Home / ಕವನ / ಕವಿತೆ / ಹಸಿವು-ಮೇವು

ಹಸಿವು-ಮೇವು

ಬಡವನ ಹೆಂಡತಿ
ಒಡೆದ ಮಡಕೆಯ ಬಾಳು
ಸೋರಿ ಹೋಗುವ ಸುಖ
ಹೆಂಗೆ ತೆಡೆದಾಳೊ ತಾಯಿ
ಹೆಂಗೆ ಪಡೆದಾಳೊ?

ಒಡೆಯನ ಒಡಲಿಗೆ
ಜೀತಗಾರನು ಗಂಡ
ಸಂಜೀಕೆ ಬಂದಾನು
ಹೊತ್ತು ತಂದಾನು
ಗೊಟಕೆನ್ನುವ ಮಕ್ಕಳಿಗೆ
ಗುಟುಕು ಕೊಟ್ಟಾನು.

ಬಯಕೆ ಬಾಗಿಲ ಬಳಿ ತವಕದ ತವರು
ಸೀರೆ ತುಂಬಽ ಕಣ್ಣು ಹರಿದ ಆಸೆ
ನಿಟ್ಟುಸಿರು ತುಂಬಿ ನಿಟ್ಟುಬಿದ್ದ ಸೂರು
ನೆಲ ಕಚ್ಚಿ ಮಕ್ಕಳು ಜೀವ ಹಿಡಿದಾವೊ

ಹೊಟ್ಟೆ ಹೊಕ್ಕು ನಿಂತ ಹಸಿವಿನ ಅಬ್ಬರ
‘ಬಲಿ ಕೊಡುವಿರೊ ಇಲ್ಲ ತಲೆ ಕೊಡುವಿರೊ?’
ಹೊತ್ತೇಸು ಆದರೂ ಗಂಡ ಬರಲಿಲ್ಲ
ಬಾಯ್ತೆರೆದ ಹಸಿವಿಗೆ ಬಲಿಯ ತರಲಿಲ್ಲ.

ಬಡವನ ಹೆಂಡತಿ, ಕತ್ತಲ ಭೀತಿ
ನಿದ್ದೆ ಬೀದಿಗೆ ಬೆಳಕ ಚೆಲ್ಲವ್ಳೆ
ಗಂಡನ ಬರವಿಗೆ ಕಾದು ನಿಂತವ್ಳೆ

ಬಡಗಂಡ ಬಂದಾಗ
ಒಳಗೆ ಕಾಲಿಟ್ಟಾಗ
ಬರದ ಭೂಮಿಗೆ ನೆರೆ ಬಂತು

ಉದ್ದ ನಾಲಗೆ ಚಾಚಿ
ಹದ್ದು ಮೀರಿತು ಹಸಿವು
ಬುಡ್ಡಿ ಬೆಳಕಾಗೆ ನರಳಿ ನೋಡ್ಯಾಳೊ

ಹೊತ್ತು ತಂದಿದ್ದ ಮೈ ತುಂಬ ಮನ ತುಂಬ
ಹೆಂಡತಿ ಮಕ್ಕಳಿಗೆ ಹಂಚಿದರೂ ಉಳಿದೀತು
ದಿನಾ ಕುಂತುಂಡರೂ ಒರತೆ ಉಕ್ಕಿತು
ಒಡೆಯನ ಕೊಡುಗೆ ಬಾಸುಂಡೆ ಮೇವು
ಸಾಯಲಾರದ ಹಿಂಸೆ, ಬೆಳೆವ ನೋವು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...