿಲ್ಪಕೆ ಸಿದ್ಧಿಸಿತೆಂತು
ಶುಭ್ರವಿಭೋರ ಕಣ ಸ್ಪಂದನ
ರೆಪ್ಪೆ ತೆರವಾದಾಗ
ಹರಡಿದ ವಿಹಗಗಣ
ಇನ್ನೂ ನನಗೆ ಹೊಳೆಯದಿರೆ
ರೆಪ್ಪೆಯಿಲ್ಲದ ದೃಷ್ಟಿಯನೀಗ
ಈ ಹಿಮದಲ್ಲಿ ತುಂಬಿ ಬಿಡಲೆ.
ನೋಡುವವು ಬಹುಶ
ತಳಮಳಿಸುವ ಚಿಟ್ಟೆಯ ಮುಖ ಶೋಧಿಸಿ
ಸೀಸ ಹಣಗಳಲಿ ನೋವಿನ
ಹಿಮಪೂರ್ಣಾಲಯ ಮರೆಸಿ
ಸುರಕ್ಷಿತವಾಗಿ ಅಡಗಿಸಿ ಇನ್ನೂ
ನನ್ನ ಕಣ್ಣಗೊಂಬೆಯಲಿ ತೂಗುವುದು.
ಹಗುರಗಾಳಿಯ ಲಯಕ್ಕೆ
ನನ್ನ ಸಂದರ್ಭೋಚಿತ
ಅಸ್ತಿತ್ವದಿಂದ
ಹೇಗೆ ಕಳೆಯಿತು
ಗ್ರೇಸನ ಪ್ರಾರ್ಥನೆಯ ಚಂದ್ರಹಾಸ
ಸಾಯಂಕಾಲ ಚಂದ್ರೋತ್ಸವದಿಂದ
ನಿನಗೆ ಮೆಚ್ಚಿದ ಒಂದು
ಅಪಾರ ಭಾವ ಸತ್ಯ
ಬಹುಶ…..
ಬಹುಶ ಇನ್ನೂ ಕರಗುವ ಹಿಮಕಣ
ಕಣ್ಣಗೊಂಬೆಯಲ್ಲಿ
ಸರ್ವತ್ರ ಉದುರುವ
ಈ ಹಿಮದಾತಂಕಗಾನ
ದೂರದ ಶಾಪದ ನೋವಿನ ಗೀತ
ನನಗಿದು ಶಾಪ ವ್ಯಾಕುಲ ವರದಾನ
ನಿನ್ನ ಮನದಂತಹ
ನನಗೆಂದೂ ಹೊಂದಿಕೆಯಾಗದ ಕವನ.
*****
ಮೂಲ: ನೀಲಿಮಾ ಮೋಡಕ್
(ಮರಾಠಿ)

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...