Home / ಕವನ / ಕವಿತೆ / ಹಸಿವು-ಮೇವು

ಹಸಿವು-ಮೇವು

ಬಡವನ ಹೆಂಡತಿ
ಒಡೆದ ಮಡಕೆಯ ಬಾಳು
ಸೋರಿ ಹೋಗುವ ಸುಖ
ಹೆಂಗೆ ತೆಡೆದಾಳೊ ತಾಯಿ
ಹೆಂಗೆ ಪಡೆದಾಳೊ?

ಒಡೆಯನ ಒಡಲಿಗೆ
ಜೀತಗಾರನು ಗಂಡ
ಸಂಜೀಕೆ ಬಂದಾನು
ಹೊತ್ತು ತಂದಾನು
ಗೊಟಕೆನ್ನುವ ಮಕ್ಕಳಿಗೆ
ಗುಟುಕು ಕೊಟ್ಟಾನು.

ಬಯಕೆ ಬಾಗಿಲ ಬಳಿ ತವಕದ ತವರು
ಸೀರೆ ತುಂಬಽ ಕಣ್ಣು ಹರಿದ ಆಸೆ
ನಿಟ್ಟುಸಿರು ತುಂಬಿ ನಿಟ್ಟುಬಿದ್ದ ಸೂರು
ನೆಲ ಕಚ್ಚಿ ಮಕ್ಕಳು ಜೀವ ಹಿಡಿದಾವೊ

ಹೊಟ್ಟೆ ಹೊಕ್ಕು ನಿಂತ ಹಸಿವಿನ ಅಬ್ಬರ
‘ಬಲಿ ಕೊಡುವಿರೊ ಇಲ್ಲ ತಲೆ ಕೊಡುವಿರೊ?’
ಹೊತ್ತೇಸು ಆದರೂ ಗಂಡ ಬರಲಿಲ್ಲ
ಬಾಯ್ತೆರೆದ ಹಸಿವಿಗೆ ಬಲಿಯ ತರಲಿಲ್ಲ.

ಬಡವನ ಹೆಂಡತಿ, ಕತ್ತಲ ಭೀತಿ
ನಿದ್ದೆ ಬೀದಿಗೆ ಬೆಳಕ ಚೆಲ್ಲವ್ಳೆ
ಗಂಡನ ಬರವಿಗೆ ಕಾದು ನಿಂತವ್ಳೆ

ಬಡಗಂಡ ಬಂದಾಗ
ಒಳಗೆ ಕಾಲಿಟ್ಟಾಗ
ಬರದ ಭೂಮಿಗೆ ನೆರೆ ಬಂತು

ಉದ್ದ ನಾಲಗೆ ಚಾಚಿ
ಹದ್ದು ಮೀರಿತು ಹಸಿವು
ಬುಡ್ಡಿ ಬೆಳಕಾಗೆ ನರಳಿ ನೋಡ್ಯಾಳೊ

ಹೊತ್ತು ತಂದಿದ್ದ ಮೈ ತುಂಬ ಮನ ತುಂಬ
ಹೆಂಡತಿ ಮಕ್ಕಳಿಗೆ ಹಂಚಿದರೂ ಉಳಿದೀತು
ದಿನಾ ಕುಂತುಂಡರೂ ಒರತೆ ಉಕ್ಕಿತು
ಒಡೆಯನ ಕೊಡುಗೆ ಬಾಸುಂಡೆ ಮೇವು
ಸಾಯಲಾರದ ಹಿಂಸೆ, ಬೆಳೆವ ನೋವು.
*****

Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...