ಹಿಮಗಾನ

ಸೀಮಾಂತ ಪ್ರದೇಶದಲಿ ಕರಗುವ
ಶಿಲ್ಪವ ಕಂಡೆ ನಾನು
ಸರ್ವದೂರದಲಿ ಹಿಮ ಪ್ರತಿಮೆ
ಯಾತನಾಮಯ ಹಿಮಗಂಧ ಸಂಗೀತ
ಅಗಾಧ ಹಿಮ
ಮಾಯಾ ಮಹಿಮೆ.
ಉದುರುವ ಕಲೆ ಶಿಲ್ಪಕೆ ಸಿದ್ಧಿಸಿತೆಂತು
ಶುಭ್ರವಿಭೋರ ಕಣ ಸ್ಪಂದನ
ರೆಪ್ಪೆ ತೆರವಾದಾಗ
ಹರಡಿದ ವಿಹಗಗಣ
ಇನ್ನೂ ನನಗೆ ಹೊಳೆಯದಿರೆ
ರೆಪ್ಪೆಯಿಲ್ಲದ ದೃಷ್ಟಿಯನೀಗ
ಈ ಹಿಮದಲ್ಲಿ ತುಂಬಿ ಬಿಡಲೆ.
ನೋಡುವವು ಬಹುಶ
ತಳಮಳಿಸುವ ಚಿಟ್ಟೆಯ ಮುಖ ಶೋಧಿಸಿ
ಸೀಸ ಹಣಗಳಲಿ ನೋವಿನ
ಹಿಮಪೂರ್ಣಾಲಯ ಮರೆಸಿ
ಸುರಕ್ಷಿತವಾಗಿ ಅಡಗಿಸಿ ಇನ್ನೂ
ನನ್ನ ಕಣ್ಣಗೊಂಬೆಯಲಿ ತೂಗುವುದು.
ಹಗುರಗಾಳಿಯ ಲಯಕ್ಕೆ
ನನ್ನ ಸಂದರ್ಭೋಚಿತ
ಅಸ್ತಿತ್ವದಿಂದ
ಹೇಗೆ ಕಳೆಯಿತು
ಗ್ರೇಸನ ಪ್ರಾರ್ಥನೆಯ ಚಂದ್ರಹಾಸ
ಸಾಯಂಕಾಲ ಚಂದ್ರೋತ್ಸವದಿಂದ
ನಿನಗೆ ಮೆಚ್ಚಿದ ಒಂದು
ಅಪಾರ ಭಾವ ಸತ್ಯ
ಬಹುಶ…..
ಬಹುಶ ಇನ್ನೂ ಕರಗುವ ಹಿಮಕಣ
ಕಣ್ಣಗೊಂಬೆಯಲ್ಲಿ
ಸರ್ವತ್ರ ಉದುರುವ
ಈ ಹಿಮದಾತಂಕಗಾನ
ದೂರದ ಶಾಪದ ನೋವಿನ ಗೀತ
ನನಗಿದು ಶಾಪ ವ್ಯಾಕುಲ ವರದಾನ
ನಿನ್ನ ಮನದಂತಹ
ನನಗೆಂದೂ ಹೊಂದಿಕೆಯಾಗದ ಕವನ.
*****
ಮೂಲ: ನೀಲಿಮಾ ಮೋಡಕ್
(ಮರಾಠಿ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡಿಗ
Next post ಬೇಡದುದನೆಳೆದು ಕೊಂಡೊಡಿನ್ನೇನು?

ಸಣ್ಣ ಕತೆ

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…